ನಂತರ ಖರ್ಗೆ ಸಾಹೇಬರಿಗೆ ಫೋನ್ ಮಾಡಿದ ತೆಪರೇಸಿ ‘ಸರ್ ಎಲ್ಲಿದೀರಾ?’ ಎಂದ. ‘ನಾನು ಮೋದಿ ಸಾಹೇಬ್ರಿಗೆ ನಮ್ ಕಡೀದು ಜೋಳದ ರೊಟ್ಟಿ, ಪುಂಡಿಪಲ್ಯ ಊಟ ಬಡಿಸ್ತಿದೀನಿ’ ಎಂದರು ಖರ್ಗೆ. ವಾಹ್ ಇದಕ್ಕಿಂತ ಒಳ್ಳೆ ಸುದ್ದಿ ಬೇಕಾ ಎಂದುಕೊಂಡ ತೆಪರೇಸಿ ಆ ಎಲ್ಲ ಸುದ್ದಿಗಳನ್ನ ಪಟ್ ಅಂತ ಸಂಪಾದಕರಿಗೆ ರವಾನಿಸಿದ. ‘ವೆರಿಗುಡ್, ನಿಮ್ಮ ಸಂಬಳ ಡಬಲ್ ಮಾಡಿದೀನಿ ಕಣಯ್ಯ ತೆಪರೇಸಿ’ ಎಂದರು ಸಂಪಾದಕರು.