<p>‘ಮಂತ್ರಿ ಸ್ಥಾನ ಖಚಿತಪಡಿಸಿಕೊಂಡೇ ವಾಪಸ್ ಮನೆಗೆ ಬರೋದು...’ ಎಂದು ಹೇಳಿ ಶಾಸಕರು ದೆಹಲಿ ಯಾತ್ರೆಗೆ ತೆರಳಿದ್ದರು.</p>.<p>ಶಾಸಕರು ಹೋದಾಗಿನಿಂದ ಅವರ ಪತ್ನಿಗೆ ನಿದ್ರೆ, ನೆಮ್ಮದಿ ಇಲ್ಲದಂತಾಗಿತ್ತು. ದೆಹಲಿಯ ಹವಾಮಾನ, ಅವಮಾನಕ್ಕೆ ಶಾಸಕರು ಹೊಂದಿಕೊಂಡರೋ ಇಲ್ವೋ, ಅವರ ಬಿಪಿ, ಶುಗರ್ ಏರಿದೆಯೋ ಇಳಿದಿದೆಯೋ ಅಂತ ಪತ್ನಿ ಕಳವಳಗೊಂಡಿದ್ದರು.</p>.<p>ಪತಿಗೆ ಫೋನ್ ಮಾಡಿ, ‘ರೀ, ಹೈಕಮಾಂಡ್ ದೇವರ ದರ್ಶನವಾಯ್ತೆ? ದೇವರು ವರ ಕೊಟ್ಟನೆ?’ ಎಂದು ಕೇಳಿದರು.</p>.<p>‘ಒಂದು ದೇವರ ದರ್ಶನ ಆಯ್ತು. ನನ್ನದೇನೂ ಇಲ್ಲ, ದೊಡ್ಡ ದೇವರು ತೀರ್ಮಾನ ಮಾಡ್ತಾರೆ ಎಂದು ಹೇಳಿ ಕಾಫಿ ಕೊಟ್ಟು ಕಳಿಸಿದರು. ದೊಡ್ಡ ದೇವರುಗಳು ಪರರಾಜ್ಯದ ಚುನಾವಣಾ ಪ್ರಚಾರಕ್ಕೆ ಹೋಗಿವೆ. ಬರುವವರೆಗೂ ಕಾಯಬೇಕು’ ಎಂದರು ಶಾಸಕರು.</p>.<p>‘ನಾಯಕತ್ವ ಬದಲಾವಣೆ ಬಗ್ಗೆ ಮಾಧ್ಯಮದವರಿಗೆ ಯಾಕ್ರೀ ಹೇಳಿಕೆ ಕೊಟ್ರಿ? ಸಿಎಂ, ಡಿಸಿಎಂ ನಿಮ್ಮ ಮೇಲೆ ಉರಿದುಬಿದ್ದಿದ್ದಾರೆ. ಸಿಟ್ಟಿಗೆದ್ದು ಸಚಿವ ಸಂಪುಟ ವಿಸ್ತರಣೆ ಬದಲು ಸರ್ಕಾರ ವಿಸರ್ಜನೆ ಮಾಡಿಬಿಟ್ಟರೆ ಗತಿ ಏನ್ರೀ?’</p>.<p>ಶಾಸಕರು ಗಾಬರಿಯಾದರು.</p>.<p>‘ನೀವು ಮಂತ್ರಿಯಾಗಬೇಕೆಂದು ನಿತ್ಯ ಮನೆದೇವರಿಗೆ ತುಪ್ಪದ ದೀಪ ಹಚ್ಚಿ ಬೇಡಿಕೊಳ್ಳುತ್ತಿದ್ದೇನೆ. ಅಭಿಮಾನಿ ಕಾರ್ಯಕರ್ತರು ದೇವಸ್ಥಾನಗಳಲ್ಲಿ ನಿಮ್ಮ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸ್ತಿದ್ದಾರೆ. ನೀವು ಅಲ್ಲಿ ಧ್ಯಾನ, ತಪಸ್ಸು ಮಾಡಿ ಹೈಕಮಾಂಡ್ ದೇವರನ್ನು ಒಲಿಸಿಕೊಂಡು ಮಂತ್ರಿ ಸ್ಥಾನದ ವರ ಪಡೆಯಿರಿ’.</p>.<p>‘ನನ್ನ ಸೀನಿಯಾರಿಟಿ, ಸಿನ್ಸಿಯಾರಿಟಿ ಮೆಚ್ಚಿ ದೇವರು ಮಂತ್ರಿ ಭಾಗ್ಯ ಕರುಣಿಸುತ್ತಾರೆ’ ಎಂದು ಶಾಸಕರು ಆತ್ಮವಿಶ್ವಾಸದಿಂದ ಹೇಳಿದರು.</p>.<p>‘ಓವರ್ ವಿಶ್ವಾಸ ಬೇಡ, ನೀವು ಕೇಳಿದಾಕ್ಷಣ ದೇವರು ವರ ಕೊಡೋದಿಲ್ಲ... ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ಮಾಡ್ತೀವಿ, ನೀವು ವಾಪಸ್ ಹೋಗಿ ಎಂದು ಹೇಳಿಕಳಿಸುತ್ತಾರೆ ಅಷ್ಟೇ...’ ಎಂದು ಪತ್ನಿ ಫೋನ್ ಕಟ್ ಮಾಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಮಂತ್ರಿ ಸ್ಥಾನ ಖಚಿತಪಡಿಸಿಕೊಂಡೇ ವಾಪಸ್ ಮನೆಗೆ ಬರೋದು...’ ಎಂದು ಹೇಳಿ ಶಾಸಕರು ದೆಹಲಿ ಯಾತ್ರೆಗೆ ತೆರಳಿದ್ದರು.</p>.<p>ಶಾಸಕರು ಹೋದಾಗಿನಿಂದ ಅವರ ಪತ್ನಿಗೆ ನಿದ್ರೆ, ನೆಮ್ಮದಿ ಇಲ್ಲದಂತಾಗಿತ್ತು. ದೆಹಲಿಯ ಹವಾಮಾನ, ಅವಮಾನಕ್ಕೆ ಶಾಸಕರು ಹೊಂದಿಕೊಂಡರೋ ಇಲ್ವೋ, ಅವರ ಬಿಪಿ, ಶುಗರ್ ಏರಿದೆಯೋ ಇಳಿದಿದೆಯೋ ಅಂತ ಪತ್ನಿ ಕಳವಳಗೊಂಡಿದ್ದರು.</p>.<p>ಪತಿಗೆ ಫೋನ್ ಮಾಡಿ, ‘ರೀ, ಹೈಕಮಾಂಡ್ ದೇವರ ದರ್ಶನವಾಯ್ತೆ? ದೇವರು ವರ ಕೊಟ್ಟನೆ?’ ಎಂದು ಕೇಳಿದರು.</p>.<p>‘ಒಂದು ದೇವರ ದರ್ಶನ ಆಯ್ತು. ನನ್ನದೇನೂ ಇಲ್ಲ, ದೊಡ್ಡ ದೇವರು ತೀರ್ಮಾನ ಮಾಡ್ತಾರೆ ಎಂದು ಹೇಳಿ ಕಾಫಿ ಕೊಟ್ಟು ಕಳಿಸಿದರು. ದೊಡ್ಡ ದೇವರುಗಳು ಪರರಾಜ್ಯದ ಚುನಾವಣಾ ಪ್ರಚಾರಕ್ಕೆ ಹೋಗಿವೆ. ಬರುವವರೆಗೂ ಕಾಯಬೇಕು’ ಎಂದರು ಶಾಸಕರು.</p>.<p>‘ನಾಯಕತ್ವ ಬದಲಾವಣೆ ಬಗ್ಗೆ ಮಾಧ್ಯಮದವರಿಗೆ ಯಾಕ್ರೀ ಹೇಳಿಕೆ ಕೊಟ್ರಿ? ಸಿಎಂ, ಡಿಸಿಎಂ ನಿಮ್ಮ ಮೇಲೆ ಉರಿದುಬಿದ್ದಿದ್ದಾರೆ. ಸಿಟ್ಟಿಗೆದ್ದು ಸಚಿವ ಸಂಪುಟ ವಿಸ್ತರಣೆ ಬದಲು ಸರ್ಕಾರ ವಿಸರ್ಜನೆ ಮಾಡಿಬಿಟ್ಟರೆ ಗತಿ ಏನ್ರೀ?’</p>.<p>ಶಾಸಕರು ಗಾಬರಿಯಾದರು.</p>.<p>‘ನೀವು ಮಂತ್ರಿಯಾಗಬೇಕೆಂದು ನಿತ್ಯ ಮನೆದೇವರಿಗೆ ತುಪ್ಪದ ದೀಪ ಹಚ್ಚಿ ಬೇಡಿಕೊಳ್ಳುತ್ತಿದ್ದೇನೆ. ಅಭಿಮಾನಿ ಕಾರ್ಯಕರ್ತರು ದೇವಸ್ಥಾನಗಳಲ್ಲಿ ನಿಮ್ಮ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸ್ತಿದ್ದಾರೆ. ನೀವು ಅಲ್ಲಿ ಧ್ಯಾನ, ತಪಸ್ಸು ಮಾಡಿ ಹೈಕಮಾಂಡ್ ದೇವರನ್ನು ಒಲಿಸಿಕೊಂಡು ಮಂತ್ರಿ ಸ್ಥಾನದ ವರ ಪಡೆಯಿರಿ’.</p>.<p>‘ನನ್ನ ಸೀನಿಯಾರಿಟಿ, ಸಿನ್ಸಿಯಾರಿಟಿ ಮೆಚ್ಚಿ ದೇವರು ಮಂತ್ರಿ ಭಾಗ್ಯ ಕರುಣಿಸುತ್ತಾರೆ’ ಎಂದು ಶಾಸಕರು ಆತ್ಮವಿಶ್ವಾಸದಿಂದ ಹೇಳಿದರು.</p>.<p>‘ಓವರ್ ವಿಶ್ವಾಸ ಬೇಡ, ನೀವು ಕೇಳಿದಾಕ್ಷಣ ದೇವರು ವರ ಕೊಡೋದಿಲ್ಲ... ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ಮಾಡ್ತೀವಿ, ನೀವು ವಾಪಸ್ ಹೋಗಿ ಎಂದು ಹೇಳಿಕಳಿಸುತ್ತಾರೆ ಅಷ್ಟೇ...’ ಎಂದು ಪತ್ನಿ ಫೋನ್ ಕಟ್ ಮಾಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>