‘ಈ ಲಾಕ್ಡೌನ್ನಲ್ಲಿ ಒದಗಿಸೋದು ಕಷ್ಟವೇ. ಯಾಕಂದ್ರೆ ಮಾರ್ಗಸೂಚಿಯಲ್ಲಿ ಕಾಣಿಸಿರೋ ಹಾಲು, ತರಕಾರಿ, ದಿನಸಿ, ಔಷಧಿ ಬ್ರ್ಯಾಕೆಟ್ಟಿಗೆ ಅದು ಸೇರೋಲ್ಲ. ಅಂದ್ರೆ ಕನ್ನಡಕ ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಇಲ್ಲ. ಹಾಗೊಮ್ಮೆ ಅಗತ್ಯ ಅಂದ್ರೂ ಕನ್ನಡಕದ ಅಂಗಡಿ ತೆಗೆಯೋದು ಹತ್ತು ಗಂಟೆ ಮೇಲೆ. ನಿಮಗೆ ಗೊತ್ತಿರೋ ಹಾಗೆ ಹತ್ತರ ಮೇಲೆ ಕತ್ತು ಹೊರಹಾಕಿದರೆ ಕುತ್ತು ಗ್ಯಾರಂಟಿ’ ಹೊರಗೆ ಹೋಗಲಾಗದು ಎಂದು ಮೆಲ್ಲಗೆ ಜಾರಿಕೊಂಡೆ.