‘ಅಯ್ಯೋ ಅದು ಜಮೀರ್ ಭಾಯಿ ಮತ್ತು ಅವರ ಬಾಯಿಗೆ ಸಂಬಂಧಿಸಿದ್ದು, ನಿಮ್ಮ ತಾಯಿಗೆ ಏನಂತೆ? ತಮ್ಮದು ಕೈ ಪಕ್ಷ, ಬಾಯಿ ಪಕ್ಷ ಅಲ್ಲ. ಕೆಲಸ ಜಾಸ್ತಿ ಮಾಡ್ರಿ, ಕೈ ಕೆಸರಾದರೆ ಬಾಯಿ ಮೊಸರು ಅಂತ ಅಧ್ಯಕ್ಷರು ಕನಕಪುರ ಭಾಷೆಯಲ್ಲಿ ಹೇಳಿದ್ದಾರೆ. ಚಾಮರಾಜಪೇಟೆ ಭಾಯಿಗೆ ಸರಿಯಾಗಿ ಅರ್ಥವಾಗದೆ ‘ಬಾಯಿ ಕೆಸರಾದರೆ ಕೈ ಮೊಸರು’ ಅಂತ ಕೇಳಿಸಿಕೊಂಡು ಪದೇ ಪದೇ ಎಡವಟ್ಟಾಗುತ್ತಿದೆ. ಒಟ್ನಲ್ಲಿ ಕೈಯಿ, ಬಾಯಿ ಎಲ್ಲಾ ಕೆಸರುಮಯ ಆಗಿ ಅದರಲ್ಲಿ ಕಮಲ ಅರಳೋ ಹಾಗೆ ಕಾಣಿಸುತ್ತೆ…!’