‘ಹ್ಞೂಂ ಕಲಾ, ಅದುಕ್ಕೆ ಇರಬಕು ಹುಲಿಯಾ ಚಾಮರಾಜನಗರಕ್ಕೋಗಿ ‘ರಾಕ್ಸಸರು ಇದಾನಸೌದದಗೇ ಬಂದು ಕುಂತವ್ರೆ. ಅವರುನ್ನ ಓಡಿಸಬಕು ತಯಾರಿ ತಗಳಿ’ ಅಂತ ಗರ್ಜಿಸಿದ್ದು’ ಅಂತ ತುರೇಮಣೆ ಅಂದುದ್ಕೆ ಯಂಟಪ್ಪಣ್ಣ, ‘ಅವೇಗ್ಯ ನನ ಮಕ್ಕಳಾ, ಕೆಂಗಲ್ಲು ಇದಾನಸೌದ ಕಟ್ಟಿದ ಮ್ಯಾಲೆ ಈತರದ ಹುನ್ನಾರ ಇದಾನಸೌದದ ಒಳಗೆ ನಡೀತದೆ ಅಂತ್ಲೇ ಅಂದ್ಕಂಡಿರಲಿಲ್ಲ. ಈಗ್ಲವು ಇದಾನಸೌದದೊಳಗೆ ತೊಡೆ ತಟ್ಟಿ ಆಯ್ತು, ಕುಸ್ತಿ ಮಾಡಿ ಆಯ್ತು, ಬಿರಿಯಾನಿ ತರಿಸ್ಕ ತಿಂದು ಮನಿಕಂಡಿದ್ದೂ ಆಯ್ತು!’ ಅಂತು.