‘ಸಾ... ದಾವಣಗೆರೇಲಿ ಇಸ್ವ ಕನ್ನಡ ಸಾಹಿತ್ಯ ಸಮ್ಮೇಳನ ಮಾಡ್ತಾರಂತೆ. ಕವಿಗೋಷ್ಠಿ ಅಧ್ಯಕ್ಷತೆಗೆ ನನ್ ಹೆಸರು ರೆಕ್ಮಂಡ್ ಮಾಡಿ ಸಾ...’ ಅಗ್ರ ಉಗ್ರ ಕವಿ ತೆಪರೇಸಿ ಎಮ್ಮೆಲ್ಲೆ ಸಣ್ಣೀರಪ್ಪನ ಹತ್ತಿರ ಬೇಡಿಕೆ ಸಲ್ಲಿಸಿದ.
‘ಲೇಯ್... ಅದು ಪರಿಷತ್ ಅಧ್ಯಕ್ಷರು, ದೊಡ್ಡ ದೊಡ್ಡ ಸಾಯಿತಿಗಳು ಮಾಡೋದು, ನಾವಲ್ಲ...’ ಎಮ್ಮೆಲ್ಲೆ ಅಡ್ಡಡ್ಡ ತಲೆಯಾಡಿಸಿದರು.
‘ಪರಿಷತ್ ಅಧ್ಯಕ್ಷರು ಆಯ್ಕೆ ಮಾಡ್ತಾರೆ ಅಂದ್ರೆ ಹೆಂಗೆ ಸಾ? ಅವರನ್ನ ಆಯ್ಕೆ ಮಾಡಿದ್ದು ನಾವಲ್ವ? ನಮ್ ಪಕ್ಷ ಅಲ್ವ? ನಿಮ್ ಮಾತು ಹೆಂಗೆ ತೆಗೆದುಹಾಕ್ತಾರೆ?’