<p>‘ಗುರೂ, ಈ ಸಲ ಹಾವೇರಿ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಲ್ಲಿ ಏನೇನು ವಿಷಯ ಚರ್ಚೆಗೆ ಬರಬಹುದು?’</p>.<p>‘ಯಾವು ಬರ್ತವೋ ಬಿಡ್ತವೋ, ಕೊರೊನಾ ವಿಷಯ ಅಂತೂ ಬಂದೇ ಬರ್ತತಿ ಅಂತ ಪರಿಷತ್ ಅಧ್ಯಕ್ಷರೇ ಹೇಳಿದ್ದು ಪೇಪರ್ನಾಗೆ ಬಂದಿತ್ತಪ್ಪ’.</p>.<p>‘ಹಂಗಾದ್ರೆ ಆ ಗೋಷ್ಠೀಲಿ ಏನೇನ್ ಚರ್ಚೆಗೆ ಬರಬಹುದು ಅಂತೀಯ?’</p>.<p>‘ಜನಪದ ಸಾಹಿತ್ಯದಲ್ಲಿ ಕೊರೊನಾ, ಕೊರೊನಾ ಮತ್ತು ಹಳಗನ್ನಡ ಸಾಹಿತ್ಯ, ಪಂಪನ ಕಾಲದಲ್ಲಿ ಕೊರೊನಾ ಸಾಧ್ಯತೆಗಳು, ಆಧುನಿಕ ಕನ್ನಡ ಕಾವ್ಯದಲ್ಲಿ ಕೊರೊನಾ, ಮಾಸ್ಕ್ ಮತ್ತು ದನಗಳ ಬಾಯಿಕುಕ್ಕೆ ಒಂದು ಸಾಮ್ಯತೆ... ಇತ್ಯಾದಿ’.</p>.<p>‘ಅಷ್ಟೇ ಅಲ್ಲ... ಕಷಾಯ ಕಾವ್ಯ, ಲಾಕ್ಡೌನ್ ಲಲಿತ ಪ್ರಬಂಧಗಳು, ಕ್ವಾರಂಟೈನ್ ಕವಿತೆಗಳು, ಸ್ಯಾನಿಟೈಸರ್ ಸಾನೆಟ್ಗಳು ಇತ್ಯಾದಿನೂ ಬರುತ್ತವೆ ನೋಡ್ತಿರು...’</p>.<p>‘ಸಮ್ಮೇಳನದಲ್ಲಿ ಕೊರೊನಾ ಕವಿಗೋಷ್ಠಿ ಅಂತಾನೇ ಒಂದು ಮಾಡಿದ್ರೆ ಹೆಂಗೆ?’</p>.<p>‘ಮಾಡಬಹುದು, ಒಳ್ಳೆ ಐಡಿಯಾ... ಅಧ್ಯಕ್ಷರಿಗೆ ಹೇಳಿದ್ರೆ ಖಂಡಿತ ಮಾಡ್ತಾರೆ.’</p>.<p>‘ಈಗ ಸಾಹಿತ್ಯ ಸಮ್ಮೇಳನ ಅಂದ್ರೆ ಮುಖ್ಯ ಆಕರ್ಷಣೆ ಊಟ. ಕೊರೊನಾ ಇನ್ನೂ ಇರೋದ್ರಿಂದ ಏನು ಊಟ ಕೊಡಬಹುದು?’</p>.<p>‘ಊಟ ಏನಾದ್ರು ಕೊಡ್ಲಿ, ವೆರೈಟಿ ವೆರೈಟಿ ಕಷಾಯ ಅಂತೂ ಕೊಡ್ಲೇಬೇಕು ಅಲ್ವ?’</p>.<p>‘ಹೌದು, ಸಮ್ಮೇಳನಕ್ಕೆ ಬರೋ ಹೆಣ್ಣುಮಕ್ಕಳಿಗೆ ಕಷಾಯ ಮಾಡೋ ಜವಾಬ್ದಾರಿ ವಹಿಸ್ತಾರಂತೆ. ಕಷಾಯ ಮಾಡೋದ್ರಲ್ಲಿ ಈಗ ಅವರು ಎಕ್ಸ್ಪರ್ಟ್ ಆಗಿದಾರಲ್ಲ ಅದ್ಕೆ...’</p>.<p>‘ಹೌದಾ? ಮತ್ತೆ ಪುರುಷರಿಗೆ ಏನು ಜವಾಬ್ದಾರಿ ವಹಿಸ್ತಾರಂತೆ?’</p>.<p>‘ಕೊರೊನಾ ಟೈಮಲ್ಲಿ ಪುರುಷರು ಯಾವುದರಲ್ಲಿ ಎಕ್ಸ್ಪರ್ಟ್ ಆಗಿದಾರೆ ಅದನ್ನ ವಹಿಸ್ತಾರಂತೆ...’</p>.<p>‘ಅಂದ್ರೆ ಯಾವುದು?’</p>.<p>‘ಪಾತ್ರೆ ತೊಳೆಯೋ ಕೆಲ್ಸ!’</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>‘ಗುರೂ, ಈ ಸಲ ಹಾವೇರಿ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಲ್ಲಿ ಏನೇನು ವಿಷಯ ಚರ್ಚೆಗೆ ಬರಬಹುದು?’</p>.<p>‘ಯಾವು ಬರ್ತವೋ ಬಿಡ್ತವೋ, ಕೊರೊನಾ ವಿಷಯ ಅಂತೂ ಬಂದೇ ಬರ್ತತಿ ಅಂತ ಪರಿಷತ್ ಅಧ್ಯಕ್ಷರೇ ಹೇಳಿದ್ದು ಪೇಪರ್ನಾಗೆ ಬಂದಿತ್ತಪ್ಪ’.</p>.<p>‘ಹಂಗಾದ್ರೆ ಆ ಗೋಷ್ಠೀಲಿ ಏನೇನ್ ಚರ್ಚೆಗೆ ಬರಬಹುದು ಅಂತೀಯ?’</p>.<p>‘ಜನಪದ ಸಾಹಿತ್ಯದಲ್ಲಿ ಕೊರೊನಾ, ಕೊರೊನಾ ಮತ್ತು ಹಳಗನ್ನಡ ಸಾಹಿತ್ಯ, ಪಂಪನ ಕಾಲದಲ್ಲಿ ಕೊರೊನಾ ಸಾಧ್ಯತೆಗಳು, ಆಧುನಿಕ ಕನ್ನಡ ಕಾವ್ಯದಲ್ಲಿ ಕೊರೊನಾ, ಮಾಸ್ಕ್ ಮತ್ತು ದನಗಳ ಬಾಯಿಕುಕ್ಕೆ ಒಂದು ಸಾಮ್ಯತೆ... ಇತ್ಯಾದಿ’.</p>.<p>‘ಅಷ್ಟೇ ಅಲ್ಲ... ಕಷಾಯ ಕಾವ್ಯ, ಲಾಕ್ಡೌನ್ ಲಲಿತ ಪ್ರಬಂಧಗಳು, ಕ್ವಾರಂಟೈನ್ ಕವಿತೆಗಳು, ಸ್ಯಾನಿಟೈಸರ್ ಸಾನೆಟ್ಗಳು ಇತ್ಯಾದಿನೂ ಬರುತ್ತವೆ ನೋಡ್ತಿರು...’</p>.<p>‘ಸಮ್ಮೇಳನದಲ್ಲಿ ಕೊರೊನಾ ಕವಿಗೋಷ್ಠಿ ಅಂತಾನೇ ಒಂದು ಮಾಡಿದ್ರೆ ಹೆಂಗೆ?’</p>.<p>‘ಮಾಡಬಹುದು, ಒಳ್ಳೆ ಐಡಿಯಾ... ಅಧ್ಯಕ್ಷರಿಗೆ ಹೇಳಿದ್ರೆ ಖಂಡಿತ ಮಾಡ್ತಾರೆ.’</p>.<p>‘ಈಗ ಸಾಹಿತ್ಯ ಸಮ್ಮೇಳನ ಅಂದ್ರೆ ಮುಖ್ಯ ಆಕರ್ಷಣೆ ಊಟ. ಕೊರೊನಾ ಇನ್ನೂ ಇರೋದ್ರಿಂದ ಏನು ಊಟ ಕೊಡಬಹುದು?’</p>.<p>‘ಊಟ ಏನಾದ್ರು ಕೊಡ್ಲಿ, ವೆರೈಟಿ ವೆರೈಟಿ ಕಷಾಯ ಅಂತೂ ಕೊಡ್ಲೇಬೇಕು ಅಲ್ವ?’</p>.<p>‘ಹೌದು, ಸಮ್ಮೇಳನಕ್ಕೆ ಬರೋ ಹೆಣ್ಣುಮಕ್ಕಳಿಗೆ ಕಷಾಯ ಮಾಡೋ ಜವಾಬ್ದಾರಿ ವಹಿಸ್ತಾರಂತೆ. ಕಷಾಯ ಮಾಡೋದ್ರಲ್ಲಿ ಈಗ ಅವರು ಎಕ್ಸ್ಪರ್ಟ್ ಆಗಿದಾರಲ್ಲ ಅದ್ಕೆ...’</p>.<p>‘ಹೌದಾ? ಮತ್ತೆ ಪುರುಷರಿಗೆ ಏನು ಜವಾಬ್ದಾರಿ ವಹಿಸ್ತಾರಂತೆ?’</p>.<p>‘ಕೊರೊನಾ ಟೈಮಲ್ಲಿ ಪುರುಷರು ಯಾವುದರಲ್ಲಿ ಎಕ್ಸ್ಪರ್ಟ್ ಆಗಿದಾರೆ ಅದನ್ನ ವಹಿಸ್ತಾರಂತೆ...’</p>.<p>‘ಅಂದ್ರೆ ಯಾವುದು?’</p>.<p>‘ಪಾತ್ರೆ ತೊಳೆಯೋ ಕೆಲ್ಸ!’</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>