‘ಬೇಕಾದ್ ಬಿಲ್ ಪಾಸ್ ಮಾಡ್ಕಳಕ್ ನಾವ್ ಕೈ ಎತ್ತಕ್ ಬೇಕು, ವಿಪ್ ಅಂದ್ರೆ ಗಪ್ಚಿಪ್ಪಾಗ್ ಕೂರ್ಬೇಕು. ಈ ಹಗರಣ ಅದೂ ಇದೂ ಅಂತ ಸೀಟು ದಬ್ಬಾಕ್ಕಂಡಿರ್ತಾರಲ್ಲ, ಅವರು ಮತ್ ಮಂತ್ರಿಗಿರಿ ಗಿಟ್ಟಿಸ್ಕಳೋಕೆ ಈ ಮೇಲ್ಮನೆ ಬೇಕು, ಆಮ್ಯಾಕೆ ಬೇರೆ ಪಾರ್ಟಿಯಿಂದ ಆಪರೇಶನ್ ಮಾಡುಸ್ಕಂಡು ಬಂದೋರ್ಗೆ ಇದು ಆಶ್ರಯಧಾಮ ಇದ್ದಂಗೆ. ಇನ್ ನೇರವಾಗ್ ಗೆಲ್ಲಕ್ ಆಗ್ದೆ ಇರೋ ದೊಡ್ ಮನುಷ್ಯರಿಗೆಲ್ಲ ಇದು ಹಿತ್ಲು ಬಾಗ್ಲಿದ್ದಂಗೆ. ಬತ್ತಾ ಬತ್ತಾ ಇದೊಂಥರಾ ಸೋತ ಕುದುರೆಗಳ ಲಾಯ ಆದಂಗ್ ಆಗೈತೆ’.