ಕಳೆದ ವಾರ ಬಿಗ್ ಬಿ ಬಚ್ಚನ್ ಬಂಗಲೆಯ ಕಾಂಪೌಂಡ್ ಹಾರಿ ಒಳಹೋಗಿದ್ದ ಕತೆಯನ್ನು ಮರಿ ಕೊರೊನಾ ವರ್ಣಿಸಲಾರಂಭಿಸುತ್ತಿದ್ದಂತೆ, ಕೊರೊನಣ್ಣ ಥೇಟ್ ಶೋಲೆಯ ಗಬ್ಬರ್ ಸಿಂಗ್ ಧ್ವನಿಯಲ್ಲಿ ‘ಕಿತನೇ ಆದ್ಮೀ ಥೆ’ ಎಂದು ಕೇಳಿತು. ಮರಿ ಕೊರೊನಾ ‘ನಾಲ್ಕು’ ಎಂದಿತು. ತುಸು ಯೋಚಿಸಿದ ಕೊರೊನಣ್ಣ, ‘ಸರಿ, ಸುಮ್ಮನೆ ತಡವಿ ಬಾ ಸಾಕು, ಏನರ ಹೆಚ್ಚುಕಡಿಮೆ ಮಾಡಬ್ಯಾಡ, ಅವರ ಅಭಿಮಾನಿಗಳ ರೋಷ ಹೆಚ್ಚಾದ್ರೆ ಕಷ್ಟ’ ಎಂದು ಖಡಕ್ಕಾಗಿ ಹೇಳಿತು.