<p>ರಾತ್ರಿ ಬೈಕಲ್ಲಿ ಮನೆಗೆ ಹೊರಟಿದ್ದ ಗುಡ್ಡೆ. ಸ್ವಲ್ಪ ದೂರ ಹೋಗುವಷ್ಟರಲ್ಲಿ ಹಿಂದೆ ಯಾರೋ ಕೂತು ಹೆಗಲ ಮೇಲೆ ಕೈ ಇಟ್ಟಂತಾಯಿತು. ತಿರುಗಿ ನೋಡಿದರೆ ಬೇತಾಳ! ‘ನನ್ನ ಹೊಸ ಪ್ರಶ್ನೆಗಳಿಗೆ ಉತ್ತರ ಹೇಳು, ಇಲ್ಲದಿದ್ದರೆ ನಿನ್ನ ತಲೆ ಸಹಸ್ರ ಹೋಳಾದೀತು’ ಎಂದಿತು ಬೇತಾಳ.</p>.<p>‘ನೀನೊಬ್ಬ... ನಂಗೆ ತಲೇನೆ ಇಲ್ಲಪ್ಪ, ಏನೀಗ? ಮನೇಲಿ ನಿನ್ ತರ ಪ್ರಶ್ನೆ ಕೇಳಾಕೆ ಒಬ್ರು ಕಾಯ್ತಿದಾರೆ, ನಾ <br />ಯಾರಿಗಂತ ಉತ್ತರ ಕೊಡ್ಲಿ? ಸರಿ, ಅದೇನ್ ಕೇಳು...’ ಎಂದ ಗುಡ್ಡೆ.</p>.<p>‘ಏನಿಲ್ಲ, ಈ ಕರ್ನಾಟಕ ಮಾದರಿ ಅಂದ್ರೇನು?’</p>.<p>‘ಅದಾ... ನಾ ಕೊಡಲ್ಲ, ನೀ ಬಿಡಲ್ಲ ಮಾದರಿ ಅಂತ...’</p>.<p>‘ಅರ್ಥ ಆಯ್ತು, ಕೊಟ್ಟ ಕುದುರೆ ಏರದ ಎಚ್ಡಿಕೆ ವೀರನೂ ಅಲ್ಲ, ಶೂರನೂ ಅಲ್ಲ ಅಂತ ಡಿಕೆ ಅಂದ್ರಲ್ಲ, ಯಾಕೆ?’</p>.<p>‘ನಂಗೆ ಕುದುರೆ ಕೊಟ್ಟು ನೋಡ್ಲಿ, ಹೆಂಗೆ ಸವಾರಿ ಮಾಡ್ತೀನಿ ಅಂತ ಅರ್ಥ... ಏನ್ಮಾಡೋದು, ಡಿಕೆಗೆ ಕುದುರೇನೆ ಸಿಗ್ತಿಲ್ಲ...’</p>.<p>‘ಸರಿ, ಕೊಟ್ಟು ಹೋಗಬೇಕು, ಇಲ್ಲ ಬಿಟ್ಟು ಹೋಗಬೇಕು, ತಗಂಡು ಹೋಗಾಕಾಗಲ್ಲ ಅಂತ ಡಿಕೆ ಅಂದ್ರಲ್ಲ, ಏನದು?’</p>.<p>‘ಸಿಎಂ ಕುರ್ಚಿ ಕಣಯ್ಯ, ಅಷ್ಟೂ ಗೊತ್ತಾಗಲ್ವಾ?’</p>.<p>‘ಓ... ಈಗ ಅರ್ಥ ಆಯ್ತು, ಅದಿರ್ಲಿ, ಮೋದಿ ಸಾಹೇಬ್ರು ಇಲ್ಲಿ ಎಲ್ಲದರ ಬೆಲೆ ಏರಿಸಿ ಅಲ್ಲಿ ಇಟಲಿ ಪ್ರಧಾನಿಗೆ ಚಾಕೊಲೇಟ್ ಕೊಡೋದು ಸರೀನಾ?’</p>.<p>‘ಪ್ರಶ್ನೆ ಸರಿ, ಉತ್ತರ ಅವರೇ ಕೊಡ್ಬೇಕು...’</p>.<p>‘ನಿನ್ತಲೆ, ಈಗ ತಮಿಳುನಾಡು ಸಿಎಂ ಸಾಹೇಬ್ರು ಕಚೇರಿಗೆ ಲಂಚ್ ಬಾಕ್ಸ್ ತಗಂಡು ಹೋಗ್ತಾರಂತೆ, ನೀನು ಸಿಎಂ ಆಗಿದ್ರೆ ಏನ್ಮಾಡ್ತಿದ್ದೆ?’</p>.<p>‘ಲಂಚ್ ಬಾಕ್ಸ್ ಬಿಟ್ಟು ಲಂಚದ ಬಾಕ್ಸ್ ತಗಂಡು ಹೋಗ್ತಿದ್ದೆ...’</p>.<p>‘ಭ್ರಷ್ಟ ನೀನು... ಕೊನೇ ಪ್ರಶ್ನೆ, ಮನೇಲಿ ಹೆಂಡ್ತಿದೀರ ಕಾಟ ತಪ್ಪಿಸ್ಕಳಾಕೆ ಏನ್ ಮಾಡ್ಬೇಕು?’</p>.<p>‘ದೇಶದಾದ್ಯಂತ ಬಸ್ ಫ್ರೀ ಮಾಡ್ಬೇಕು!’</p>.<p>ಗುಡ್ಡೆ ಉತ್ತರಕ್ಕೆ ನಗುತ್ತಾ ಬೇತಾಳ ಹಾರಿ ಹೋಗಿ ಹುಣಸೆಮರಕ್ಕೆ ನೇತು ಹಾಕಿಕೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾತ್ರಿ ಬೈಕಲ್ಲಿ ಮನೆಗೆ ಹೊರಟಿದ್ದ ಗುಡ್ಡೆ. ಸ್ವಲ್ಪ ದೂರ ಹೋಗುವಷ್ಟರಲ್ಲಿ ಹಿಂದೆ ಯಾರೋ ಕೂತು ಹೆಗಲ ಮೇಲೆ ಕೈ ಇಟ್ಟಂತಾಯಿತು. ತಿರುಗಿ ನೋಡಿದರೆ ಬೇತಾಳ! ‘ನನ್ನ ಹೊಸ ಪ್ರಶ್ನೆಗಳಿಗೆ ಉತ್ತರ ಹೇಳು, ಇಲ್ಲದಿದ್ದರೆ ನಿನ್ನ ತಲೆ ಸಹಸ್ರ ಹೋಳಾದೀತು’ ಎಂದಿತು ಬೇತಾಳ.</p>.<p>‘ನೀನೊಬ್ಬ... ನಂಗೆ ತಲೇನೆ ಇಲ್ಲಪ್ಪ, ಏನೀಗ? ಮನೇಲಿ ನಿನ್ ತರ ಪ್ರಶ್ನೆ ಕೇಳಾಕೆ ಒಬ್ರು ಕಾಯ್ತಿದಾರೆ, ನಾ <br />ಯಾರಿಗಂತ ಉತ್ತರ ಕೊಡ್ಲಿ? ಸರಿ, ಅದೇನ್ ಕೇಳು...’ ಎಂದ ಗುಡ್ಡೆ.</p>.<p>‘ಏನಿಲ್ಲ, ಈ ಕರ್ನಾಟಕ ಮಾದರಿ ಅಂದ್ರೇನು?’</p>.<p>‘ಅದಾ... ನಾ ಕೊಡಲ್ಲ, ನೀ ಬಿಡಲ್ಲ ಮಾದರಿ ಅಂತ...’</p>.<p>‘ಅರ್ಥ ಆಯ್ತು, ಕೊಟ್ಟ ಕುದುರೆ ಏರದ ಎಚ್ಡಿಕೆ ವೀರನೂ ಅಲ್ಲ, ಶೂರನೂ ಅಲ್ಲ ಅಂತ ಡಿಕೆ ಅಂದ್ರಲ್ಲ, ಯಾಕೆ?’</p>.<p>‘ನಂಗೆ ಕುದುರೆ ಕೊಟ್ಟು ನೋಡ್ಲಿ, ಹೆಂಗೆ ಸವಾರಿ ಮಾಡ್ತೀನಿ ಅಂತ ಅರ್ಥ... ಏನ್ಮಾಡೋದು, ಡಿಕೆಗೆ ಕುದುರೇನೆ ಸಿಗ್ತಿಲ್ಲ...’</p>.<p>‘ಸರಿ, ಕೊಟ್ಟು ಹೋಗಬೇಕು, ಇಲ್ಲ ಬಿಟ್ಟು ಹೋಗಬೇಕು, ತಗಂಡು ಹೋಗಾಕಾಗಲ್ಲ ಅಂತ ಡಿಕೆ ಅಂದ್ರಲ್ಲ, ಏನದು?’</p>.<p>‘ಸಿಎಂ ಕುರ್ಚಿ ಕಣಯ್ಯ, ಅಷ್ಟೂ ಗೊತ್ತಾಗಲ್ವಾ?’</p>.<p>‘ಓ... ಈಗ ಅರ್ಥ ಆಯ್ತು, ಅದಿರ್ಲಿ, ಮೋದಿ ಸಾಹೇಬ್ರು ಇಲ್ಲಿ ಎಲ್ಲದರ ಬೆಲೆ ಏರಿಸಿ ಅಲ್ಲಿ ಇಟಲಿ ಪ್ರಧಾನಿಗೆ ಚಾಕೊಲೇಟ್ ಕೊಡೋದು ಸರೀನಾ?’</p>.<p>‘ಪ್ರಶ್ನೆ ಸರಿ, ಉತ್ತರ ಅವರೇ ಕೊಡ್ಬೇಕು...’</p>.<p>‘ನಿನ್ತಲೆ, ಈಗ ತಮಿಳುನಾಡು ಸಿಎಂ ಸಾಹೇಬ್ರು ಕಚೇರಿಗೆ ಲಂಚ್ ಬಾಕ್ಸ್ ತಗಂಡು ಹೋಗ್ತಾರಂತೆ, ನೀನು ಸಿಎಂ ಆಗಿದ್ರೆ ಏನ್ಮಾಡ್ತಿದ್ದೆ?’</p>.<p>‘ಲಂಚ್ ಬಾಕ್ಸ್ ಬಿಟ್ಟು ಲಂಚದ ಬಾಕ್ಸ್ ತಗಂಡು ಹೋಗ್ತಿದ್ದೆ...’</p>.<p>‘ಭ್ರಷ್ಟ ನೀನು... ಕೊನೇ ಪ್ರಶ್ನೆ, ಮನೇಲಿ ಹೆಂಡ್ತಿದೀರ ಕಾಟ ತಪ್ಪಿಸ್ಕಳಾಕೆ ಏನ್ ಮಾಡ್ಬೇಕು?’</p>.<p>‘ದೇಶದಾದ್ಯಂತ ಬಸ್ ಫ್ರೀ ಮಾಡ್ಬೇಕು!’</p>.<p>ಗುಡ್ಡೆ ಉತ್ತರಕ್ಕೆ ನಗುತ್ತಾ ಬೇತಾಳ ಹಾರಿ ಹೋಗಿ ಹುಣಸೆಮರಕ್ಕೆ ನೇತು ಹಾಕಿಕೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>