<p>‘ಅಬ್ಬಾ! ಅಂತೂ ‘ವೋಟಾಟ ಟೂರ್ನಮೆಂಟ್’ ಮುಗಿಯಿತು, ಕುತೂಹಲ, ಕೋಲಾಹಲಕ್ಕೆ ತೆರೆ ಬಿತ್ತು...’ ನ್ಯೂಸ್ ಪೇಪರ್ ಓದುತ್ತಾ ಸುಮಿ ನಿಟ್ಟುಸಿರುಬಿಟ್ಟಳು.</p>.<p>‘ಕುತೂಹಲ ಮುಗಿದರೂ ಕೋಲಾಹಲ ಮುಗಿಯಲ್ಲ, ಗೆದ್ದವರು ತೊಡೆ ತಟ್ಟುತ್ತಾರೆ, ಸೋತವರು ಹೆಡೆ ಎತ್ತುತ್ತಾರೆ. ಹೀಗಾಗಿ ಕೂಗಾಟ, ಬೈದಾಟ ಮುಂದುವರಿಯುತ್ತದೆ’ ಅಂದ ಶಂಕ್ರಿ.</p>.<p>‘ವೆಸ್ಟ್ ಬೆಂಗಾಲ್ ಪಂದ್ಯ ಹೈ ವೋಲ್ಟೇಜ್ ಪಂದ್ಯ ಆಗಿತ್ತು. ಹಾಲಿ ಚಾಂಪಿಯನ್ ಕೋಲ್ಕತ್ತ ರೈಡರ್ಸ್ ವಿರುದ್ಧ ಎನ್ಡಿಎ ಟೈಗರ್ಸ್ ಡಬ್ಬಲ್ ಸೆಂಚುರಿ ಬಾರಿಸಿ ಭರ್ಜರಿ ಗೆಲುವು ಪಡೆದರು’.</p>.<p>‘ದೆಹಲಿ ಪರಿಣತ ಕೋಚ್ಗಳ ಕ್ರೀಡಾ ತಂತ್ರಗಾರಿಕೆ ಎನ್ಡಿಎ ಪಡೆ ಗೆಲುವಿಗೆ ಕಾರಣವಂತೆ. ಸಾಲದ್ದಕ್ಕೆ ಕೋಲ್ಕತ್ತ ರೈಡರ್ಸ್ ನಿಖರವಾದ ಬೌಲಿಂಗ್ ಮಾಡಲಿಲ್ಲವಂತೆ, ಕ್ಯಾಚುಗಳನ್ನು ಕೈಚೆಲ್ಲಿದರು, ಕ್ಷೇತ್ರ ರಕ್ಷಣೆಯಲ್ಲೂ ಎಡವಿದರಂತೆ’.</p>.<p>‘ತಮಿಳುನಾಡು ಟೂರ್ನಿಯಲ್ಲಿ ಅಚ್ಚರಿ ಫಲಿತಾಂಶ! ಪದಾರ್ಪಣೆ ಪಂದ್ಯದಲ್ಲೇ ದಳಪತಿ ತಂಡ ಅದ್ಭುತ ಯಶಸ್ಸು ಕಂಡಿದೆ. ಕ್ಯಾಪ್ಟನ್ ದಳಪತಿ ಆಲ್ರೌಂಡರ್ ಆಟವಾಡಿ ತಂಡವನ್ನು ಮೇಲೆತ್ತಿದ್ದಾರೆ’.</p>.<p>‘ಹೌದು. ದಳಪತಿಯನ್ನು ಕ್ರೀಡಾಕೂಸು ಅಂತ ನಿರ್ಲಕ್ಷ್ಯ ಮಾಡಿದ್ದ ಎದುರಾಳಿ ತಂಡದ ಘಟಾನುಘಟಿಗಳು ಮಣ್ಣು ಮುಕ್ಕಿದರು. ದಳಪತಿ ಬಾರಿಸಿದ ಎಲ್ಲಾ ಬಾಲ್ಗಳನ್ನು ಗ್ಯಾಲರಿಯ ಪ್ರೇಕ್ಷಕರು ಕ್ಯಾಚ್ ಹಿಡಿದು ಮ್ಯಾಚ್ ಗೆಲ್ಲಿಸಿದರಂತೆ’.</p>.<p>‘ಕೇರಳಂ ಟೂರ್ನಿಯಲ್ಲಿ ಕೈ ಪಡೆ ಕಪ್ ಗೆದ್ದಿದೆ. ಹಾಲಿ ಚಾಂಪಿಯನ್ ಜಾಗ ಖಾಲಿ ಮಾಡಿದೆ. ಅಸ್ಸಾಂ, ಪುದುಚೆರಿ ಪಂದ್ಯಾವಳಿ ಅಷ್ಟಾಗಿ ಕುತೂಹಲ ಕೆರಳಿಸಲಿಲ್ಲ’.</p>.<p>‘ಕುತೂಹಲವಿದ್ದ ಲೋಕಲ್ ಟೂರ್ನಿಯ ಎರಡೂ ಪಂದ್ಯಗಳನ್ನು ಕೈ ಪಡೆ ಗೆದ್ದಿದೆ. ಗೆದ್ದರೂ ಕಪ್ ಸಿಗೋದಿಲ್ಲ, ಕೇವಲ ಸರ್ಟಿಫಿಕೇಟ್ ಅಷ್ಟೆ ಎಂದು ಕಮಲ ಪಡೆ ಪಂದ್ಯವನ್ನು ಕೈ ಚೆಲ್ಲಿತೆ?’</p>.<p>‘ಏನನ್ನೂ ಚೆಲ್ಲಲಿಲ್ಲ, ಮುಂದಿನ ಮಹಾಟೂರ್ನಿ ಗೆಲ್ಲಲು ಪಿಚ್ ಸ್ಟಡಿ ಮಾಡಿಕೊಂಡು ಸಜ್ಜಾಗಿದ್ದೇವೆ ಎನ್ನಬಹುದು ಅಲ್ವಾ?’ ಅಂದ ಶಂಕ್ರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಅಬ್ಬಾ! ಅಂತೂ ‘ವೋಟಾಟ ಟೂರ್ನಮೆಂಟ್’ ಮುಗಿಯಿತು, ಕುತೂಹಲ, ಕೋಲಾಹಲಕ್ಕೆ ತೆರೆ ಬಿತ್ತು...’ ನ್ಯೂಸ್ ಪೇಪರ್ ಓದುತ್ತಾ ಸುಮಿ ನಿಟ್ಟುಸಿರುಬಿಟ್ಟಳು.</p>.<p>‘ಕುತೂಹಲ ಮುಗಿದರೂ ಕೋಲಾಹಲ ಮುಗಿಯಲ್ಲ, ಗೆದ್ದವರು ತೊಡೆ ತಟ್ಟುತ್ತಾರೆ, ಸೋತವರು ಹೆಡೆ ಎತ್ತುತ್ತಾರೆ. ಹೀಗಾಗಿ ಕೂಗಾಟ, ಬೈದಾಟ ಮುಂದುವರಿಯುತ್ತದೆ’ ಅಂದ ಶಂಕ್ರಿ.</p>.<p>‘ವೆಸ್ಟ್ ಬೆಂಗಾಲ್ ಪಂದ್ಯ ಹೈ ವೋಲ್ಟೇಜ್ ಪಂದ್ಯ ಆಗಿತ್ತು. ಹಾಲಿ ಚಾಂಪಿಯನ್ ಕೋಲ್ಕತ್ತ ರೈಡರ್ಸ್ ವಿರುದ್ಧ ಎನ್ಡಿಎ ಟೈಗರ್ಸ್ ಡಬ್ಬಲ್ ಸೆಂಚುರಿ ಬಾರಿಸಿ ಭರ್ಜರಿ ಗೆಲುವು ಪಡೆದರು’.</p>.<p>‘ದೆಹಲಿ ಪರಿಣತ ಕೋಚ್ಗಳ ಕ್ರೀಡಾ ತಂತ್ರಗಾರಿಕೆ ಎನ್ಡಿಎ ಪಡೆ ಗೆಲುವಿಗೆ ಕಾರಣವಂತೆ. ಸಾಲದ್ದಕ್ಕೆ ಕೋಲ್ಕತ್ತ ರೈಡರ್ಸ್ ನಿಖರವಾದ ಬೌಲಿಂಗ್ ಮಾಡಲಿಲ್ಲವಂತೆ, ಕ್ಯಾಚುಗಳನ್ನು ಕೈಚೆಲ್ಲಿದರು, ಕ್ಷೇತ್ರ ರಕ್ಷಣೆಯಲ್ಲೂ ಎಡವಿದರಂತೆ’.</p>.<p>‘ತಮಿಳುನಾಡು ಟೂರ್ನಿಯಲ್ಲಿ ಅಚ್ಚರಿ ಫಲಿತಾಂಶ! ಪದಾರ್ಪಣೆ ಪಂದ್ಯದಲ್ಲೇ ದಳಪತಿ ತಂಡ ಅದ್ಭುತ ಯಶಸ್ಸು ಕಂಡಿದೆ. ಕ್ಯಾಪ್ಟನ್ ದಳಪತಿ ಆಲ್ರೌಂಡರ್ ಆಟವಾಡಿ ತಂಡವನ್ನು ಮೇಲೆತ್ತಿದ್ದಾರೆ’.</p>.<p>‘ಹೌದು. ದಳಪತಿಯನ್ನು ಕ್ರೀಡಾಕೂಸು ಅಂತ ನಿರ್ಲಕ್ಷ್ಯ ಮಾಡಿದ್ದ ಎದುರಾಳಿ ತಂಡದ ಘಟಾನುಘಟಿಗಳು ಮಣ್ಣು ಮುಕ್ಕಿದರು. ದಳಪತಿ ಬಾರಿಸಿದ ಎಲ್ಲಾ ಬಾಲ್ಗಳನ್ನು ಗ್ಯಾಲರಿಯ ಪ್ರೇಕ್ಷಕರು ಕ್ಯಾಚ್ ಹಿಡಿದು ಮ್ಯಾಚ್ ಗೆಲ್ಲಿಸಿದರಂತೆ’.</p>.<p>‘ಕೇರಳಂ ಟೂರ್ನಿಯಲ್ಲಿ ಕೈ ಪಡೆ ಕಪ್ ಗೆದ್ದಿದೆ. ಹಾಲಿ ಚಾಂಪಿಯನ್ ಜಾಗ ಖಾಲಿ ಮಾಡಿದೆ. ಅಸ್ಸಾಂ, ಪುದುಚೆರಿ ಪಂದ್ಯಾವಳಿ ಅಷ್ಟಾಗಿ ಕುತೂಹಲ ಕೆರಳಿಸಲಿಲ್ಲ’.</p>.<p>‘ಕುತೂಹಲವಿದ್ದ ಲೋಕಲ್ ಟೂರ್ನಿಯ ಎರಡೂ ಪಂದ್ಯಗಳನ್ನು ಕೈ ಪಡೆ ಗೆದ್ದಿದೆ. ಗೆದ್ದರೂ ಕಪ್ ಸಿಗೋದಿಲ್ಲ, ಕೇವಲ ಸರ್ಟಿಫಿಕೇಟ್ ಅಷ್ಟೆ ಎಂದು ಕಮಲ ಪಡೆ ಪಂದ್ಯವನ್ನು ಕೈ ಚೆಲ್ಲಿತೆ?’</p>.<p>‘ಏನನ್ನೂ ಚೆಲ್ಲಲಿಲ್ಲ, ಮುಂದಿನ ಮಹಾಟೂರ್ನಿ ಗೆಲ್ಲಲು ಪಿಚ್ ಸ್ಟಡಿ ಮಾಡಿಕೊಂಡು ಸಜ್ಜಾಗಿದ್ದೇವೆ ಎನ್ನಬಹುದು ಅಲ್ವಾ?’ ಅಂದ ಶಂಕ್ರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>