<p>‘ಏನ್ರಲೆ, ಹೊಸ ವರ್ಷ ಹತ್ರ ಬಂತು, ಪಾರ್ಟಿ ಎಲ್ಲಿ, ಏನ್ಕತೆ?’ ದುಬ್ಬೀರ ಹರಟೆಕಟ್ಟೆ ಗೆಳೆಯರನ್ನು ಕೇಳಿದ.</p>.<p>‘ಲೇಯ್, ನಮಗೆ ಹೊಸ ವರ್ಷ ಅಂದ್ರೆ ಉಗಾದಿ. ಎಣ್ಣೆ ನೀರು ಹಾಕ್ಕಂಡು ಹೋಳಿಗೆ, ವರ್ಷದಡುಕು ಮಾಡಿ ಉಂಡ ಮೇಲೇ ವರ್ಷಾರಂಭ...’ ಕೊಟ್ರೇಶಿ ವಾದಿಸಿದ.</p>.<p>‘ಇರ್ಲಿ ಬಿಡೋ... ಉಗಾದಿಗೆ ಎಣ್ಣೆ ನೀರು, ಇದಕ್ಕೆ ಎಣ್ಣೆಗೆ ನೀರು... ಅಷ್ಟೇ ವ್ಯತ್ಯಾಸ’ ಗುಡ್ಡೆ ನಕ್ಕ.</p>.<p>‘ನಾನು ಹೊಸ ವರ್ಷದಿಂದ ಗುಂಡು ಹಾಕೋದನ್ನ ಬಿಡಬೇಕು ಅಂತ ಮಾಡೀನಪ್ಪ...’ ಸಣ್ಣೀರ ವೈರಾಗ್ಯ ಪ್ರದರ್ಶಿಸಿದ.</p>.<p>‘ಹೌದಾ? ಭಾರಿ ಆತಲ್ಲಲೆ, ನಾನು ಹೊಸ ವರ್ಷದಿಂದ ಟಿ.ವಿ ನ್ಯೂಸ್ ನೋಡೋದು ಬಿಡಬೇಕು ಅಂತ ಮಾಡಿದ್ದೀನಿ, ಆರೋಗ್ಯದ ದೃಷ್ಟಿಯಿಂದ...’ ತಾನೂ ಒಂದು ಸೇರಿಸಿದ ದುಬ್ಬೀರ.</p>.<p>‘ನಾನಂತೂ ಸಿಟ್ಟು ಸೆಡವು ಮಾಡ್ಕಳಾದು ಬಿಡಬೇಕಂತ ಮಾಡೀನಪ್ಪ...’ ಪರಮೇಶಿ ಹೇಳಿದ.</p>.<p>‘ಏನ್ರಲೆ, ಒಬ್ಬೊಬ್ರು ಒಂದೊಂದು ಬಿಡಂಗೆ ಕಾಣ್ತೀರಿ? ನಾನು ಈ ದರಿದ್ರ ರಾಜಕೀಯನೇ ಬಿಡಬೇಕು ಅನ್ಕಂಡಿದ್ದೀನಿ... ನೋಡಿ ನೋಡಿ ಸಾಕಾಗೇತಿ’ ಗುಡ್ಡೆ ಮುಖ ಕಿವುಚಿದ.</p>.<p>‘ತೆಪರ ನೀನೇನು ಬಿಡಬೇಕು ಅಂತ ಮಾಡಿದ್ದೀಯೋ?’ ಕೊಟ್ರೇಶಿ ಕೊಕ್ಕೆ ಹಾಕಿದ.</p>.<p>‘ಅವನು ಬಿಟ್ರೆ ಹೆಂಡ್ತೀನೇ ಬಿಡಂಗೆ ಕಾಣ್ತಾನಪ್ಪ. ತೀರಾ ದಿನಾ ಯಾವನ್ ಹೊಡ್ತ ತಿಂತಾನೆ ಅಲ್ವ?...’ ಗುಡ್ಡೆ ಕಿಚಾಯಿಸಿದ.</p>.<p>ತೆಪರೇಸಿಗೆ ಸಿಟ್ಟು ಬಂತು. ಆದರೂ ಕೂಲಾಗಿ ‘ಎಲ್ರೂ ಹೇಳಿದ್ದು ಮುಗೀತಾ? ನಾನೂ ಹೊಸ ವರ್ಷದಿಂದ ಒಂದು ಬಿಡಬೇಕಂತ ಮಾಡೀನಿ’ ಎಂದ.</p>.<p>‘ಹೌದಾ? ಏನನ್ನ?’</p>.<p>‘ನಿಮ್ ತರ ಸುಳ್ಳು ಹೇಳೋದನ್ನ...!’</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>‘ಏನ್ರಲೆ, ಹೊಸ ವರ್ಷ ಹತ್ರ ಬಂತು, ಪಾರ್ಟಿ ಎಲ್ಲಿ, ಏನ್ಕತೆ?’ ದುಬ್ಬೀರ ಹರಟೆಕಟ್ಟೆ ಗೆಳೆಯರನ್ನು ಕೇಳಿದ.</p>.<p>‘ಲೇಯ್, ನಮಗೆ ಹೊಸ ವರ್ಷ ಅಂದ್ರೆ ಉಗಾದಿ. ಎಣ್ಣೆ ನೀರು ಹಾಕ್ಕಂಡು ಹೋಳಿಗೆ, ವರ್ಷದಡುಕು ಮಾಡಿ ಉಂಡ ಮೇಲೇ ವರ್ಷಾರಂಭ...’ ಕೊಟ್ರೇಶಿ ವಾದಿಸಿದ.</p>.<p>‘ಇರ್ಲಿ ಬಿಡೋ... ಉಗಾದಿಗೆ ಎಣ್ಣೆ ನೀರು, ಇದಕ್ಕೆ ಎಣ್ಣೆಗೆ ನೀರು... ಅಷ್ಟೇ ವ್ಯತ್ಯಾಸ’ ಗುಡ್ಡೆ ನಕ್ಕ.</p>.<p>‘ನಾನು ಹೊಸ ವರ್ಷದಿಂದ ಗುಂಡು ಹಾಕೋದನ್ನ ಬಿಡಬೇಕು ಅಂತ ಮಾಡೀನಪ್ಪ...’ ಸಣ್ಣೀರ ವೈರಾಗ್ಯ ಪ್ರದರ್ಶಿಸಿದ.</p>.<p>‘ಹೌದಾ? ಭಾರಿ ಆತಲ್ಲಲೆ, ನಾನು ಹೊಸ ವರ್ಷದಿಂದ ಟಿ.ವಿ ನ್ಯೂಸ್ ನೋಡೋದು ಬಿಡಬೇಕು ಅಂತ ಮಾಡಿದ್ದೀನಿ, ಆರೋಗ್ಯದ ದೃಷ್ಟಿಯಿಂದ...’ ತಾನೂ ಒಂದು ಸೇರಿಸಿದ ದುಬ್ಬೀರ.</p>.<p>‘ನಾನಂತೂ ಸಿಟ್ಟು ಸೆಡವು ಮಾಡ್ಕಳಾದು ಬಿಡಬೇಕಂತ ಮಾಡೀನಪ್ಪ...’ ಪರಮೇಶಿ ಹೇಳಿದ.</p>.<p>‘ಏನ್ರಲೆ, ಒಬ್ಬೊಬ್ರು ಒಂದೊಂದು ಬಿಡಂಗೆ ಕಾಣ್ತೀರಿ? ನಾನು ಈ ದರಿದ್ರ ರಾಜಕೀಯನೇ ಬಿಡಬೇಕು ಅನ್ಕಂಡಿದ್ದೀನಿ... ನೋಡಿ ನೋಡಿ ಸಾಕಾಗೇತಿ’ ಗುಡ್ಡೆ ಮುಖ ಕಿವುಚಿದ.</p>.<p>‘ತೆಪರ ನೀನೇನು ಬಿಡಬೇಕು ಅಂತ ಮಾಡಿದ್ದೀಯೋ?’ ಕೊಟ್ರೇಶಿ ಕೊಕ್ಕೆ ಹಾಕಿದ.</p>.<p>‘ಅವನು ಬಿಟ್ರೆ ಹೆಂಡ್ತೀನೇ ಬಿಡಂಗೆ ಕಾಣ್ತಾನಪ್ಪ. ತೀರಾ ದಿನಾ ಯಾವನ್ ಹೊಡ್ತ ತಿಂತಾನೆ ಅಲ್ವ?...’ ಗುಡ್ಡೆ ಕಿಚಾಯಿಸಿದ.</p>.<p>ತೆಪರೇಸಿಗೆ ಸಿಟ್ಟು ಬಂತು. ಆದರೂ ಕೂಲಾಗಿ ‘ಎಲ್ರೂ ಹೇಳಿದ್ದು ಮುಗೀತಾ? ನಾನೂ ಹೊಸ ವರ್ಷದಿಂದ ಒಂದು ಬಿಡಬೇಕಂತ ಮಾಡೀನಿ’ ಎಂದ.</p>.<p>‘ಹೌದಾ? ಏನನ್ನ?’</p>.<p>‘ನಿಮ್ ತರ ಸುಳ್ಳು ಹೇಳೋದನ್ನ...!’</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>