‘ನೋಡ್ಲಾ, ಮೊದಲು ಜಲಲ ಜಲಧಾರೆ ಸುರುವಾತಲ್ಲಾ ಜನಕ್ಕೇನಾದ್ರೂ ಪಾಯ್ದೆ ಆಯ್ತಾ? ಇಲ್ಲ! ಆಮೇಲೆ ಪಾದಯಾತ್ರೆ, ಉತ್ಸವ ನಡೆದವಲ್ಲಾ ಜನ ಊರಿಗೋಗಕೆ ದಾರಿ ಇಲ್ದೆ ದಿಕ್ಕಾಪಾಲಾದ್ರು ಅಷ್ಟೇಯ? ಮಾಮೇರಿ ಮಳೆ ಬಿದ್ದು ಜಲಾಘಾತ ಆಯ್ತಲ್ಲಾ. ಜನದ ಕಷ್ಟ ಕೇಳಕೆ ಮಂತ್ರಿಗಳು ಒಂದು ದಿನ ಬಂದು ಕಣ್ಣೀರಾಕಿ ಹೋದ್ರು. ‘ಸಾ, ನಮ್ಮ ಕಷ್ಟ ನೋಡಿ!’ ಅಂದ್ರೆ ‘ದಿನಾ ಸಾಯೋರ್ಗೆ ಅಳೋರ್ಯಾರು ತಡೀರ್ಲಾ’ ಅಂದೋರೆ ಸ್ಪಂದನದಲ್ಲಿ ‘ಚೀಲ ನಿಮ್ದು ಅಕ್ಕಿ ನಮ್ದು, ಲಾಂಗು ಡ್ರೈವು ಹೋಗುಮಾ 150 ಸೀಟು ಗೆಲ್ಲುಮಾ...’ ಅಂತ ರೆಡಿಯಾಯ್ತಾವ್ರೆ’ ಅಂದರು.