‘ಸದನದಲ್ಲಿದ್ದ ಮೂರೂಮುಕ್ಕಾಲು ಸದಸ್ಯರಿಗೆ ಅಮರಿಕ್ಯಂಡಿದ್ದ ಬಾಲಗ್ರಹ ಎಲ್ಲೀದು? ಜನಕ್ಕೆ ಎಲ್ಲರೂ ಸೇರಿ ಎರಚ್ತಿರೋ ಮಂಕುಬೂದಿ ಕಾಣಿಸ್ತಾ ಅದಾ? ಇಲ್ಲ ತಾನೆ? ಈ ಪ್ರಶ್ನೆಗಳಿಗೆ ನಿಮ್ಮಯ್ಯನಾಣೆಗೂ ಉತ್ತರ ಗೊತ್ತಿಲ್ಲ ಅಲ್ಲುವೇ! ನೋಡ್ಲಾ, ಶೇರುಪೇಟೆ ದುಡ್ಡೂ ಹಿಂಗೀಯೇ! ಪೂರ್ಣಚಂದ್ರತೇಜಸ್ವಿ ಕಥೇಲಿ ಪ್ಯಾರ ‘ಕಾಣ್ತಿತೆ ಸಾಮಿ, ಆದ್ರೆ ಕಾಣಕ್ಕಿಲ್ಲ’ ಅಂದ್ನಲ್ಲಾ ಹಂಗೇ ಶೇರುಪೇಟೆ ಕಾಸೂ ಕಾಮಗಾರಿ ಪರ್ಸೆಂಟೇಜ್ ಥರಾ ಕಾಣ್ತದೆ, ಆದ್ರೆ ಯಾರಿಗೆ, ಎಷ್ಟೋಗ್ಯದೆ ಅಂತ ಬಿಲ್ಕುಲ್ ಗೊತ್ತಾಗಕುಲ್ಲ’ ಅಂದು ನಿಟ್ಟುಸಿರುಬುಟ್ಟರು.