‘ನೋಡ್ಲಾ, ಬಿಟ್ಕಾಯಿನ್, ಡ್ರಗ್ಸ್, ಅಕ್ರಮ ಗಣಿಗಾರಿಕೆಗಳಲ್ಲಿ ಜಲಪ್ರಳಯ ಆಗಿ ಪಾಚಿ
ಗಟ್ಟೋಗ್ಯದೆ! ಈಗೀಗ ವೀನಿವರ್ಸಿಟಿಗಳಲ್ಲೂ ಲಕ್ಷದ ಲೆಕ್ಕದೇಲಿ ಪರ್ಸೆಂಟೇಜ್ ಸೋರ್ತಾ ಅದಂತೆ! ಸರ್ಕಾರಗಳು, ಪಾಲಿಕೆಗಳು, ಪ್ರಾಧಿಕಾರಗಳು, ಇಲಾಖೆಗಳು ಸಿಕ್ಕಾಪಟ್ಟೆ ಸೋರ್ತಾ ಅವೆ. ಬಿಡಿಎಗೆ ನುಂಗಸಿಗಳು ನುಗ್ಗಿ ರೂಫೆಲ್ಲಾ ತೂತಾಗಿ ತಾರಾಮಾರಾ ಸೋರ್ಯದಂತೆ. ‘ಕರ್ನಾಟಕದ ಗುತ್ತಿಗೆದಾರರ ಪರ್ಸೆಂಟೇಜು 10ರಿಂದ 40ಕ್ಕೆ ಏರಿ ಸೋರಿಕೆಯಾಯ್ತಾದೆ. ವಸಿ ನೋಡಿ’ ಅಂತ ಲೆಟರ್ ಬರೆದ್ರೂ ಮೋದಿ ಚಿಗಪ್ಪ ‘ಹೊಸ ಭಾರತ ಕಟ್ಟುವಾಗ ಇವೆಲ್ಲಾ ಸೋರದು ಸಾಮಾನ್ಯ’ ಅಂದಿಲ್ಲವಂತೆ ಕನೋ’ ಅಂತಂದ್ರು.