ದಿನ-1: ‘ಯಡೂರಪ್ಪ ಬ್ರದರ್, ನಿಮ್ಮ ಕುರ್ಚಿ ಕತೆ ಏನು?’ ಕುಮಾರಣ್ಣ ಕೆಣಕಿದ್ರು. ‘ನನ್ನ ಮಗ ಕಾವಲಿಗೆ ಇದ್ದಾನೆ, 17 ದೇವರು ಗಳಿದ್ದಾರೆ, ನಿಮಗ್ಯಾರಿದಾರೆ?’ ಅಂದ್ರು ಸಿಎಂ. ‘ನನ್ನತ್ರ ನಮ್ಮಪ್ಪಾರಿದ್ದಾರೆ!’ ಕುಮಾರಣ್ಣನ ಮಾತಿಗೆ ‘ನನಗೂ ಜಮೀರಿದ್ದಾರೆ’ ಅಂದ್ರು ಸಿದ್ದರಾಮಣ್ಣ. ‘ಅಪ್ಪ ಅಂಬಾರಿ ಹೊತ್ರೆ ಮಗನಿಗೂ ಹೊರೋ ಯೋಗ ಬರಲ್ಲ’ ಅಂದ್ರು ಡಿಕೆಶಿ.