<p>‘ನಾಳೆಯಿಂದ ಚಾ, ತಿಂಡಿ ರೇಟು ಜಾಸ್ತಿ’ ಎಂದಳು ಮಂಜಮ್ಮ.</p><p>‘ಯಾಕೋ...?’ ತೆಪರೇಸಿ ಆಕ್ಷೇಪಿಸಿದ.</p><p>‘ಯುದ್ಧ ನಡೀತಿಲ್ವಾ? ಪೆಟ್ರೋಲು, ಗ್ಯಾಸು ಎಲ್ಲ ದುಬಾರಿ ಆಗುತ್ತೆ...’</p><p>‘ಇದೊಳ್ಳೆ ಕತಿಯಾತಪ, ಅಲ್ಲೆಲ್ಲೋ ಮಳಿಯಾದ್ರೆ ನಾವು ಇಲ್ಲಿ ಪಂಚೆ ಎತ್ತಿ ಕಟ್ಕಾಬೇಕಾ? ನಾವು ಒಪ್ಪಲ್ಲ, ಪ್ರತಿಭಟನೆ ಮಾಡ್ತೀವಿ’ ಎಂದ ದುಬ್ಬೀರ.</p><p>‘ಈ ಪ್ರತಿಭಟನೇಲಿ ನಾನಿಲ್ಲ, ನಾನು ಸೆಂಟ್ರಲ್ ಗೌರ್ಮೆಂಟ್ ತರ, ತಟಸ್ಥ...’ ಎಂದ ಗುಡ್ಡೆ.</p><p>‘ಉದ್ರಿ ಗಿರಾಕಿ ನೀನು, ಎಷ್ಟ್ ರೇಟಾದ್ರೆ ನಿಂಗೇನು...’ ದುಬ್ಬೀರ ನಕ್ಕ.</p><p>‘ಅದಿರ್ಲಿ, ಎರಡು ದಿನ ಎಲ್ಲಿ ನಾಪತ್ತೆ ಆಗಿದ್ಯೋ ಗುಡ್ಡೆ?’ ಮಂಜಮ್ಮ ಕೇಳಿದಳು.</p><p>‘ಗ್ರಹಣ ಅಲ್ವ ಮಂಜಮ್ಮ, ಪ್ರಳಯ ಆಗುತ್ತೆ ಅಂದಿದ್ರು ನಮ್ ಬ್ರಹ್ಮಾಂಡ ಗುರುಗಳು...’</p><p>‘ಮತ್ತೆಲ್ಲಿ ಪ್ರಳಯ ಆಗ್ಲೇ ಇಲ್ಲ?’</p><p>‘ಆಗುತ್ತೆ ನೋಡ್ತಿರು, ಜಗತ್ತಲ್ಲಿ ಒಂದು ದೊಡ್ಡ ಹತ್ಯೆ ಆಗುತ್ತೆ ಅಂತ ನಮ್ ಗುರುಗಳು ಹೇಳಿದ್ದು ನಿಜ ಆಗಿಲ್ವಾ?’</p><p>‘ಅಬಾಬಬ... ನಿಮ್ ಗುರುಗಳಿಗೆ ಮುಂದಾಗೋದೆಲ್ಲ ಗೊತ್ತಾಗುತ್ತಾ?’</p><p>‘ನಮ್ ಗುರುಗಳು ತ್ರಿಕಾಲ ಜ್ಞಾನಿಗಳು, ಯುದ್ಧ ಆಗೋದನ್ನೂ ಮುಂಚೇನೆ ಹೇಳಿದ್ರು...’</p><p>‘ಹೌದಾ? ಅಲ್ಲಿ ಅಮೆರಿಕ, ಇರಾನ್ ಯುದ್ಧ ಹಂಗಿರ್ಲಿ, ಇಲ್ಲಿ ನಮ್ ಡಿಕೆಶಿ, ಸಿದ್ರಾಮಣ್ಣ ನಡುವಿನ ಹಾಲು ಜೇನಿನ ಅಂತರ್ ಯುದ್ಧ ಏನಾಗಬಹುದು?’</p><p>‘ಅದೂ...’ ಗುಡ್ಡೆ ತಲೆ ಕೆರೆದುಕೊಂಡ.</p><p>‘ಹೋಗ್ಲಿ, ಸಿದ್ರಾಮಣ್ಣ ಕುರ್ಚಿ ಬಿಟ್ ಕೊಡ್ತಾರೋ ಅಥ್ವ ಸ್ಟ್ರೀಟ್ ಫೈಟ್ ಆಗುತ್ತೋ?’</p><p>‘ಅದು ಹೈಕಮಾಂಡ್ಗೆ ಬಿಟ್ಟದ್ದು...’</p><p>‘ಓಕೆ, ಹೈಕಮಾಂಡ್ ತಲೇಲಿ ಏನಿದೆ ಅಂತ ನಿಮ್ ಗುರೂಜಿ ಹೇಳ್ತಾರಾ?’ ಮಂಜಮ್ಮ ಪಟ್ಟು ಬಿಡಲಿಲ್ಲ.</p><p>‘ಹೇಳ್ತಾರೆ, ಆದ್ರೆ...’</p><p>‘ಆದ್ರೆ ಏನು?’</p><p>‘ಹೈಕಮಾಂಡ್ ಅಂದ್ರೆ ಯಾರು? ರಾಗಾನೋ ಸೋಗಾನೋ ಪ್ರಿಗಾನೋ... ಯಾರು?’ ಗುಡ್ಡೆ ತಲೆ ಓಡಿಸಿದ.</p><p>ಗುಡ್ಡೆಯ ಮಿಲಿಯನ್ ಡಾಲರ್ ಪ್ರಶ್ನೆಗೆ ಎಲ್ಲರೂ ಗಡ್ಡ ಕೆರೆದುಕೊಂಡರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ನಾಳೆಯಿಂದ ಚಾ, ತಿಂಡಿ ರೇಟು ಜಾಸ್ತಿ’ ಎಂದಳು ಮಂಜಮ್ಮ.</p><p>‘ಯಾಕೋ...?’ ತೆಪರೇಸಿ ಆಕ್ಷೇಪಿಸಿದ.</p><p>‘ಯುದ್ಧ ನಡೀತಿಲ್ವಾ? ಪೆಟ್ರೋಲು, ಗ್ಯಾಸು ಎಲ್ಲ ದುಬಾರಿ ಆಗುತ್ತೆ...’</p><p>‘ಇದೊಳ್ಳೆ ಕತಿಯಾತಪ, ಅಲ್ಲೆಲ್ಲೋ ಮಳಿಯಾದ್ರೆ ನಾವು ಇಲ್ಲಿ ಪಂಚೆ ಎತ್ತಿ ಕಟ್ಕಾಬೇಕಾ? ನಾವು ಒಪ್ಪಲ್ಲ, ಪ್ರತಿಭಟನೆ ಮಾಡ್ತೀವಿ’ ಎಂದ ದುಬ್ಬೀರ.</p><p>‘ಈ ಪ್ರತಿಭಟನೇಲಿ ನಾನಿಲ್ಲ, ನಾನು ಸೆಂಟ್ರಲ್ ಗೌರ್ಮೆಂಟ್ ತರ, ತಟಸ್ಥ...’ ಎಂದ ಗುಡ್ಡೆ.</p><p>‘ಉದ್ರಿ ಗಿರಾಕಿ ನೀನು, ಎಷ್ಟ್ ರೇಟಾದ್ರೆ ನಿಂಗೇನು...’ ದುಬ್ಬೀರ ನಕ್ಕ.</p><p>‘ಅದಿರ್ಲಿ, ಎರಡು ದಿನ ಎಲ್ಲಿ ನಾಪತ್ತೆ ಆಗಿದ್ಯೋ ಗುಡ್ಡೆ?’ ಮಂಜಮ್ಮ ಕೇಳಿದಳು.</p><p>‘ಗ್ರಹಣ ಅಲ್ವ ಮಂಜಮ್ಮ, ಪ್ರಳಯ ಆಗುತ್ತೆ ಅಂದಿದ್ರು ನಮ್ ಬ್ರಹ್ಮಾಂಡ ಗುರುಗಳು...’</p><p>‘ಮತ್ತೆಲ್ಲಿ ಪ್ರಳಯ ಆಗ್ಲೇ ಇಲ್ಲ?’</p><p>‘ಆಗುತ್ತೆ ನೋಡ್ತಿರು, ಜಗತ್ತಲ್ಲಿ ಒಂದು ದೊಡ್ಡ ಹತ್ಯೆ ಆಗುತ್ತೆ ಅಂತ ನಮ್ ಗುರುಗಳು ಹೇಳಿದ್ದು ನಿಜ ಆಗಿಲ್ವಾ?’</p><p>‘ಅಬಾಬಬ... ನಿಮ್ ಗುರುಗಳಿಗೆ ಮುಂದಾಗೋದೆಲ್ಲ ಗೊತ್ತಾಗುತ್ತಾ?’</p><p>‘ನಮ್ ಗುರುಗಳು ತ್ರಿಕಾಲ ಜ್ಞಾನಿಗಳು, ಯುದ್ಧ ಆಗೋದನ್ನೂ ಮುಂಚೇನೆ ಹೇಳಿದ್ರು...’</p><p>‘ಹೌದಾ? ಅಲ್ಲಿ ಅಮೆರಿಕ, ಇರಾನ್ ಯುದ್ಧ ಹಂಗಿರ್ಲಿ, ಇಲ್ಲಿ ನಮ್ ಡಿಕೆಶಿ, ಸಿದ್ರಾಮಣ್ಣ ನಡುವಿನ ಹಾಲು ಜೇನಿನ ಅಂತರ್ ಯುದ್ಧ ಏನಾಗಬಹುದು?’</p><p>‘ಅದೂ...’ ಗುಡ್ಡೆ ತಲೆ ಕೆರೆದುಕೊಂಡ.</p><p>‘ಹೋಗ್ಲಿ, ಸಿದ್ರಾಮಣ್ಣ ಕುರ್ಚಿ ಬಿಟ್ ಕೊಡ್ತಾರೋ ಅಥ್ವ ಸ್ಟ್ರೀಟ್ ಫೈಟ್ ಆಗುತ್ತೋ?’</p><p>‘ಅದು ಹೈಕಮಾಂಡ್ಗೆ ಬಿಟ್ಟದ್ದು...’</p><p>‘ಓಕೆ, ಹೈಕಮಾಂಡ್ ತಲೇಲಿ ಏನಿದೆ ಅಂತ ನಿಮ್ ಗುರೂಜಿ ಹೇಳ್ತಾರಾ?’ ಮಂಜಮ್ಮ ಪಟ್ಟು ಬಿಡಲಿಲ್ಲ.</p><p>‘ಹೇಳ್ತಾರೆ, ಆದ್ರೆ...’</p><p>‘ಆದ್ರೆ ಏನು?’</p><p>‘ಹೈಕಮಾಂಡ್ ಅಂದ್ರೆ ಯಾರು? ರಾಗಾನೋ ಸೋಗಾನೋ ಪ್ರಿಗಾನೋ... ಯಾರು?’ ಗುಡ್ಡೆ ತಲೆ ಓಡಿಸಿದ.</p><p>ಗುಡ್ಡೆಯ ಮಿಲಿಯನ್ ಡಾಲರ್ ಪ್ರಶ್ನೆಗೆ ಎಲ್ಲರೂ ಗಡ್ಡ ಕೆರೆದುಕೊಂಡರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>