‘ಕರ್ನಾಟಕದೇಲಿ ಸೈಲೆಂಟ್ ವೈಲೆನ್ಸ್ ಪ್ರಯೋಗ ನಡಿತಾ ಅದೆ ಕಯ್ಯಾ. ಸರ್ಕಾರ ಹೇಳ್ತದೆ ‘ಪೂಜಾ ಸ್ಥಳದೇಲಿ ಮೈಕು ಹಾಕಬ್ಯಾಡಿ ಸೈಲೆಂಟಾಗಿರಿ, ಚನ್ನಾಗಿರ ಪಠ್ಯಪುಸ್ತಕ ಕೊಟ್ಟುದವಿ ಸೈಲೆಂಟಾಗಿ ಒಪ್ಪಿಕ್ಯಳಿ, ಪೆಟ್ರೋಲ್- ಡೀಜೆಲ್ ರೇಟು ಜಾಸ್ತಿ ಮಾಡ್ತೀವಿ ತಗಂಡ್ರೆ ತಗಳಿ ಬುಟ್ರೆ ಬುಡಿ, ಗ್ಯಾಸ್ ಸಬ್ಸಿಡಿ ಇನ್ನು ಕೊಡಂಗಿಲ್ಲ ಸೈಲೆಂಟಾಗಿರಿ, ರಾಜ್ಯಸಭೆಗೆ ಕಾಸಿರೋರು ಹೋಯ್ತರೆ ಸೈಲೆಂಟಾಗಿರಿ. ನಾಡಗೀತೆಯ ನಮಗೆ ಬೇಕಾದಂಗೆ ಬದ್ಲಾಸಿ ಕೊಡ್ತೀವಿ ಸೈಲೆಂಟಾಗಿ ಹಾಡಿಕ್ಯಳಿ! ಕೆಲಸಾಗಬಕಾ ಸೈಲೆಂಟಾಗಿ ಕಾಸು ಕೊಡಿ! ಲೊಟ್ಟೆಲೊಸಕು ಅಂತ ನಿಮ್ಮ ಬ್ಯಾಡ್ ಬಾಯ್ ಏನಾದ್ರೂ ತಗುದ್ರೋ ನಾವು ವೈಲೆಂಟಾಯ್ತಿವಿ’ ಅಂತ ಜನಕ್ಕೆ-ಸಾಹಿತಿ ಗಳಿಗೆ ಖಟ್ನಿಟ್ ಮಾಡ್ಯವುರಲ್ಲೋ!’ ಅಂತ ಉಸುರೂದರು.