‘ಏನ್ ಮಾಡಿದೀನಿ ಸರ್, ಅಂಥದ್ದೇನ್ ಮಾಡಿದೀನಿ ನಾನು...?! ಪೊಲೀಸ್ ಆಗೋಕೂ ಮುಂಚೆನೇ ಅದರ ಧ್ಯೇಯೋದ್ದೇಶಗಳನ್ನೆಲ್ಲ ಪಾಲಿಸಿದ್ದೇ ತಪ್ಪಾ? ನನ್ನ 20ಕ್ಕೂ ಹೆಚ್ಚು ಫ್ರೆಂಡ್ಸ್ಗೆ ಎಕ್ಸಾಮ್ ಬರೆಯೋಕೆ ಎಲ್ಲ ‘ಸಹಕಾರ’ ನೀಡಿ ಅವರ ಹಕ್ಕುಗಳನ್ನು ರಕ್ಷಿಸಿದ್ದೇನೆ. ಅವರು ಸಾರ್ವಜನಿಕರಲ್ಲವೇ? ನಾವು ಆಯ್ಕೆಯಾಗೋದ್ರಲ್ಲಿ ಯಾವುದೇ ರೀತಿಯ ವಿಳಂಬ ಆಗಬಾರದು ಅನ್ನೋ ಕಾರಣಕ್ಕೆ, ಎಜುಕೇಷನ್ ಡಿಪಾರ್ಟ್ಮೆಂಟ್ನ ಮೇಷ್ಟ್ರು, ಹೆಡ್ ಮಾಸ್ಟರುಗಳ ಹೆಲ್ಪ್ ತಗೊಂಡು ಎಕ್ಸಾಮ್ ಬರೆದಿದ್ದೀನಿ. ಯಾವುದೇ ರಾಜಕೀಯ ಪಕ್ಷದ ವ್ಯತ್ಯಾಸವನ್ನೂ ಎಣಿಸದೆ ಎಲ್ಲ ಪಾರ್ಟಿ ಲೀಡರ್ಗಳ ಸಹಾಯವನ್ನೂ ಪಡೆದಿದ್ದೀನಿ...’ ಬಿಕ್ಕಳಿಸುತ್ತಲೇ ಹೇಳ್ದ ಮುದ್ದಣ್ಣ.