<p>‘ಗ್ಯಾಸ್ ಸಿಲಿಂಡರ್ ಖಾಲಿ ಆಗಿದೆ. ಹೋಟೆಲ್ನಿಂದಲೂ ಏನೂ ತಂದು ಕೊಡ್ತಿಲ್ಲ ನೀವು’ ಎಂದು ಹೆಂಡತಿಯ ಸುಪ್ರಭಾತ ಶುರುವಾಯಿತು. </p>.<p>‘ಯುದ್ಧ ನಡೀತಿರೋದ್ರಿಂದ ಇಡೀ ದೇಶದಲ್ಲೇ ಯಾರಿಗೂ ಗ್ಯಾಸ್ ಸಿಗ್ತಿಲ್ಲಮ್ಮ’ ಸಿಟ್ಟಿನಲ್ಲೇ ಹೇಳಿದೆ. </p>.<p>‘ಆಯ್ತು, ಈಗ ಏನ್ ಅಡುಗೆ ಮಾಡಿ ಹಾಕ್ಲಿ ಹೇಳಿ...’ </p>.<p>‘ಬೇಯಿಸದೇ ಇರೋ ಅಡುಗೆ ಏನಾದರೂ ಮಾಡಿಕೊಡು. ಇಂತಹ ಸಂದರ್ಭದಲ್ಲಿ ದೇಶಕ್ಕಾಗಿ ಇಷ್ಟು ಮಾಡದಿದ್ರೆ ಹೇಗೆ’ ಮಾತಲ್ಲಿ ವ್ಯಂಗ್ಯ ಇಣುಕಿತು. </p>.<p>‘ನಿಂಬೆಹಣ್ಣು, ಮೆಣಸಿನಕಾಯಿ, ಈರುಳ್ಳಿ, ಟೊಮೆಟೊ ನೀರಿನಲ್ಲಿ ತೊಳೆದುಕೊಡ್ತೀನಿ, ಹಂಗಂಗೆ ನುಂಗಿ’ ಎಂದು ಮುಖಕ್ಕೆ ತಿವಿದಳು. </p>.<p>‘ಸರಿ ಬಿಡು, ನಮ್ ಆಫೀಸ್ ಕ್ಯಾಂಟೀನ್ನಲ್ಲೇ ಊಟ ಮಾಡ್ತೀನಿ’ ಎಂದು ಹೊರಬಂದು ನೋಡಿದರೆ, ಬೈಕ್ನಲ್ಲಿ ಪೆಟ್ರೋಲ್ ಖಾಲಿಯಾಗಿತ್ತು. ‘ಅಯ್ಯೋ, ಈ ಯುದ್ಧದಿಂದಾಗಿ ಪೆಟ್ರೋಲ್ ಕೂಡ ಸಿಗ್ತಿಲ್ಲ. ಆಫೀಸ್ಗೆ ಹೇಗೆ ಹೋಗ್ಲಿ’ ಎಂದೆ. </p>.<p>‘ನಡೆದುಕೊಂಡೇ ಹೋಗಿ. ದೇಶಕ್ಕಾಗಿ ಅಷ್ಟೂ ಮಾಡೋಕಾಗಲ್ವ’ ತಿರುಗೇಟು ಕೊಟ್ಟಳು. </p>.<p>‘ದೇಶದಲ್ಲಿ ಏನಾದರಾಗಲಿ, ನಮ್ ರಾಜ್ಯದಲ್ಲಿ ಯಾರಿಗೂ ತೊಂದರೆಯಾಗದಂಗೆ ನಮ್ಮಣ್ಣ ನೋಡ್ಕೊತಾರೆ’ ಎಂದೆ. </p>.<p>‘ಯಾರಪ್ಪ ಅದು, ನಿಮ್ಮಣ್ಣ?’ </p>.<p>‘ನಮ್ ಶಿವಣ್ಣ. ಈಗ ನಮ್ ಪಕ್ಷದ ಅಧ್ಯಕ್ಷ ಆಗಿ ಆರು ವರ್ಷ ಮುಗಿದಿದೆ. ಅವರ ಕೆಪಾಸಿಟಿಗೆ ಸಿಗಬೇಕಾಗಿರೋ ಸ್ಥಾನ ಸಿಕ್ಕರೆ ಮುಂದೆ ಕಥೇನೆ ಬೇರೆ ಇರುತ್ತೆ’ ಎಂದೆ. </p>.<p>ಮರು ವಾರ. ಹೆಂಡತಿ ಫೋನ್ ಮಾಡಿದಳು. ‘ರೀ, ಮನೆಗೆ ಎರಡೆರಡು ಗ್ಯಾಸ್ ಸಿಲಿಂಡರ್ ತಂದು ಕೊಟ್ರು ರೀ. ಪೆಟ್ರೋಲ್ ಬಂಕ್ಗಳಲ್ಲಿಯೂ ಆಯಿಲ್ ತುಂಬಿರೋ ಲಾರಿಗಳು ಬಂದು ನಿಂತಿವೆ. ಏನ್ರೀ ಮ್ಯಾಜಿಕ್ ಇದು?’ ಖುಷಿಯಿಂದ ಕೇಳಿದಳು. </p>.<p>‘ಎಲ್ಲ ನಮ್ಮಣ್ಣ ಮಾಡಿಸಿರೋದು. ಡೈರೆಕ್ಟ್ ಬೆಂಗಳೂರಿಗೆ ಕತಾರ್ನಿಂದ ಗ್ಯಾಸ್ ಪೈಪ್ಲೈನ್, ಹೊರ್ಮುಜ್ ಜಲಸಂಧಿಯಿಂದ ತೈಲ ಪೈಪ್ಲೈನ್ ಕನೆಕ್ಷನ್ ಕೊಡಿಸಿದ್ದಾರೆ’.</p>.<p>‘ವಾವ್, ಈ ದಿಢೀರ್ ಬೆಳವಣಿಗೆಗೆ ಏನು ಕಾರಣ..?’ </p>.<p>‘ಏನಿಲ್ಲ, ನಿಮ್ಮನ್ನ ಸಿಎಂ ಮಾಡಬೇಕಂದ್ರೆ ನಿಮ್ ರಾಜ್ಯಕ್ಕೆ ಪೆಟ್ರೋಲು, ಗ್ಯಾಸು ಸಿಗೋ ಹಂಗೆ ಮಾಡಿ ಅಂತ ಹೈಕಮಾಂಡ್ನವರು ಹೇಳಿದ್ರಂತೆ!’. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಗ್ಯಾಸ್ ಸಿಲಿಂಡರ್ ಖಾಲಿ ಆಗಿದೆ. ಹೋಟೆಲ್ನಿಂದಲೂ ಏನೂ ತಂದು ಕೊಡ್ತಿಲ್ಲ ನೀವು’ ಎಂದು ಹೆಂಡತಿಯ ಸುಪ್ರಭಾತ ಶುರುವಾಯಿತು. </p>.<p>‘ಯುದ್ಧ ನಡೀತಿರೋದ್ರಿಂದ ಇಡೀ ದೇಶದಲ್ಲೇ ಯಾರಿಗೂ ಗ್ಯಾಸ್ ಸಿಗ್ತಿಲ್ಲಮ್ಮ’ ಸಿಟ್ಟಿನಲ್ಲೇ ಹೇಳಿದೆ. </p>.<p>‘ಆಯ್ತು, ಈಗ ಏನ್ ಅಡುಗೆ ಮಾಡಿ ಹಾಕ್ಲಿ ಹೇಳಿ...’ </p>.<p>‘ಬೇಯಿಸದೇ ಇರೋ ಅಡುಗೆ ಏನಾದರೂ ಮಾಡಿಕೊಡು. ಇಂತಹ ಸಂದರ್ಭದಲ್ಲಿ ದೇಶಕ್ಕಾಗಿ ಇಷ್ಟು ಮಾಡದಿದ್ರೆ ಹೇಗೆ’ ಮಾತಲ್ಲಿ ವ್ಯಂಗ್ಯ ಇಣುಕಿತು. </p>.<p>‘ನಿಂಬೆಹಣ್ಣು, ಮೆಣಸಿನಕಾಯಿ, ಈರುಳ್ಳಿ, ಟೊಮೆಟೊ ನೀರಿನಲ್ಲಿ ತೊಳೆದುಕೊಡ್ತೀನಿ, ಹಂಗಂಗೆ ನುಂಗಿ’ ಎಂದು ಮುಖಕ್ಕೆ ತಿವಿದಳು. </p>.<p>‘ಸರಿ ಬಿಡು, ನಮ್ ಆಫೀಸ್ ಕ್ಯಾಂಟೀನ್ನಲ್ಲೇ ಊಟ ಮಾಡ್ತೀನಿ’ ಎಂದು ಹೊರಬಂದು ನೋಡಿದರೆ, ಬೈಕ್ನಲ್ಲಿ ಪೆಟ್ರೋಲ್ ಖಾಲಿಯಾಗಿತ್ತು. ‘ಅಯ್ಯೋ, ಈ ಯುದ್ಧದಿಂದಾಗಿ ಪೆಟ್ರೋಲ್ ಕೂಡ ಸಿಗ್ತಿಲ್ಲ. ಆಫೀಸ್ಗೆ ಹೇಗೆ ಹೋಗ್ಲಿ’ ಎಂದೆ. </p>.<p>‘ನಡೆದುಕೊಂಡೇ ಹೋಗಿ. ದೇಶಕ್ಕಾಗಿ ಅಷ್ಟೂ ಮಾಡೋಕಾಗಲ್ವ’ ತಿರುಗೇಟು ಕೊಟ್ಟಳು. </p>.<p>‘ದೇಶದಲ್ಲಿ ಏನಾದರಾಗಲಿ, ನಮ್ ರಾಜ್ಯದಲ್ಲಿ ಯಾರಿಗೂ ತೊಂದರೆಯಾಗದಂಗೆ ನಮ್ಮಣ್ಣ ನೋಡ್ಕೊತಾರೆ’ ಎಂದೆ. </p>.<p>‘ಯಾರಪ್ಪ ಅದು, ನಿಮ್ಮಣ್ಣ?’ </p>.<p>‘ನಮ್ ಶಿವಣ್ಣ. ಈಗ ನಮ್ ಪಕ್ಷದ ಅಧ್ಯಕ್ಷ ಆಗಿ ಆರು ವರ್ಷ ಮುಗಿದಿದೆ. ಅವರ ಕೆಪಾಸಿಟಿಗೆ ಸಿಗಬೇಕಾಗಿರೋ ಸ್ಥಾನ ಸಿಕ್ಕರೆ ಮುಂದೆ ಕಥೇನೆ ಬೇರೆ ಇರುತ್ತೆ’ ಎಂದೆ. </p>.<p>ಮರು ವಾರ. ಹೆಂಡತಿ ಫೋನ್ ಮಾಡಿದಳು. ‘ರೀ, ಮನೆಗೆ ಎರಡೆರಡು ಗ್ಯಾಸ್ ಸಿಲಿಂಡರ್ ತಂದು ಕೊಟ್ರು ರೀ. ಪೆಟ್ರೋಲ್ ಬಂಕ್ಗಳಲ್ಲಿಯೂ ಆಯಿಲ್ ತುಂಬಿರೋ ಲಾರಿಗಳು ಬಂದು ನಿಂತಿವೆ. ಏನ್ರೀ ಮ್ಯಾಜಿಕ್ ಇದು?’ ಖುಷಿಯಿಂದ ಕೇಳಿದಳು. </p>.<p>‘ಎಲ್ಲ ನಮ್ಮಣ್ಣ ಮಾಡಿಸಿರೋದು. ಡೈರೆಕ್ಟ್ ಬೆಂಗಳೂರಿಗೆ ಕತಾರ್ನಿಂದ ಗ್ಯಾಸ್ ಪೈಪ್ಲೈನ್, ಹೊರ್ಮುಜ್ ಜಲಸಂಧಿಯಿಂದ ತೈಲ ಪೈಪ್ಲೈನ್ ಕನೆಕ್ಷನ್ ಕೊಡಿಸಿದ್ದಾರೆ’.</p>.<p>‘ವಾವ್, ಈ ದಿಢೀರ್ ಬೆಳವಣಿಗೆಗೆ ಏನು ಕಾರಣ..?’ </p>.<p>‘ಏನಿಲ್ಲ, ನಿಮ್ಮನ್ನ ಸಿಎಂ ಮಾಡಬೇಕಂದ್ರೆ ನಿಮ್ ರಾಜ್ಯಕ್ಕೆ ಪೆಟ್ರೋಲು, ಗ್ಯಾಸು ಸಿಗೋ ಹಂಗೆ ಮಾಡಿ ಅಂತ ಹೈಕಮಾಂಡ್ನವರು ಹೇಳಿದ್ರಂತೆ!’. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>