‘ಗುಡ್ಡೆ ಸಾಹಿತ್ಯ ಪರಿಷತ್ ಪರೀಕ್ಷೇಲಿ ಫೇಲಾದ’ ಇದು ವರ್ತಮಾನ ಕಾಲನೋ ಭವಿಷ್ಯತ್ ಕಾಲನೋ?’
‘ಲೇಯ್ ತೆಪರ, ಕಾಲ ಯಾವುದರೆ ಆಗರ್ಲಿ, ನಂಗೆ ಕನ್ನಡ ಮಾತಾಡಕೆ ಬರ್ತತೋ ಇಲ್ಲೋ? ನಿಂಗದು ಅರ್ಥ ಆಗ್ತತೋ ಇಲ್ಲೋ? ಅಷ್ಟು ಸಾಕು. ಕನ್ನಡ ಉಳಿದಿರೋದು ನಮ್ಮಂಥ ದಡ್ಡರಿಂದ. ನಿಮ್ಮಂಥ ಟಸ್ಸು ಪುಸ್ಸು ಡಿಗ್ರಿ ಮಂದಿಯಿಂದ ಅಲ್ಲ. ಸುಮ್ನೆ ಮೆಂಬರ್ಶಿಪ್ ಕೊಡ್ಸು...’ ಗುಡ್ಡೆಗೆ ಸಿಟ್ಟು ಬಂತು.
‘ಅಪ್ಪಣೆ ಗುಡ್ಡೆ ಮಹಾಪ್ರಭು’ ಎಂದ ತೆಪರೇಸಿ. ಇಬ್ಬರೂ ಒಟ್ಟಿಗೇ ನಕ್ಕರು.