‘ಬರೀ ಕಷ್ಟಪಟ್ಟರೆ ಪ್ರಯೋಜನವಿಲ್ಲ, ತಂತ್ರಗಾರಿಕೆ ಕಲಿಯಬೇಕು. ಮೊನ್ನೆ ಯಡ್ಯೂರಪ್ಪ ಮತ್ತು ಸಿದ್ದರಾಮಯ್ಯ ಕೋವಿಡ್ ಪಾಸಿಟಿವ್ ಆಗಿ ಒಂದೇ ಆಸ್ಪತ್ರೆ ಸೇರಿದ್ದರು. ಇಬ್ಬರಿಗೂ ಏಕಕಾಲಕ್ಕೆ ಕೋವಿಡ್ ಬರುವುದು, ಒಂದೇ ದವಾಖಾನೆ ಸೇರುವುದು, ಪರಸ್ಪರ ಅಭಿನಂದಿಸಿಕೊಳ್ಳುವುದು ಏನನ್ನು ತೋರಿಸುತ್ತದೆ?! ಶ್ರೀರಾಮುಲು ಕೂಡಾ ಆಸ್ಪತ್ರೆ ದಾರಿ ಕಂಡುಕೊಂಡರು. ಸ್ವಾತಂತ್ರ್ಯ ಹೋರಾಟದಲ್ಲಿ, ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದವರು ಅಧಿಕಾರ ಪಡೆದರು. ಹಾಗೆಯೇ ಈಗ ಕೋವಿಡ್ ಒಳ್ಳೆಯ ಅವಕಾಶ ಸೃಷ್ಟಿಸಿದೆ...’