‘ಅದೇನೋ ಬರುವಾಗ ಒದ್ಕಂಡು ಬರುತ್ತೆ ಅಂತಾರಲ್ಲ ಸಾ... ಹಂಗೆ. ನನ್ ಮನೆ ಬಾಗಿಲಿಗೇ ಅಧಿಕಾರಿಗಳು ಬಂದು ಮರ್ಯಾದೆ ಕೊಟ್ಟು ಕರ್ಕಂಡ್ ಹೋದ್ರು. ಉಳ್ಕೊಳ್ಳೋಕೆ ಸ್ಪೆಷಲ್ ರೂಮು, ಬೇಕ್ ಬೇಕಾದ ಊಟ, ತಿಂಡಿ ಕಳಿಸಿಕೊಡೋರು. ಬೆಳಿಗ್ಗೆ, ಸಾಯಂಕಾಲ ಫೋನ್ ಮಾಡಿ ಮುಖ್ಯಸ್ಥರೇ ವಿಚಾರಿಸಿಕೊಳ್ತಿದ್ರು. ಹೇಗಿದೀರಿ? ಏನಾದ್ರೂ ಬೇಕಿದ್ರೆ ತರಿಸ್ಕೊಳಿ. ನೀವು ನಮ್ಮ ಗೆಸ್ಟು. ನಿಮ್ಮನ್ನ ತುಂಬಾ ಚೆನ್ನಾಗಿ ನೋಡ್ಕೋಬೇಕು ಅಂತಿದ್ರು ಸಾ’.