<p>‘ಸ್ವೀಟ್ ತಗೊಳಿ ಸಾರ್...’ ಕೈಗೆ ಕೆಂಪು ದಾರ ಕಟ್ಟಿಕೊಂಡು, ಹಣೆಗೆ ತಿಲಕ ಇಟ್ಟುಕೊಂಡು ಬಂದ ಮುದ್ದಣ್ಣ, ಮೈಸೂರ್ಪಾಕ್ ಕೊಟ್ಟ.</p>.<p>‘ಏನ್ ವಿಶೇಷ ಮುದ್ದಣ್ಣ’ ಸ್ವೀಟ್ ತಿನ್ನುತ್ತಲೇ ಕೇಳಿದ ವಿಜಿ. </p>.<p>‘ಒಂದೆರಡು ದಿನಗಳಲ್ಲೇ ನಮ್ ಸಾಹೇಬ್ರು ಸಿಎಂ ಆಗ್ತಾರೆ ಸಾರ್’.</p>.<p>‘ಆರು ತಿಂಗಳಿಂದ ಇದನ್ನೇ ಹೇಳ್ತಿದೀರಿ, ಗ್ಯಾರಂಟಿ ಆಗಲ್ಲ’.</p>.<p>‘ಏನ್ ಸಾರ್! ಗ್ಯಾರಂಟಿಗಳು ಇರಲ್ಲ ಅಂದ್ರಾ?’</p>.<p>‘ಗ್ಯಾರಂಟಿಗಳದ್ದು ಗೊತ್ತಿಲ್ಲಪ್ಪ, ರಾಜ್ಯದಲ್ಲಿ ಸಿಎಂ ಚೇಂಜ್ ಆಗ್ತಾರೋ ಇಲ್ಲವೋ ಡೌಟು ಅಂದೆ’.</p>.<p>‘ಚೇಂಜ್ ಆಗೇ ಆಗ್ತಾರೆ ಸಾರ್. ಇನ್ಮೇಲೆ ರಾಜ್ಯದಲ್ಲಿ ಬದಲಾವಣೆ ಪರ್ವ ಶುರುವಾಗುತ್ತೆ, ನೋಡ್ತಾ ಇರಿ’.</p>.<p>‘ಓಹೋ, ಅಷ್ಟೊಂದು ಬದಲಾವಣೆ ತರ್ತಾರಾ?’</p>.<p>‘ಹೂಂ ಸಾರ್, ಬದಲಾವಣೆ ಆಗಲೇಬೇಕಲ್ಲ, ಸಚಿವ ಸಂಪುಟ ಬದಲಾಗಬೇಕು, ಶಾಸಕರು ಬಣ ಬದಲಾಯಿಸಬೇಕು, ಸಲಹೆಗಾರರು ಚೇಂಜ್ ಆಗಬೇಕು... ಜಾಹೀರಾತುಗಳಲ್ಲಿ ನಮ್ ಸಾಹೇಬ್ರುದು ಒಬ್ಬರದೇ ಫೋಟೊ ಬರಬೇಕು’.</p>.<p>‘ಓಹ್, ನೀನು ಈ ಬದಲಾವಣೆ ಹೇಳ್ದಾ... ಅದ್ ಸರಿ, ನಿನಗ್ಯಾಕಿಷ್ಟು ಖುಷಿ?’</p>.<p>‘ಇದೆಲ್ಲ ಬದಲಾದ ಮೇಲೆ, ನಿಗಮ–ಮಂಡಳಿ ಅಧ್ಯಕ್ಷರು ಬದಲಾಗಲ್ವ ಸಾರ್, ಆಗ ನನಗೊಂದು ಚಾನ್ಸ್ ಸಿಗಲ್ವ ಸಾರ್?’ ಎಂದು ವಿಜಿ ಆಶಾಭಾವದಿಂದ ಕೇಳಿದ.</p>.<p>‘ಓಹೊಹೊ ದೂರಾಲೋಚನೆ... ಅದಕ್ಕೆ ಈಗಿರೋರು ಹುದ್ದೆ ತ್ಯಾಗ ಮಾಡಿ, ರಾಜ್ಯಸಭೆಯ ರಾಜ ಆಗಬಹುದು ಅಥವಾ ನಿಮ್ಮ ಸಾಹೇಬ್ರಿಗೇ ನೀನೇ ತ್ಯಾಗರಾಜ ಆಗು ಅಂತ ಹೇಳಿ, ಅವರೇ ರಾಜ್ಯದ ರಾಜರಾಗಿ ಮುಂದುವರಿಯಬಹುದು...’</p>.<p>‘ಅಯ್ಯೋ, ಹಿಂಗೂ ಆಗಬಹುದು ಅಂತೀರಾ?’</p>.<p>‘ಹೂಂ ಮತ್ತೆ, ಈಗಿರೋರು ರಾಜ್ಯಸಭೆಗೆ ಏನಾದರೂ ಹೋದರೆ, ಒಂದು ಸಮನ್ವಯ ಸಮಿತಿ ಮಾಡಿ, ಮೈಸೂರಿನ ಮರಿ ಹುಲೀನ ಅದರ ಅಧ್ಯಕ್ಷನನ್ನಾಗಿ ಮಾಡಿದ್ರೂ ಮಾಡಬಹುದು...’</p>.<p>‘ಏಯ್ ಸುಮ್ನಿರಿ ಸಾರ್, ಬರೀ ಅಪಶಕುನ ಮಾತಾಡ್ತೀರಿ. ಹಂಗೆಲ್ಲ ಏನೂ ಆಗಲ್ಲ’ ಎಂದು ಸಿಹಿ ಡಬ್ಬಿ ಎತ್ತಿಕೊಂಡು ಹೊರಹೋದ ಮುದ್ದಣ್ಣ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಸ್ವೀಟ್ ತಗೊಳಿ ಸಾರ್...’ ಕೈಗೆ ಕೆಂಪು ದಾರ ಕಟ್ಟಿಕೊಂಡು, ಹಣೆಗೆ ತಿಲಕ ಇಟ್ಟುಕೊಂಡು ಬಂದ ಮುದ್ದಣ್ಣ, ಮೈಸೂರ್ಪಾಕ್ ಕೊಟ್ಟ.</p>.<p>‘ಏನ್ ವಿಶೇಷ ಮುದ್ದಣ್ಣ’ ಸ್ವೀಟ್ ತಿನ್ನುತ್ತಲೇ ಕೇಳಿದ ವಿಜಿ. </p>.<p>‘ಒಂದೆರಡು ದಿನಗಳಲ್ಲೇ ನಮ್ ಸಾಹೇಬ್ರು ಸಿಎಂ ಆಗ್ತಾರೆ ಸಾರ್’.</p>.<p>‘ಆರು ತಿಂಗಳಿಂದ ಇದನ್ನೇ ಹೇಳ್ತಿದೀರಿ, ಗ್ಯಾರಂಟಿ ಆಗಲ್ಲ’.</p>.<p>‘ಏನ್ ಸಾರ್! ಗ್ಯಾರಂಟಿಗಳು ಇರಲ್ಲ ಅಂದ್ರಾ?’</p>.<p>‘ಗ್ಯಾರಂಟಿಗಳದ್ದು ಗೊತ್ತಿಲ್ಲಪ್ಪ, ರಾಜ್ಯದಲ್ಲಿ ಸಿಎಂ ಚೇಂಜ್ ಆಗ್ತಾರೋ ಇಲ್ಲವೋ ಡೌಟು ಅಂದೆ’.</p>.<p>‘ಚೇಂಜ್ ಆಗೇ ಆಗ್ತಾರೆ ಸಾರ್. ಇನ್ಮೇಲೆ ರಾಜ್ಯದಲ್ಲಿ ಬದಲಾವಣೆ ಪರ್ವ ಶುರುವಾಗುತ್ತೆ, ನೋಡ್ತಾ ಇರಿ’.</p>.<p>‘ಓಹೋ, ಅಷ್ಟೊಂದು ಬದಲಾವಣೆ ತರ್ತಾರಾ?’</p>.<p>‘ಹೂಂ ಸಾರ್, ಬದಲಾವಣೆ ಆಗಲೇಬೇಕಲ್ಲ, ಸಚಿವ ಸಂಪುಟ ಬದಲಾಗಬೇಕು, ಶಾಸಕರು ಬಣ ಬದಲಾಯಿಸಬೇಕು, ಸಲಹೆಗಾರರು ಚೇಂಜ್ ಆಗಬೇಕು... ಜಾಹೀರಾತುಗಳಲ್ಲಿ ನಮ್ ಸಾಹೇಬ್ರುದು ಒಬ್ಬರದೇ ಫೋಟೊ ಬರಬೇಕು’.</p>.<p>‘ಓಹ್, ನೀನು ಈ ಬದಲಾವಣೆ ಹೇಳ್ದಾ... ಅದ್ ಸರಿ, ನಿನಗ್ಯಾಕಿಷ್ಟು ಖುಷಿ?’</p>.<p>‘ಇದೆಲ್ಲ ಬದಲಾದ ಮೇಲೆ, ನಿಗಮ–ಮಂಡಳಿ ಅಧ್ಯಕ್ಷರು ಬದಲಾಗಲ್ವ ಸಾರ್, ಆಗ ನನಗೊಂದು ಚಾನ್ಸ್ ಸಿಗಲ್ವ ಸಾರ್?’ ಎಂದು ವಿಜಿ ಆಶಾಭಾವದಿಂದ ಕೇಳಿದ.</p>.<p>‘ಓಹೊಹೊ ದೂರಾಲೋಚನೆ... ಅದಕ್ಕೆ ಈಗಿರೋರು ಹುದ್ದೆ ತ್ಯಾಗ ಮಾಡಿ, ರಾಜ್ಯಸಭೆಯ ರಾಜ ಆಗಬಹುದು ಅಥವಾ ನಿಮ್ಮ ಸಾಹೇಬ್ರಿಗೇ ನೀನೇ ತ್ಯಾಗರಾಜ ಆಗು ಅಂತ ಹೇಳಿ, ಅವರೇ ರಾಜ್ಯದ ರಾಜರಾಗಿ ಮುಂದುವರಿಯಬಹುದು...’</p>.<p>‘ಅಯ್ಯೋ, ಹಿಂಗೂ ಆಗಬಹುದು ಅಂತೀರಾ?’</p>.<p>‘ಹೂಂ ಮತ್ತೆ, ಈಗಿರೋರು ರಾಜ್ಯಸಭೆಗೆ ಏನಾದರೂ ಹೋದರೆ, ಒಂದು ಸಮನ್ವಯ ಸಮಿತಿ ಮಾಡಿ, ಮೈಸೂರಿನ ಮರಿ ಹುಲೀನ ಅದರ ಅಧ್ಯಕ್ಷನನ್ನಾಗಿ ಮಾಡಿದ್ರೂ ಮಾಡಬಹುದು...’</p>.<p>‘ಏಯ್ ಸುಮ್ನಿರಿ ಸಾರ್, ಬರೀ ಅಪಶಕುನ ಮಾತಾಡ್ತೀರಿ. ಹಂಗೆಲ್ಲ ಏನೂ ಆಗಲ್ಲ’ ಎಂದು ಸಿಹಿ ಡಬ್ಬಿ ಎತ್ತಿಕೊಂಡು ಹೊರಹೋದ ಮುದ್ದಣ್ಣ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>