<p>‘ಆಯಿಯೆ... ಆಯಿಯೆ... ಬೈಟಿಯೆ...’ ಶುದ್ಧ ಹಿಂದಿಯಲ್ಲಿ ಆದರದಿಂದ ಸ್ವಾಗತಿಸಿದರು ಉತ್ತರ ಪ್ರದೇಶದ ಎಂಪಿ.</p>.<p>‘ಈ ಉರಿ ಬಿಸಿಲಲ್ಲೂ ನಿಮ್ಮ ಮಧುರ ಮಾತು ಕೇಳಿ ಮನದುಂಬಿ ಬಂತು. ಶುಕ್ರಿಯಾ... ಶುಕ್ರಿಯಾ’ ಎಂದು ಹಿರಿಹಿರಿ ಹಿಗ್ಗುತ್ತಾ ಬಂದು ಕೂತರು ಕರ್ನಾಟಕದ ಸಂಸದ.</p>.<p>ಉತ್ತರದ ಸಂಸದ ಹಿಂದಿಯಲ್ಲೇ ಮಾತು ಮುಂದುವರಿಸಿದರೆ, ಕರ್ನಾಟಕದ ಎಂಪಿ ತಿಣುಕಾಡುತ್ತಾ ಅರ್ಧ ಕನ್ನಡ, ಅರ್ಧ ಹಿಂದಿಯಲ್ಲಿ ಮಾತಾಡತೊಡಗಿದರು. </p>.<p>‘ಇನ್ನೇನು, ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಶುರುವಾಗುತ್ತೆ, ನಿಮ್ಮ ಕರ್ನಾಟಕದ ಸಂಸದರ ಸಂಖ್ಯೆ 28ರಿಂದ 40ಕ್ಕೆ ಏರಬಹುದು. ಆಪ್ ಕೊ ಬಹುತ್ ಖುಷ್ ಹೈನಾ...?’ </p>.<p>‘ಹಾಂ ಜೀ... ಆದರೆ, ನಾರ್ತ್ ಇಂಡಿಯಾ, ಅಂದ್ರೆ ಈ ಹಿಂದಿ ಬೆಲ್ಟ್ನವರ ಸಂಖ್ಯೆ 76 ಪರ್ಸೆಂಟ್ ಜಾಸ್ತಿ ಆದ್ರೆ, ಸೌಥ್ನವರದು ಶೇ 30ರ ಆಸುಪಾಸು ಅಷ್ಟೇ ಜಾಸ್ತಿ ಆಗುತ್ತಲ್ವ?’ ಧೈರ್ಯ ಮಾಡಿ ಕೇಳಿದರು ಕನ್ನಡದ ಎಂಪಿ! </p>.<p>‘ಓ ಐಸಾ ನಹಿ ಹೇ ಜೀ... ನಿಮಗೆ ಸರಿಯಾಗಿ ವಿವರಿಸ್ತೀನಿ ದೇಖೀಯೇ’ ಎಂದವರೆ, ಜನಸಂಖ್ಯೆ ಆಧಾರದಲ್ಲಿ ದೇಶವನ್ನು 9 ಭಾಗ ಮಾಡಿ ಹೇಳತೊಡಗಿದರು, ‘ಏಕ್ ತೇರಾ, ಏಕ್ ಮೇರಾ, ದೋ ತೇರಾ, ದೋ ಮೇರಾ, ತೀನ್ ತೇರಾ, ತೀನ್ ಮೇರಾ... ಬರಾಬರ್, ನೋ ಚೀಟಿಂಗ್...?’ ಎಂದು ತೋರಿಸಿದರು. 6 ಭಾಗ ನಾರ್ತ್ ಇಂಡಿಯಾ ಕಡೆಗಿದ್ದರೆ, 3 ಭಾಗ ದಕ್ಷಿಣ ಭಾರತದ ಕಡೆಗಿತ್ತು. </p>.<p>‘ಬರಾಬರ್, ಬರಾಬರ್...’ ಎಂದು ತಲೆಯಾಡಿಸುತ್ತಾ ಎದ್ದರು ಹೆಮ್ಮೆಯ ಕನ್ನಡಿಗ! </p>.<p>‘ಡೌಟ್ ಹೇಯ್ ತೊ ಆಪ್ ಕೆ ಹೈಕಮಾಂಡ್ ಕೊ ಪೂಛಿಯೇ...’ </p>.<p>‘ಅಯ್ಯೋ ಹೈಕಮಾಂಡ್ ಮುಂದೆ ಬಾಯಿ ಬಿಡೋದಾ? ಉಚ್ಚಾಟನೆ ಮಾಡಿಬಿಡ್ತಾರೆ... ಆಪ್ ಕಾ ಬರಾಬರ್ ಹೈ, ಬರಾಬರ್ ಹೈ, ನೋ ಚೀಟಿಂಗ್, ನೋ ಚೀಟಿಂಗ್’ ಎನ್ನುತ್ತಾ ಖುಷಿಯಿಂದ ಹೊರಟರು ಕರ್ನಾಟಕದ ಎಂಪಿ! </p>.ಎಷ್ಟೇ ಪುಂಗಿ ಊದಿದರೂ ಕಾಂಗ್ರೆಸ್ ಗೆಲ್ಲಲ್ಲ: ವಿಜಯೇಂದ್ರ.ಲವ್ ಜಿಹಾದ್ ಹಿಂದೆ ಕಾಂಗ್ರೆಸ್: ಬಸವರಾಜ ಕ್ಯಾವಟರ್ ಆರೋಪ.ಮತಗಳ್ಳತನ: ಬಿಜೆಪಿ, ಟಿಎಂಸಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ.ಕೊನೆ ಉಸಿರು ಇರುವವರೆಗೂ ಬಾಬಾಸಾಹೇಬರ ಆದರ್ಶ ರಕ್ಷಿಸಲು ಹೋರಾಡುತ್ತೇನೆ: ರಾಹುಲ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಆಯಿಯೆ... ಆಯಿಯೆ... ಬೈಟಿಯೆ...’ ಶುದ್ಧ ಹಿಂದಿಯಲ್ಲಿ ಆದರದಿಂದ ಸ್ವಾಗತಿಸಿದರು ಉತ್ತರ ಪ್ರದೇಶದ ಎಂಪಿ.</p>.<p>‘ಈ ಉರಿ ಬಿಸಿಲಲ್ಲೂ ನಿಮ್ಮ ಮಧುರ ಮಾತು ಕೇಳಿ ಮನದುಂಬಿ ಬಂತು. ಶುಕ್ರಿಯಾ... ಶುಕ್ರಿಯಾ’ ಎಂದು ಹಿರಿಹಿರಿ ಹಿಗ್ಗುತ್ತಾ ಬಂದು ಕೂತರು ಕರ್ನಾಟಕದ ಸಂಸದ.</p>.<p>ಉತ್ತರದ ಸಂಸದ ಹಿಂದಿಯಲ್ಲೇ ಮಾತು ಮುಂದುವರಿಸಿದರೆ, ಕರ್ನಾಟಕದ ಎಂಪಿ ತಿಣುಕಾಡುತ್ತಾ ಅರ್ಧ ಕನ್ನಡ, ಅರ್ಧ ಹಿಂದಿಯಲ್ಲಿ ಮಾತಾಡತೊಡಗಿದರು. </p>.<p>‘ಇನ್ನೇನು, ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಶುರುವಾಗುತ್ತೆ, ನಿಮ್ಮ ಕರ್ನಾಟಕದ ಸಂಸದರ ಸಂಖ್ಯೆ 28ರಿಂದ 40ಕ್ಕೆ ಏರಬಹುದು. ಆಪ್ ಕೊ ಬಹುತ್ ಖುಷ್ ಹೈನಾ...?’ </p>.<p>‘ಹಾಂ ಜೀ... ಆದರೆ, ನಾರ್ತ್ ಇಂಡಿಯಾ, ಅಂದ್ರೆ ಈ ಹಿಂದಿ ಬೆಲ್ಟ್ನವರ ಸಂಖ್ಯೆ 76 ಪರ್ಸೆಂಟ್ ಜಾಸ್ತಿ ಆದ್ರೆ, ಸೌಥ್ನವರದು ಶೇ 30ರ ಆಸುಪಾಸು ಅಷ್ಟೇ ಜಾಸ್ತಿ ಆಗುತ್ತಲ್ವ?’ ಧೈರ್ಯ ಮಾಡಿ ಕೇಳಿದರು ಕನ್ನಡದ ಎಂಪಿ! </p>.<p>‘ಓ ಐಸಾ ನಹಿ ಹೇ ಜೀ... ನಿಮಗೆ ಸರಿಯಾಗಿ ವಿವರಿಸ್ತೀನಿ ದೇಖೀಯೇ’ ಎಂದವರೆ, ಜನಸಂಖ್ಯೆ ಆಧಾರದಲ್ಲಿ ದೇಶವನ್ನು 9 ಭಾಗ ಮಾಡಿ ಹೇಳತೊಡಗಿದರು, ‘ಏಕ್ ತೇರಾ, ಏಕ್ ಮೇರಾ, ದೋ ತೇರಾ, ದೋ ಮೇರಾ, ತೀನ್ ತೇರಾ, ತೀನ್ ಮೇರಾ... ಬರಾಬರ್, ನೋ ಚೀಟಿಂಗ್...?’ ಎಂದು ತೋರಿಸಿದರು. 6 ಭಾಗ ನಾರ್ತ್ ಇಂಡಿಯಾ ಕಡೆಗಿದ್ದರೆ, 3 ಭಾಗ ದಕ್ಷಿಣ ಭಾರತದ ಕಡೆಗಿತ್ತು. </p>.<p>‘ಬರಾಬರ್, ಬರಾಬರ್...’ ಎಂದು ತಲೆಯಾಡಿಸುತ್ತಾ ಎದ್ದರು ಹೆಮ್ಮೆಯ ಕನ್ನಡಿಗ! </p>.<p>‘ಡೌಟ್ ಹೇಯ್ ತೊ ಆಪ್ ಕೆ ಹೈಕಮಾಂಡ್ ಕೊ ಪೂಛಿಯೇ...’ </p>.<p>‘ಅಯ್ಯೋ ಹೈಕಮಾಂಡ್ ಮುಂದೆ ಬಾಯಿ ಬಿಡೋದಾ? ಉಚ್ಚಾಟನೆ ಮಾಡಿಬಿಡ್ತಾರೆ... ಆಪ್ ಕಾ ಬರಾಬರ್ ಹೈ, ಬರಾಬರ್ ಹೈ, ನೋ ಚೀಟಿಂಗ್, ನೋ ಚೀಟಿಂಗ್’ ಎನ್ನುತ್ತಾ ಖುಷಿಯಿಂದ ಹೊರಟರು ಕರ್ನಾಟಕದ ಎಂಪಿ! </p>.ಎಷ್ಟೇ ಪುಂಗಿ ಊದಿದರೂ ಕಾಂಗ್ರೆಸ್ ಗೆಲ್ಲಲ್ಲ: ವಿಜಯೇಂದ್ರ.ಲವ್ ಜಿಹಾದ್ ಹಿಂದೆ ಕಾಂಗ್ರೆಸ್: ಬಸವರಾಜ ಕ್ಯಾವಟರ್ ಆರೋಪ.ಮತಗಳ್ಳತನ: ಬಿಜೆಪಿ, ಟಿಎಂಸಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ.ಕೊನೆ ಉಸಿರು ಇರುವವರೆಗೂ ಬಾಬಾಸಾಹೇಬರ ಆದರ್ಶ ರಕ್ಷಿಸಲು ಹೋರಾಡುತ್ತೇನೆ: ರಾಹುಲ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>