<p>‘ಛೀ... ಇದೇನ್ರೀ, ನಿಮ್ಮ ಹತ್ತಿರ ಬಂದರೆ ಈರುಳ್ಳಿ ವಾಸನೆ ಬರ್ತಿದೆ, ಯಾಕೆ ಸ್ನಾನ ಮಾಡಿಲ್ವ?’ ಮೂಗು ಮುಚ್ಚಿಕೊಳ್ಳುತ್ತಾ ಹೇಳಿದಳು ಹೆಂಡತಿ. </p>.<p>‘ಥಂಡಾ ಥಂಡಾ ಕೂಲ್ ಕೂಲ್...’ ಜೇಬಿನಲ್ಲಿಟ್ಟುಕೊಂಡಿದ್ದ ಈರುಳ್ಳಿ ತೆಗೆದು ತೋರಿಸಿದೆ.</p>.<p>‘ಥೂ... ನಾನಿಲ್ಲಿ ಅಡುಗೆಗೆ ಇಟ್ಟಿದ್ದ ಈರುಳ್ಳಿ ಕಾಣ್ತಿಲ್ವಲ್ಲ ಅಂತ ಹುಡುಕ್ತಿದೀನಿ, ನೀವು ನೋಡಿದ್ರೆ ಅದನ್ನ ಜೇಬಿನಲ್ಲಿಟ್ಟುಕೊಂಡು ಓಡಾಡ್ತಿದೀರಾ?’</p>.<p>‘ಹೊರಗಡೆ ಎಷ್ಟು ಹೀಟ್ ಇದೆಯಂತ ಗೊತ್ತಾಗ್ತಿಲ್ವ ನಿನಗೆ’ ಬೆವರು ಒರೆಸಿಕೊಳ್ಳುತ್ತಾ ಹೇಳಿದೆ. </p>.<p>‘ಬಿಸಿಲಿಗೂ, ಈರುಳ್ಳಿಗೂ ಏನ್ರೀ ಸಂಬಂಧ?’ </p>.<p>‘ನಮ್ ಸೆಂಟ್ರಲ್ ಮಿನಿಸ್ಟರ್ ಸಿಂಧಿಯಾ ಹೇಳಿಲ್ವ, ಬಿಸಿಲ ಧಗೆಯಿಂದ ಪಾರಾಗಬೇಕೆಂದರೆ ಜೇಬಲ್ಲಿ ಈರುಳ್ಳಿ ಇಟ್ಟುಕೊಂಡು ಓಡಾಡಿ ಅಂತ, ಅದನ್ನ ಪಾಲಿಸ್ತಿದೀನಿ’.</p>.<p>‘ತಲೆಗೆ ಸಗಣಿ ಕಟ್ಟಿಕೊಂಡರೆ ಇನ್ನೂ ತಂಪಾಗಿರಬಹುದಲ್ವ? ರೈತರು ನೋಡಿದರೆ ಈರುಳ್ಳಿಗೆ ಸರಿಯಾದ ಬೆಂಬಲ ಬೆಲೆ ಸಿಗದೆ ಬೀದಿಗೆ ಎಸೆಯುತ್ತಿದ್ದಾರೆ, ಇವರಿಗೆ ಈರುಳ್ಳಿನೇ ಎ.ಸಿ. ಅಂತೆ’ ಹಣೆ ಚಚ್ಚಿಕೊಂಡಳು. </p>.<p>‘ಹಾಂ... ಅದೇ ನಮ್ ಮಿನಿಸ್ಟರ್ ಮಾಸ್ಟರ್ ಸ್ಟ್ರೋಕ್. ಎಲ್ಲರೂ ಈರುಳ್ಳಿನ ಜೇಬಲ್ಲಿ ಇಟ್ಕೊಂಡು ಓಡಾಡೋಕೆ ಶುರು ಮಾಡಿದ್ರೆ ಆಟೊಮೆಟಿಕ್ ಆಗಿ ಉಳ್ಳಾಗಡ್ಡಿಗೆ ಡಿಮಾಂಡ್ ಬಂದೇ ಬರುತ್ತೆ, ರೈತರೂ ಉದ್ಧಾರ ಆಗ್ತಾರೆ’. </p>.<p>‘ಆಗ್ತಾರೆ, ಆಗ್ತಾರೆ... ಈ ಹಿಂದೆಯೂ ನಿಮ್ ನಾಯಕರೇ ಅಲ್ವೇನಪ್ಪ ಗಟಾರ್ ಗ್ಯಾಸ್ ಥಿಯರಿ ಅಂತ ಚರಂಡಿ ನೀರಿನಿಂದ ಗ್ಯಾಸ್ ಉತ್ಪಾದಿಸಿ, ಅದರಿಂದಾನೇ ಚಹಾ ಮಾಡಬಹುದು ಅಂತ ಹೇಳಿದ್ದು, ಹಾಗೆ ಮಾಡೋದು ಬಿಟ್ಟು ಮೊನ್ನೆ ಮತ್ಯಾಕೆ ತಾವು ಗ್ಯಾಸ್ ಸಿಲಿಂಡರ್ಗಾಗಿ ಏಜೆನ್ಸಿ ಮುಂದೆ ಕ್ಯೂ ನಿಂತಿದ್ದು’ ವ್ಯಂಗ್ಯವಾಡಿದಳು. </p>.<p>‘ನೋಡು, ನಮ್ ಡೈರೆಕ್ಟರ್ ಪ್ರೇಮ್ ಅಣ್ಣ ಹೇಳಿಲ್ವ, ನಾವ್ ಸಿನಿಮಾ ಮಾಡಿದೀವಿ, ಜನರೇ ಕಥೆ ಬರ್ಕೊಬೇಕು ಅಂತ. ಹಂಗೆ ನಮ್ ನಾಯಕರು ಹೊಸ ಥಿಯರಿ ಹೇಳ್ತಿರ್ತಾರೆ, ಅದರ ಪರಿಣಾಮನ ನಾವೇ ಬರೆದುಕೊಳ್ತಾ ಇರಬೇಕು’ ಎನ್ನುತ್ತಾ ಮತ್ತೊಂದೆರಡು ಈರುಳ್ಳಿ ಜೇಬಲ್ಲಿಟ್ಟುಕೊಂಡು ಹೊರಗಡಿಯಿಟ್ಟೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಛೀ... ಇದೇನ್ರೀ, ನಿಮ್ಮ ಹತ್ತಿರ ಬಂದರೆ ಈರುಳ್ಳಿ ವಾಸನೆ ಬರ್ತಿದೆ, ಯಾಕೆ ಸ್ನಾನ ಮಾಡಿಲ್ವ?’ ಮೂಗು ಮುಚ್ಚಿಕೊಳ್ಳುತ್ತಾ ಹೇಳಿದಳು ಹೆಂಡತಿ. </p>.<p>‘ಥಂಡಾ ಥಂಡಾ ಕೂಲ್ ಕೂಲ್...’ ಜೇಬಿನಲ್ಲಿಟ್ಟುಕೊಂಡಿದ್ದ ಈರುಳ್ಳಿ ತೆಗೆದು ತೋರಿಸಿದೆ.</p>.<p>‘ಥೂ... ನಾನಿಲ್ಲಿ ಅಡುಗೆಗೆ ಇಟ್ಟಿದ್ದ ಈರುಳ್ಳಿ ಕಾಣ್ತಿಲ್ವಲ್ಲ ಅಂತ ಹುಡುಕ್ತಿದೀನಿ, ನೀವು ನೋಡಿದ್ರೆ ಅದನ್ನ ಜೇಬಿನಲ್ಲಿಟ್ಟುಕೊಂಡು ಓಡಾಡ್ತಿದೀರಾ?’</p>.<p>‘ಹೊರಗಡೆ ಎಷ್ಟು ಹೀಟ್ ಇದೆಯಂತ ಗೊತ್ತಾಗ್ತಿಲ್ವ ನಿನಗೆ’ ಬೆವರು ಒರೆಸಿಕೊಳ್ಳುತ್ತಾ ಹೇಳಿದೆ. </p>.<p>‘ಬಿಸಿಲಿಗೂ, ಈರುಳ್ಳಿಗೂ ಏನ್ರೀ ಸಂಬಂಧ?’ </p>.<p>‘ನಮ್ ಸೆಂಟ್ರಲ್ ಮಿನಿಸ್ಟರ್ ಸಿಂಧಿಯಾ ಹೇಳಿಲ್ವ, ಬಿಸಿಲ ಧಗೆಯಿಂದ ಪಾರಾಗಬೇಕೆಂದರೆ ಜೇಬಲ್ಲಿ ಈರುಳ್ಳಿ ಇಟ್ಟುಕೊಂಡು ಓಡಾಡಿ ಅಂತ, ಅದನ್ನ ಪಾಲಿಸ್ತಿದೀನಿ’.</p>.<p>‘ತಲೆಗೆ ಸಗಣಿ ಕಟ್ಟಿಕೊಂಡರೆ ಇನ್ನೂ ತಂಪಾಗಿರಬಹುದಲ್ವ? ರೈತರು ನೋಡಿದರೆ ಈರುಳ್ಳಿಗೆ ಸರಿಯಾದ ಬೆಂಬಲ ಬೆಲೆ ಸಿಗದೆ ಬೀದಿಗೆ ಎಸೆಯುತ್ತಿದ್ದಾರೆ, ಇವರಿಗೆ ಈರುಳ್ಳಿನೇ ಎ.ಸಿ. ಅಂತೆ’ ಹಣೆ ಚಚ್ಚಿಕೊಂಡಳು. </p>.<p>‘ಹಾಂ... ಅದೇ ನಮ್ ಮಿನಿಸ್ಟರ್ ಮಾಸ್ಟರ್ ಸ್ಟ್ರೋಕ್. ಎಲ್ಲರೂ ಈರುಳ್ಳಿನ ಜೇಬಲ್ಲಿ ಇಟ್ಕೊಂಡು ಓಡಾಡೋಕೆ ಶುರು ಮಾಡಿದ್ರೆ ಆಟೊಮೆಟಿಕ್ ಆಗಿ ಉಳ್ಳಾಗಡ್ಡಿಗೆ ಡಿಮಾಂಡ್ ಬಂದೇ ಬರುತ್ತೆ, ರೈತರೂ ಉದ್ಧಾರ ಆಗ್ತಾರೆ’. </p>.<p>‘ಆಗ್ತಾರೆ, ಆಗ್ತಾರೆ... ಈ ಹಿಂದೆಯೂ ನಿಮ್ ನಾಯಕರೇ ಅಲ್ವೇನಪ್ಪ ಗಟಾರ್ ಗ್ಯಾಸ್ ಥಿಯರಿ ಅಂತ ಚರಂಡಿ ನೀರಿನಿಂದ ಗ್ಯಾಸ್ ಉತ್ಪಾದಿಸಿ, ಅದರಿಂದಾನೇ ಚಹಾ ಮಾಡಬಹುದು ಅಂತ ಹೇಳಿದ್ದು, ಹಾಗೆ ಮಾಡೋದು ಬಿಟ್ಟು ಮೊನ್ನೆ ಮತ್ಯಾಕೆ ತಾವು ಗ್ಯಾಸ್ ಸಿಲಿಂಡರ್ಗಾಗಿ ಏಜೆನ್ಸಿ ಮುಂದೆ ಕ್ಯೂ ನಿಂತಿದ್ದು’ ವ್ಯಂಗ್ಯವಾಡಿದಳು. </p>.<p>‘ನೋಡು, ನಮ್ ಡೈರೆಕ್ಟರ್ ಪ್ರೇಮ್ ಅಣ್ಣ ಹೇಳಿಲ್ವ, ನಾವ್ ಸಿನಿಮಾ ಮಾಡಿದೀವಿ, ಜನರೇ ಕಥೆ ಬರ್ಕೊಬೇಕು ಅಂತ. ಹಂಗೆ ನಮ್ ನಾಯಕರು ಹೊಸ ಥಿಯರಿ ಹೇಳ್ತಿರ್ತಾರೆ, ಅದರ ಪರಿಣಾಮನ ನಾವೇ ಬರೆದುಕೊಳ್ತಾ ಇರಬೇಕು’ ಎನ್ನುತ್ತಾ ಮತ್ತೊಂದೆರಡು ಈರುಳ್ಳಿ ಜೇಬಲ್ಲಿಟ್ಟುಕೊಂಡು ಹೊರಗಡಿಯಿಟ್ಟೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>