‘ಅಯ್ಯ ನಿಮ್ಮ, ಬರೀ ಗುನ್ನಂಪಟ್ಟೆ ತೋರಿಸ್ತೀರಲ್ಲಾ ಸಾ’ ಅಂದೆ ಬೇಜಾರೇಲಿ.
‘ನೋಡೋ, ರಾಜಕೀಯದೇಲಿ ವಯಸ್ಸು, ಟೈಮು, ದುಡ್ಡು ಅಂತ ಮೂರು ಖರಾಬ್ ಐಟಮ್ಮುಗಳವೆ. ಇವೇ ರಾಜಕಾರಣಿ ಭವಿಷ್ಯ ತೀರ್ಮಾನ ಮಾಡದು. ಇವು ಯಾವತ್ತೂ ಒಂದಿಗಿರಲ್ಲ, ಯಾರೂ ತಂದುಕೊಡಂಗಿಲ್ಲ! ಇವು ಮೂರು ಚಿಕ್ಕ ವಯಸ್ಸಲ್ಲೇ ಸಿಕ್ಕಿದೋನು ರಾಜಕೀಯದೇಲಿ ಗೆಟನ್ ಆಯ್ತನೆ ಕಯ್ಯಾ’ ಅಂದು ಆಕಳಿಸಿದರು.
‘ಅದೇನು ಬುಡಸೇಳಿ ಸಾ’ ಅಂದೆ.
‘ಬುಡಸಾಕೆ ಅದೇನು ನಲ್ಲಿಮೂಳೆನಾ ಬೊಡ್ಡಿಹೈದ್ನೆ. ಯೇಳ್ತಿನಿ ತಿಳಕೋ! ಚಿಕ್ಕ ವಯಸ್ಸಿಗೆ ರಾಜಕೀಯಕ್ಕೆ ಬಂದೋನಿಗೆ ಬೇಜಾನ್ ಟೈಮಿರತದೆ. ಆದರೆ ಬೇಕಾದ್ದು ಅನುಭವಿಸಕೆ ದುಡ್ಡಿರಲ್ಲ. ರಾಜಕೀಯದೇಲಿ ಹತ್ತಾರು ವರ್ಷ ಪಳಗಿದೋನಿಗೆ ವಯಸ್ಸು ಇರತದೆ, ದುಡ್ಡೂ ಇರತದೆ ಆದ್ರೆ ಟೈಮೇ ಇರಲ್ಲ. ಇನ್ನು ಅಧಿಕಾರ ಸಿಕ್ಕಿ ಮುದಿಯಾದ ಮ್ಯಾಲೆ ಬೇಕಾದಷ್ಟು ಟೈಮಿರತದೆ ದುಡ್ಡಿರತದೆ ಆದರೆ ಅನುಭವಿಸೋ ವಯಸ್ಸಿರಲ್ಲ. ಇದೇ ರಾಜಕೀಯದ ಭಗವದ್ಗೀತೆ ಕನ್ರೋ ಹೈವಾನುಗಳಾ!’ ಅಂದ್ರು ತುರೇಮಣೆ.
‘ಸಾ, ಈ ಭಗವದ್ಗೀತೇಲಿ ಜನಸಾಮಾನ್ಯರ ಪಾಡು ಹ್ಯಂಗೆ?’ ಪ್ರಶ್ನೆ ಮಾಡಿದೆ.