‘ನೋಡ್ಲಾ, ಒಬ್ರು ಸಾಸಕರು ಕರ್ನಾಟಕದೇಲಿ ಕತ್ತೆಷ್ಟವೆ ಅಂತ ಅಸೆಂಬ್ಲೀಲಿ ಪ್ರಶ್ನೆ ಕೇಳಿದ್ರು. ಆಗ ಇದಾನಸೌದದಗೆ ಒಬ್ಬ ಬುದುವಂತ ಐಎಎಸ್ ಎಣ್ಣುಮಗ ಸೆಕೆಟ್ರಿ ಆಗಿತ್ತು. ಎಲ್ಲಾ ಗ್ರಾಮ ಪಂಚಾತಿಗಳ ಕತ್ತೆ ಲೆಕ್ಕ ನೋಡಿದ ಆಯಮ್ಮನಿಗೆ ಗೊತ್ತಾಯ್ತು ಇದು ತಳ್ಳಿ ಲೆಕ್ಕ ಅಂತ. ‘ಪೀಯೆ ಇದುಕ್ಕೆ ಇನ್ನೆರಡು ಕತ್ತೆ ಸೇರಿಸಿ ಕೊಡು’ ಅಂತ ಅಮ್ಮ ಅಂದ್ರು. ಪೀಯೆ ಕೇಳಿದ ‘ಎರಡೇ ಯಾಕೆ ಮೇಡಂ’ ಅಂತ. ಮೇಡಂ ‘ಲೇಯ್, ಈ ಬೂಸಿ ಲೆಕ್ಕ ಒಪ್ಪಿಗ್ಯಂತಿರ ನೀನು ನಾನು ಕತ್ತೆಗಳೇ ಅಲ್ವೇ!’ ಅಂದ್ರಂತೆ. ಕತ್ತೆಗಳೇನ್ಲಾ ಬೆಂಗಳೂರಗೆ ಬೇಕಾದೋಟವೆ!’ ಅಂದ ಕಿಷ್ಣಣ್ಣನ ಕತೆಯ ಕ್ಯಾತೆಯಲ್ಲಿ ನಾನು ಗೈರುವಿಲೆಯಾಗಿದ್ದೆ.