<p>ಟಿ.ವಿಯ ಲೈವ್ ಪ್ರೋಗ್ರಾಂನಲ್ಲಿ ಪ್ರತ್ಯಕ್ಷರಾಗಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಗುರೂಜಿಯು ಸುಮಿಯ ಪಾಲಿನ ಪ್ರತ್ಯಕ್ಷ ದೇವರು! ಏನೇ ಕಷ್ಟಗಳಿದ್ದರೂ ಹೇಳಿಕೊಂಡು ಅವರಿಂದ ಪರಿಹಾರ ಪಡೆದುಕೊಳ್ಳುತ್ತಾಳೆ.</p>.<p>ಇವತ್ತೂ ಫೋನ್ ಮಾಡಿದ ಸುಮಿ, ‘ಗುರೂಜಿ, ಗ್ಯಾಸ್ ಸಿಲಿಂಡರ್ ಸಮಸ್ಯೆ, ಗ್ಯಾಸ್ ಇಲ್ಲದೆ ಸಂಸಾರ ಮಾಡೋದು ಹೇಗೆ ಅಂತ ಚಿಂತೆಯಾಗಿದೆ...’ ಎಂದು ದುಃಖ ತೋಡಿಕೊಂಡಳು.</p>.<p>‘ಕೊಲ್ಲಿ ಯುದ್ಧ ಮುಗಿಯುವವರೆಗೂ ಮನೆಯಲ್ಲಿ ಒಲೆ ಹಚ್ಚಬೇಡ ತಾಯಿ!’ ಎಂದರು.</p>.<p>‘ಒಲೆ ಹಚ್ಚದೆ ಅಡುಗೆ ಮಾಡೋದು ಹೇಗೆ ಗುರೂಜಿ, ಊಟವಿಲ್ಲದೆ ಬದುಕುವುದು ಹೇಗೆ?’</p>.<p>‘ಹಸು–ಎಮ್ಮೆ ಇಡ್ಲಿ, ದೋಸೆ, ಚಿತ್ರಾನ್ನ ತಿನ್ನುತ್ತವಾ? ಹುಲ್ಲು ತಿನ್ಕೊಂಡು ಆರೋಗ್ಯವಾಗಿ ಬಾಳ್ತಿಲ್ವಾ?’</p>.<p>‘ಹಸು ಹುಲ್ಲು ತಿನ್ನುತ್ತೆ, ಬೆಕ್ಕು ಇಲಿ ಹಿಡಿದು ತಿನ್ನುತ್ತೆ, ನಾಯಿ ಇನ್ನೇನೋ ತಿನ್ನುತ್ತೆ ಎಂದು ನಾವೂ ಹಾಗೆ ಮಾಡಲಾಗುತ್ತಾ ಗುರೂಜಿ?!’</p>.<p>‘ಗ್ಯಾಸ್ ಟ್ರಬಲ್ ಸಂದರ್ಭದಲ್ಲಿ ನಮಗೆ ಪ್ರಾಣಿ, ಪಕ್ಷಿಗಳ ಬದುಕು ಮಾದರಿಯಾಗಬೇಕು. ಪಕ್ಷಿಗಳು ಗೂಡಿನಲ್ಲಿ ಅಡುಗೆ ಮನೆ, ಬಾತ್ ರೂಮ್ ಕಟ್ಟಿಕೊಂಡಿರುತ್ತವೆಯೆ?’ ಗುರೂಜಿ ನಕ್ಕರು.</p>.<p>‘ನಾವು ಏನನ್ನು ತಿನ್ನಬೇಕು?’</p>.<p>‘ಗ್ಯಾಸ್ ಪ್ರಾಬ್ಲಮ್ ಬಗೆಹರಿಯುವವರೆಗೂ ಗೆಡ್ಡೆ–ಗೆಣಸು ತಿನ್ನಿ...’</p>.<p>‘ನಾಲಿಗೆ ರುಚಿ ಕೇಳುತ್ತದೆ ಗುರೂಜಿ!’</p>.<p>‘ನಾಲಿಗೆಯನ್ನು ಸೈಡಿಗಿಟ್ಟು ಹಣ್ಣು, ಹಸಿ ತರಕಾರಿ, ಸೊಪ್ಪುಸೆದೆ ತಿನ್ನಿರಿ, ಆರೋಗ್ಯ, ಸೌಭಾಗ್ಯ ವೃದ್ಧಿಸುತ್ತದೆ’ ಎಂದರು.</p>.<p>ಅಷ್ಟರಲ್ಲಿ ಫೋನ್ ಸಂಪರ್ಕ ಕಡಿತವಾಯ್ತು.</p>.<p>‘ಇನ್ನೊಬ್ಬರು ಕಾಲರ್ ರೆಡಿಯಿದ್ದಾರೆ...’ ಎಂದ ನಿರೂಪಕಿ, ‘ಗುರೂಜಿ ಲೈನ್ನಲ್ಲಿದ್ದಾರೆ ಮಾತನಾಡಿ’ ಎಂದಳು.</p>.<p>‘ಹೇಳಿ ತಾಯಿ, ಏನು ಸಮಸ್ಯೆ?’ ಗುರೂಜಿ ಕೇಳಿದರು.</p>.<p>‘ತಾಯಿ ಅಲ್ಲಾರೀ, ನಿಮ್ಮ ಹೆಂಡ್ತಿ ಮಾತನಾಡ್ತಿದ್ದೀನಿ, ಆನ್ಲೈನ್ನಲ್ಲಿ ಸೌದೆಒಲೆ ಬುಕ್ ಮಾಡಿದ್ದೇನೆ, ಟಿ.ವಿ ಪ್ರೋಗ್ರಾಂ ಮುಗಿಸಿ ಬರ್ತಾ ಒಂದು ಹೊರೆ ಸೌದೆ ತನ್ನಿ...’ ಎಂದು ಹೇಳಿ ಗುರೂಜಿಯ ಹೆಂಡತಿ ಫೋನ್ ಕಟ್ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಟಿ.ವಿಯ ಲೈವ್ ಪ್ರೋಗ್ರಾಂನಲ್ಲಿ ಪ್ರತ್ಯಕ್ಷರಾಗಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಗುರೂಜಿಯು ಸುಮಿಯ ಪಾಲಿನ ಪ್ರತ್ಯಕ್ಷ ದೇವರು! ಏನೇ ಕಷ್ಟಗಳಿದ್ದರೂ ಹೇಳಿಕೊಂಡು ಅವರಿಂದ ಪರಿಹಾರ ಪಡೆದುಕೊಳ್ಳುತ್ತಾಳೆ.</p>.<p>ಇವತ್ತೂ ಫೋನ್ ಮಾಡಿದ ಸುಮಿ, ‘ಗುರೂಜಿ, ಗ್ಯಾಸ್ ಸಿಲಿಂಡರ್ ಸಮಸ್ಯೆ, ಗ್ಯಾಸ್ ಇಲ್ಲದೆ ಸಂಸಾರ ಮಾಡೋದು ಹೇಗೆ ಅಂತ ಚಿಂತೆಯಾಗಿದೆ...’ ಎಂದು ದುಃಖ ತೋಡಿಕೊಂಡಳು.</p>.<p>‘ಕೊಲ್ಲಿ ಯುದ್ಧ ಮುಗಿಯುವವರೆಗೂ ಮನೆಯಲ್ಲಿ ಒಲೆ ಹಚ್ಚಬೇಡ ತಾಯಿ!’ ಎಂದರು.</p>.<p>‘ಒಲೆ ಹಚ್ಚದೆ ಅಡುಗೆ ಮಾಡೋದು ಹೇಗೆ ಗುರೂಜಿ, ಊಟವಿಲ್ಲದೆ ಬದುಕುವುದು ಹೇಗೆ?’</p>.<p>‘ಹಸು–ಎಮ್ಮೆ ಇಡ್ಲಿ, ದೋಸೆ, ಚಿತ್ರಾನ್ನ ತಿನ್ನುತ್ತವಾ? ಹುಲ್ಲು ತಿನ್ಕೊಂಡು ಆರೋಗ್ಯವಾಗಿ ಬಾಳ್ತಿಲ್ವಾ?’</p>.<p>‘ಹಸು ಹುಲ್ಲು ತಿನ್ನುತ್ತೆ, ಬೆಕ್ಕು ಇಲಿ ಹಿಡಿದು ತಿನ್ನುತ್ತೆ, ನಾಯಿ ಇನ್ನೇನೋ ತಿನ್ನುತ್ತೆ ಎಂದು ನಾವೂ ಹಾಗೆ ಮಾಡಲಾಗುತ್ತಾ ಗುರೂಜಿ?!’</p>.<p>‘ಗ್ಯಾಸ್ ಟ್ರಬಲ್ ಸಂದರ್ಭದಲ್ಲಿ ನಮಗೆ ಪ್ರಾಣಿ, ಪಕ್ಷಿಗಳ ಬದುಕು ಮಾದರಿಯಾಗಬೇಕು. ಪಕ್ಷಿಗಳು ಗೂಡಿನಲ್ಲಿ ಅಡುಗೆ ಮನೆ, ಬಾತ್ ರೂಮ್ ಕಟ್ಟಿಕೊಂಡಿರುತ್ತವೆಯೆ?’ ಗುರೂಜಿ ನಕ್ಕರು.</p>.<p>‘ನಾವು ಏನನ್ನು ತಿನ್ನಬೇಕು?’</p>.<p>‘ಗ್ಯಾಸ್ ಪ್ರಾಬ್ಲಮ್ ಬಗೆಹರಿಯುವವರೆಗೂ ಗೆಡ್ಡೆ–ಗೆಣಸು ತಿನ್ನಿ...’</p>.<p>‘ನಾಲಿಗೆ ರುಚಿ ಕೇಳುತ್ತದೆ ಗುರೂಜಿ!’</p>.<p>‘ನಾಲಿಗೆಯನ್ನು ಸೈಡಿಗಿಟ್ಟು ಹಣ್ಣು, ಹಸಿ ತರಕಾರಿ, ಸೊಪ್ಪುಸೆದೆ ತಿನ್ನಿರಿ, ಆರೋಗ್ಯ, ಸೌಭಾಗ್ಯ ವೃದ್ಧಿಸುತ್ತದೆ’ ಎಂದರು.</p>.<p>ಅಷ್ಟರಲ್ಲಿ ಫೋನ್ ಸಂಪರ್ಕ ಕಡಿತವಾಯ್ತು.</p>.<p>‘ಇನ್ನೊಬ್ಬರು ಕಾಲರ್ ರೆಡಿಯಿದ್ದಾರೆ...’ ಎಂದ ನಿರೂಪಕಿ, ‘ಗುರೂಜಿ ಲೈನ್ನಲ್ಲಿದ್ದಾರೆ ಮಾತನಾಡಿ’ ಎಂದಳು.</p>.<p>‘ಹೇಳಿ ತಾಯಿ, ಏನು ಸಮಸ್ಯೆ?’ ಗುರೂಜಿ ಕೇಳಿದರು.</p>.<p>‘ತಾಯಿ ಅಲ್ಲಾರೀ, ನಿಮ್ಮ ಹೆಂಡ್ತಿ ಮಾತನಾಡ್ತಿದ್ದೀನಿ, ಆನ್ಲೈನ್ನಲ್ಲಿ ಸೌದೆಒಲೆ ಬುಕ್ ಮಾಡಿದ್ದೇನೆ, ಟಿ.ವಿ ಪ್ರೋಗ್ರಾಂ ಮುಗಿಸಿ ಬರ್ತಾ ಒಂದು ಹೊರೆ ಸೌದೆ ತನ್ನಿ...’ ಎಂದು ಹೇಳಿ ಗುರೂಜಿಯ ಹೆಂಡತಿ ಫೋನ್ ಕಟ್ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>