<p>‘ರಾಣಿಬೆನ್ನೂರಲ್ಲಿ ರತಿ ಮನ್ಮಥರ ನಗಿಸಕ್ಕೆ 13 ಲಕ್ಷ ರೂಪಾಯಿ ಬಹುಮಾನ ಮಡಗಿದ್ರಂತೆ. ಆದ್ರೂ ಯಾರ್ ಕೈಲೂ ಆಗ್ಲಿಲ್ವಂತೆ ಕಣ್ರಲಾ’ ಎಂದ ಗುದ್ಲಿಂಗ ಹರಟೆಕಟ್ಟೇಲಿ!</p>.<p>‘ವೂ ಕಣ್ಲಾ, ಪೇಪರ್ರಲ್ಲಿ ಓದ್ದೆ. ಸಿಂಗಲ್ ಮೀನಿಂಗ್, ಡಬ್ಬಲ್ ಮೀನಿಂಗ್ ಯಾವ್ದಕ್ಕೂ ಜಪ್ಪಯ್ಯ ಅಂದಿಲ್ವಂತೆ! ಪರಪರ ತಲೆ ಕೆರ್ಕಂಡು, ಅಂಗಿ ಹರ್ಕಂಡು ಮಂಗನ್ ತರ ತಿಪ್ಪರ್ಲಾಗ ಆಕುದ್ರೂ ಅವರು ಮಾತ್ರ ಕಿಸಕ್ ಅನ್ನಲ್ವಂತೆ’ ಎಂದ ಮಾಲಿಂಗ!</p>.<p>‘ಟ್ರಂಪ್ ಪ್ರಪಂಚಕ್ಕೇ ಬೆಂಕಿ ಹಾಕಿ ಶಾಂತಿ ನೊಬೆಲ್ ತಗೋಬೇಕು ಅಂತಾವ್ನಲ್ಲ, ಅದ್ನ ಯೋಳಿದ್ರೆ ನಗ್ತಿದ್ರೇನೋ?’</p>.<p>‘ಅಥವಾ ನಮ್ ಮಲ್ಲೇಶಣ್ಣಂದು ಒಂದು ಚುರುಮುರಿ ಒಗೆದಿದ್ರೆ ಬಿದ್ ಬಿದ್ ನಗ್ತಿದ್ರೇನೋ?’</p>.<p>‘ಇಂಗೇ ಬಾಳಾ ಜನ ಅವ್ರೆ... ಯಥಾ ರಾಜಾ, ತಥಾ ಪ್ರಜಾ!’</p>.<p>‘ಅಂಗಂದ್ರೇನ್ಲಾ?’</p>.<p>‘ಕೆಲವ್ರು ರಾಜಕೀಯದೋರು ನಗಕೇ ಇಲ್ಲ ಕಣ್ಲಾ! ನೋವು ನೀಗ್ಸಾದು ಇರಲಿ, ಕನಿಷ್ಠ ನಗುಸ್ಬಾರ್ದ? ಬೇಸಿದ ಗೆಣಸಿನ್ ತರ ಮುಖ ಕಿವುಚ್ಕಂಡಿರ್ತಾರೆ, ನಾನ್ ಲಾಪಿಂಗ್ ಬುದ್ಧೂಸ್’.</p>.<p>‘ಜಗಣ್ಣ ಜೋಶಿ, ಪಟೇಲಣ್ಣ ಬುಟ್ರೆ ಮನಮೋಹನ್ನು, ಕಾರೆಟ್ಟು, ಮಮತಾ, ರಾಜನಾಥಸಿಂಗ್, ನಮ್ ದೊಡ್ ಗೌಡ್ರು, ಧರ್ಮಣ್ಣ, ಸಿದ್ದಣ್ಣ... ಯಾರಾದ್ರೂ ಒಬ್ರು ಒಂದೆರೆಡು ಜೋಕ್ ಯೋಳವ್ರಾ? ಲಾಫಿಂಗ್ ಬುದ್ಧ ಫೇಮಸ್ಸು. ಆದ್ರೆ ಬುದ್ಧದೇವ ಭಟ್ಟಾಚಾರ್ಯ ಅಂತ ಹೆಸರಿಟ್ಕೊಂಡು ನಗುಸ್ಲೇ ಇಲ್ಲ’ ಎಂದ ಕಲ್ಲೇಶಿ.</p>.<p>‘ರಾಜಾವುಲಿ ಒಂದ್ಸಾರಿ ಈ ರತಿ ಮನ್ಮಥರನ್ನ ವಿಧಾನಸೌಧಕ್ಕೆ ಕರ್ಕೊಂಡ್ ಓಗಿತ್ತಂತೆ’.</p>.<p>‘ಮುಗೀತು ಬುಡು. ಸದನದಲ್ಲಿ ತಲೆ ತಲಾಂತರಗಳಿಂದ ನಗ್ದೇ ಮೂತೀನ ಹಲಸಿನಕಾಯ್ ತರ ಹಾಕ್ಕಂಡು ಕುಂತ್ಕಳೋ ಮುತ್ಸದ್ದಿಗಳು ಶಾನೆ ಅವ್ರೆ! ರಂಗನ್ ಮುಂದೆ ಸಿಂಗನಾ? ಅವರನ್ನೆಲ್ಲಾ ನೋಡ್ಕಂಡು ಬಂದ್ಮೇಲೆ ಇವರು ಜನ್ಮೇಪಿ ನಗಕಿಲ್ಲ’ ಎಂದು ರೂಲಿಂಗ್ ಕೊಟ್ಟ ಪರ್ಮೇಶಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ರಾಣಿಬೆನ್ನೂರಲ್ಲಿ ರತಿ ಮನ್ಮಥರ ನಗಿಸಕ್ಕೆ 13 ಲಕ್ಷ ರೂಪಾಯಿ ಬಹುಮಾನ ಮಡಗಿದ್ರಂತೆ. ಆದ್ರೂ ಯಾರ್ ಕೈಲೂ ಆಗ್ಲಿಲ್ವಂತೆ ಕಣ್ರಲಾ’ ಎಂದ ಗುದ್ಲಿಂಗ ಹರಟೆಕಟ್ಟೇಲಿ!</p>.<p>‘ವೂ ಕಣ್ಲಾ, ಪೇಪರ್ರಲ್ಲಿ ಓದ್ದೆ. ಸಿಂಗಲ್ ಮೀನಿಂಗ್, ಡಬ್ಬಲ್ ಮೀನಿಂಗ್ ಯಾವ್ದಕ್ಕೂ ಜಪ್ಪಯ್ಯ ಅಂದಿಲ್ವಂತೆ! ಪರಪರ ತಲೆ ಕೆರ್ಕಂಡು, ಅಂಗಿ ಹರ್ಕಂಡು ಮಂಗನ್ ತರ ತಿಪ್ಪರ್ಲಾಗ ಆಕುದ್ರೂ ಅವರು ಮಾತ್ರ ಕಿಸಕ್ ಅನ್ನಲ್ವಂತೆ’ ಎಂದ ಮಾಲಿಂಗ!</p>.<p>‘ಟ್ರಂಪ್ ಪ್ರಪಂಚಕ್ಕೇ ಬೆಂಕಿ ಹಾಕಿ ಶಾಂತಿ ನೊಬೆಲ್ ತಗೋಬೇಕು ಅಂತಾವ್ನಲ್ಲ, ಅದ್ನ ಯೋಳಿದ್ರೆ ನಗ್ತಿದ್ರೇನೋ?’</p>.<p>‘ಅಥವಾ ನಮ್ ಮಲ್ಲೇಶಣ್ಣಂದು ಒಂದು ಚುರುಮುರಿ ಒಗೆದಿದ್ರೆ ಬಿದ್ ಬಿದ್ ನಗ್ತಿದ್ರೇನೋ?’</p>.<p>‘ಇಂಗೇ ಬಾಳಾ ಜನ ಅವ್ರೆ... ಯಥಾ ರಾಜಾ, ತಥಾ ಪ್ರಜಾ!’</p>.<p>‘ಅಂಗಂದ್ರೇನ್ಲಾ?’</p>.<p>‘ಕೆಲವ್ರು ರಾಜಕೀಯದೋರು ನಗಕೇ ಇಲ್ಲ ಕಣ್ಲಾ! ನೋವು ನೀಗ್ಸಾದು ಇರಲಿ, ಕನಿಷ್ಠ ನಗುಸ್ಬಾರ್ದ? ಬೇಸಿದ ಗೆಣಸಿನ್ ತರ ಮುಖ ಕಿವುಚ್ಕಂಡಿರ್ತಾರೆ, ನಾನ್ ಲಾಪಿಂಗ್ ಬುದ್ಧೂಸ್’.</p>.<p>‘ಜಗಣ್ಣ ಜೋಶಿ, ಪಟೇಲಣ್ಣ ಬುಟ್ರೆ ಮನಮೋಹನ್ನು, ಕಾರೆಟ್ಟು, ಮಮತಾ, ರಾಜನಾಥಸಿಂಗ್, ನಮ್ ದೊಡ್ ಗೌಡ್ರು, ಧರ್ಮಣ್ಣ, ಸಿದ್ದಣ್ಣ... ಯಾರಾದ್ರೂ ಒಬ್ರು ಒಂದೆರೆಡು ಜೋಕ್ ಯೋಳವ್ರಾ? ಲಾಫಿಂಗ್ ಬುದ್ಧ ಫೇಮಸ್ಸು. ಆದ್ರೆ ಬುದ್ಧದೇವ ಭಟ್ಟಾಚಾರ್ಯ ಅಂತ ಹೆಸರಿಟ್ಕೊಂಡು ನಗುಸ್ಲೇ ಇಲ್ಲ’ ಎಂದ ಕಲ್ಲೇಶಿ.</p>.<p>‘ರಾಜಾವುಲಿ ಒಂದ್ಸಾರಿ ಈ ರತಿ ಮನ್ಮಥರನ್ನ ವಿಧಾನಸೌಧಕ್ಕೆ ಕರ್ಕೊಂಡ್ ಓಗಿತ್ತಂತೆ’.</p>.<p>‘ಮುಗೀತು ಬುಡು. ಸದನದಲ್ಲಿ ತಲೆ ತಲಾಂತರಗಳಿಂದ ನಗ್ದೇ ಮೂತೀನ ಹಲಸಿನಕಾಯ್ ತರ ಹಾಕ್ಕಂಡು ಕುಂತ್ಕಳೋ ಮುತ್ಸದ್ದಿಗಳು ಶಾನೆ ಅವ್ರೆ! ರಂಗನ್ ಮುಂದೆ ಸಿಂಗನಾ? ಅವರನ್ನೆಲ್ಲಾ ನೋಡ್ಕಂಡು ಬಂದ್ಮೇಲೆ ಇವರು ಜನ್ಮೇಪಿ ನಗಕಿಲ್ಲ’ ಎಂದು ರೂಲಿಂಗ್ ಕೊಟ್ಟ ಪರ್ಮೇಶಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>