<p>‘ಕಾರ್ಮಿಕರ ದಿನಾಚರಣೆ ಶುಭಾಶಯಗಳು’ ಬೆಕ್ಕಣ್ಣ ಬೆಳಗ್ಗೆ ಶುಭ ಕೋರಿತು.</p>.<p>ನಾನು ಮಾತಾಡದೇ ಸುಮ್ಮನಿದ್ದೆ. ‘ನೀವು ಹೆಣ್ಮಕ್ಕಳು ಒಳಗೂ ಕಾರ್ಮಿಕರು... ಹೊರಗೂ ಕಾರ್ಮಿಕರು! ಪಾಪ... ದಿನಾ ಅಡಗಿ ಮಾಡಿ ದಣೀತಿ. ಇವತ್ ಅಡಗಿ ಮನಿಗಿ ರಜಾ ಕೊಡು. ಹೊರಗೆ ಊಟಕ್ಕೆ ಹೋಗೂಣು’ ಎಂದಿತು ಬೆಕ್ಕಣ್ಣ.</p>.<p>‘ಬಿಲ್ ನಾನೇ ಕೊಡಬೇಕಲ್ಲ... ಈಗ ಹೋಟೆಲ್ ಊಟ, ತಿಂಡಿ ಎಲ್ಲ ತುಟ್ಟಿ ಆಗ್ಯಾವು’ ಎಂದು ಸಿಡುಕಿದೆ.</p>.<p>‘ಮತ್ತ ಕಾರ್ಮಿಕರ ದಿನಾಚರಣೆ ಸ್ಪೆಶಲ್ ಏನು?’</p>.<p>‘ನಿಮ್ ಮೋದಿಮಾಮಾರೆ ಸ್ಪೆಶಲ್ ಗಿಫ್ಟ್ ಕೊಟ್ಟಾರಲ್ಲ! ವಾಣಿಜ್ಯ ಸಿಲಿಂಡರ್ ಬೆಲೆ ಏರಿಸಿದ್ದಲ್ಲದೇ ಬಡವ್ರು ಬಳಸೋ ಸಣ್ಣ ಸಿಲಿಂಡರ್ ಬೆಲೆನೂ ಗಗನಕ್ಕೆ ಏರಿಸ್ಯಾರೆ’ ಎಂದು ಹಂಗಿಸಿದೆ. </p>.<p>‘ನಮ್ ದೇಶಕ್ಕಷ್ಟೇ ಅಲ್ಲ, ಯುದ್ಧದ ಬಿಸಿ ಎಲ್ಲಾ ದೇಶಗಳಿಗೂ ತಟ್ಟೈತಿ... ಸುಮ್ಸುಮ್ನೆ ಮೋದಿಮಾಮಾರಿಗೆ ಬೈಯಬ್ಯಾಡ’ ಎಂದು ಬೆಕ್ಕಣ್ಣ ಮೂತಿ ತಿರುವಿತು. </p>.<p>‘ಹಂಗಾರೆ ಪಂಚರಾಜ್ಯ ಚುನಾವಣೆ ಮುಗಿಯೂವರೆಗೆ ಕಾದು, ಚುನಾವಣೆ ಮುಗಿದ ಮ್ಯಾಗೆ ಎದಕ್ಕ ಏರಿಸಬಕು?’ ಎಂದು ನಾನು ರೇಗಿದೆ.</p>.<p>‘ಹೋಗ್ಲಿಬಿಡು... ನನಗೆ, ನಿನಗೆ ಎದಕ್ಕೆ ಜಗಳ... ಮಳಿ ಬೆಳಿ ವಿಚಾರ ಮಾತಾಡೂಣು’ ಎಂದು ಮಾತು ಬದಲಿಸಿತು.</p>.<p>‘ಮಳಿ ಬಂದ್ರೆ ಬೆಳಿ ನಷ್ಟ ಆಗೂದು ಬಡರೈತರಿಗೆ. ಮಳಿ ನೀರಾಗೆ ಕೊಚ್ಚಿಕೊಂಡು ಹೋಗೋರು, ಗೋಡೆ ಬಿದ್ದು ಸಾಯೋರು ಬಡವ್ರು... ಒಟ್ಟು ಬಡವ್ರಿಗೆ ಉಳಿಗಾಲವಿಲ್ಲ ಬಿಡು’ ಎಂದೆ ಬೇಸರದಿಂದ.</p>.<p>‘ಬೆಂಗಳೂರಿನ 40,000 ರಸ್ತೆಗುಂಡಿ ತುಂಬಕ್ಕೆ 33<br />ಕೋಟಿ ರೂಪಾಯಿ ಖರ್ಚು ಮಾಡೀವಂತ ಲೆಕ್ಕ ತೋರಿ ಸ್ತಾರೆ. ಎಲ್ಲಾ ರೊಕ್ಕ ಕಮೀಶನ್ ಗುಂಡಿ ತುಂಬಕ್ಕೇ! ಅತ್ತಾಗೆ<br />ನೋಡಿದ್ರೆ ‘ಯಾರೇ ಕೆಳಬೀಳಲಿ, ಯಾರದೇ ಪ್ರಾಣ ಹೋಗಲಿ, ನಮ್ ಸಿಎಂ ಕುರ್ಚಿ ಕಿತ್ತಾಟಕ್ಕೆ ಕೊನೆಯಿಲ್ಲ’ ಅಂತ ಹುಲಿ–ಬಂಡೆ ಸೇರಿ ಹಾಡತಾ ಕುಂತಾರೆ’ ಎನ್ನುತ್ತ ಬೆಕ್ಕಣ್ಣ ಗುರುಗುಟ್ಟಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಕಾರ್ಮಿಕರ ದಿನಾಚರಣೆ ಶುಭಾಶಯಗಳು’ ಬೆಕ್ಕಣ್ಣ ಬೆಳಗ್ಗೆ ಶುಭ ಕೋರಿತು.</p>.<p>ನಾನು ಮಾತಾಡದೇ ಸುಮ್ಮನಿದ್ದೆ. ‘ನೀವು ಹೆಣ್ಮಕ್ಕಳು ಒಳಗೂ ಕಾರ್ಮಿಕರು... ಹೊರಗೂ ಕಾರ್ಮಿಕರು! ಪಾಪ... ದಿನಾ ಅಡಗಿ ಮಾಡಿ ದಣೀತಿ. ಇವತ್ ಅಡಗಿ ಮನಿಗಿ ರಜಾ ಕೊಡು. ಹೊರಗೆ ಊಟಕ್ಕೆ ಹೋಗೂಣು’ ಎಂದಿತು ಬೆಕ್ಕಣ್ಣ.</p>.<p>‘ಬಿಲ್ ನಾನೇ ಕೊಡಬೇಕಲ್ಲ... ಈಗ ಹೋಟೆಲ್ ಊಟ, ತಿಂಡಿ ಎಲ್ಲ ತುಟ್ಟಿ ಆಗ್ಯಾವು’ ಎಂದು ಸಿಡುಕಿದೆ.</p>.<p>‘ಮತ್ತ ಕಾರ್ಮಿಕರ ದಿನಾಚರಣೆ ಸ್ಪೆಶಲ್ ಏನು?’</p>.<p>‘ನಿಮ್ ಮೋದಿಮಾಮಾರೆ ಸ್ಪೆಶಲ್ ಗಿಫ್ಟ್ ಕೊಟ್ಟಾರಲ್ಲ! ವಾಣಿಜ್ಯ ಸಿಲಿಂಡರ್ ಬೆಲೆ ಏರಿಸಿದ್ದಲ್ಲದೇ ಬಡವ್ರು ಬಳಸೋ ಸಣ್ಣ ಸಿಲಿಂಡರ್ ಬೆಲೆನೂ ಗಗನಕ್ಕೆ ಏರಿಸ್ಯಾರೆ’ ಎಂದು ಹಂಗಿಸಿದೆ. </p>.<p>‘ನಮ್ ದೇಶಕ್ಕಷ್ಟೇ ಅಲ್ಲ, ಯುದ್ಧದ ಬಿಸಿ ಎಲ್ಲಾ ದೇಶಗಳಿಗೂ ತಟ್ಟೈತಿ... ಸುಮ್ಸುಮ್ನೆ ಮೋದಿಮಾಮಾರಿಗೆ ಬೈಯಬ್ಯಾಡ’ ಎಂದು ಬೆಕ್ಕಣ್ಣ ಮೂತಿ ತಿರುವಿತು. </p>.<p>‘ಹಂಗಾರೆ ಪಂಚರಾಜ್ಯ ಚುನಾವಣೆ ಮುಗಿಯೂವರೆಗೆ ಕಾದು, ಚುನಾವಣೆ ಮುಗಿದ ಮ್ಯಾಗೆ ಎದಕ್ಕ ಏರಿಸಬಕು?’ ಎಂದು ನಾನು ರೇಗಿದೆ.</p>.<p>‘ಹೋಗ್ಲಿಬಿಡು... ನನಗೆ, ನಿನಗೆ ಎದಕ್ಕೆ ಜಗಳ... ಮಳಿ ಬೆಳಿ ವಿಚಾರ ಮಾತಾಡೂಣು’ ಎಂದು ಮಾತು ಬದಲಿಸಿತು.</p>.<p>‘ಮಳಿ ಬಂದ್ರೆ ಬೆಳಿ ನಷ್ಟ ಆಗೂದು ಬಡರೈತರಿಗೆ. ಮಳಿ ನೀರಾಗೆ ಕೊಚ್ಚಿಕೊಂಡು ಹೋಗೋರು, ಗೋಡೆ ಬಿದ್ದು ಸಾಯೋರು ಬಡವ್ರು... ಒಟ್ಟು ಬಡವ್ರಿಗೆ ಉಳಿಗಾಲವಿಲ್ಲ ಬಿಡು’ ಎಂದೆ ಬೇಸರದಿಂದ.</p>.<p>‘ಬೆಂಗಳೂರಿನ 40,000 ರಸ್ತೆಗುಂಡಿ ತುಂಬಕ್ಕೆ 33<br />ಕೋಟಿ ರೂಪಾಯಿ ಖರ್ಚು ಮಾಡೀವಂತ ಲೆಕ್ಕ ತೋರಿ ಸ್ತಾರೆ. ಎಲ್ಲಾ ರೊಕ್ಕ ಕಮೀಶನ್ ಗುಂಡಿ ತುಂಬಕ್ಕೇ! ಅತ್ತಾಗೆ<br />ನೋಡಿದ್ರೆ ‘ಯಾರೇ ಕೆಳಬೀಳಲಿ, ಯಾರದೇ ಪ್ರಾಣ ಹೋಗಲಿ, ನಮ್ ಸಿಎಂ ಕುರ್ಚಿ ಕಿತ್ತಾಟಕ್ಕೆ ಕೊನೆಯಿಲ್ಲ’ ಅಂತ ಹುಲಿ–ಬಂಡೆ ಸೇರಿ ಹಾಡತಾ ಕುಂತಾರೆ’ ಎನ್ನುತ್ತ ಬೆಕ್ಕಣ್ಣ ಗುರುಗುಟ್ಟಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>