<p>‘ಛೇ... ಈ ವರ್ಷ ನೊಬೆಲ್ ಶಾಂತಿ ಕಪ್ ಯಾರಿಗೆ ಕೊಡಬಕು ಅನ್ನೂದೇ ನನಗ ಚಿಂತಿಯಾಗೈತಿ’ ಎಂದು ಬೆಕ್ಕಣ್ಣ ಅಲವತ್ತುಕೊಂಡಿತು. </p>.<p>‘ನಿನಗೆ ಎದಕ್ಕ ಚಿಂತಿ? ನೀ ಏನ್ ನೊಬೆಲ್ ಪ್ರಶಸ್ತಿ ಮಂಡಳಿವಳಗೆ ಅದೀಯೇನಲೇ’ ಎಂದು ರೇಗಿದೆ.</p>.<p>‘ನನಗ ಅಂದರೆ ನನಗೇ ಅಂತಲ್ಲ... ಪಾಪದ ನೊಬೆಲ್ ಪ್ರಶಸ್ತಿ ಮಂಡಳಿಯವರಿಗೆ ಚಿಂತಿಯಾಗಿರತೈತಿ’ ಎಂದು ಮುಸಿಮುಸಿ ನಕ್ಕಿತು.</p>.<p>‘ಯಾಕ... ಈಗ ಶಾಂತಿ ಕಪ್ಪಿಗೆ ಯಾವ ಹೊಸ ಕ್ಯಾಂಡಿಡೇಟ್ ಬಂದಾರೆ?’ ಎಂದೆ ಕುತೂಹಲದಿಂದ.</p>.<p>‘ಇರಾನ್–ಅಮೆರಿಕ ಮಾತುಕತಿಗೆ ಮಧ್ಯಸ್ಥಿಕೆ ವಹಿಸ್ತಿರೋ ಪಾಕ್ ಲಿಸ್ಟ್ ವಳಗೆ ಮೊದ್ಲೇ ಐತಿ. ಯುದ್ಧ ಬ್ಯಾಡ ಅಂತಿದ್ದ ಅಮೆರಿಕದ ಉಪಾಧ್ಯಕ್ಷ ವ್ಯಾನ್ಸ್ ಶಾಂತಿ ಮಾತುಕತೆಗೆ ಪಾಕಿಸ್ತಾನಕ್ಕೆ ಬಂದಾನೆ. ಅವಂಗೆ ಶಾಂತಿ ಕಪ್ ಕೊಡಬೌದಾ ಅಂತ’ ಬೆಕ್ಕಣ್ಣ ಉದ್ದಕ್ಕೆ ವಿವರಿಸಿತು.</p>.<p>‘ಅಮೆರಿಕದಲ್ಲೇ ತನ್ನ ಬಿಟ್ಟು ಇನ್ನೊಬ್ಬರಿಗೆ ಕೊಟ್ಟರೆ ಟ್ರಂಪಣ್ಣ ಸುಮ್ಮನೇ ಕೂರತಾನೇನು? ಅಂವಾ ನೊಬೆಲ್ ಶಾಂತಿ ಪ್ರಶಸ್ತಿ ಮಂಡಳಿ ಇರೋ ನಾರ್ವೆ ಮ್ಯಾಲೇ ಯುದ್ಧ ಸಾರತಾನೆ’ ಎಂದೆ.</p>.<p>‘ಟ್ರಂಪಣ್ಣನಿಗೆ ಈಗಲೇ ಅಡ್ವಾನ್ಸ್ ಶಾಂತಿ ಕಪ್ ಕೊಟ್ಟು, ಇನ್ ಯುದ್ಧ ಮಾಡಬ್ಯಾಡ ಅಂದ್ರ ಹೆಂಗಿರತೈತಿ?’ ಬೆಕ್ಕಣ್ಣ ಹೊಸ ಉಪಾಯ ಮುಂದಿಟ್ಟಿತು.</p>.<p>‘ಅಂವಾ ಸುಮ್ಮನಿದ್ದರೂ ಆ ನೆತನ್ಯಾಹು ಸುಮ್ಮನಿರಂಗಿಲ್ಲ. ತನ್ನ ಪೂರ್ವಜರು ಹಿಟ್ಲರ್ ಕೈಯಾಗೆ ನರಮೇಧಕ್ಕೆ ಒಳಗಾಗಿದ್ದು ಅವನಿಗೆ ಮರೆತೇ ಹೋಗಿರಬಕು’ ಎಂದೆ ಸಿಟ್ಟಿನಿಂದ.</p>.<p>‘ನರಮೇಧ ಹಾದುಬಂದವರು ಅವನ ಸ್ವಂತ ಕುಟುಂಬದವರು ಅಲ್ಲವಲ್ಲ... ಅವನಿಗೆ ದೊಡ್ಡದೊಂದು ಅಶಾಂತಿ ಕಪ್ ಕೊಡಬಕು!’ ಬೆಕ್ಕಣ್ಣ ಕುಟುಕಿತು.</p>.<p>‘ಶಾಂತಿ–ಅಶಾಂತಿ ಕಪ್ ವಿಚಾರ ಬಿಡಲೇ. ಈಗ ಪಾಕ್ ಶಾಂತಿ ಸಂಧಾನಕ್ಕೆ ಮಧ್ಯಸ್ಥಿಕೆ ವಹಿಸಿ, ನಮ್ ವಿಶ್ವಗುರು ಪಟ್ಟಕ್ಕೂ ಕುತ್ತು ಬಂತಲ್ಲ...’ ಎಂದೆ ಯೋಚಿಸುತ್ತ.</p>.<p>‘ಪಾಕ್ ಹೆಚ್ಚೆಂದರೆ ಮಧ್ಯಸ್ಥ–ಗುರು ಆಗಬೌದು... ವಿಶ್ವಗುರು ಪಟ್ಟ ಯಾವಾಗಿದ್ರೂ ನಮ್ ಮೋದಿ ಮಾಮಂದೇ!’ ಬೆಕ್ಕಣ್ಣ ಮೀಸೆ ತಿರುವಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಛೇ... ಈ ವರ್ಷ ನೊಬೆಲ್ ಶಾಂತಿ ಕಪ್ ಯಾರಿಗೆ ಕೊಡಬಕು ಅನ್ನೂದೇ ನನಗ ಚಿಂತಿಯಾಗೈತಿ’ ಎಂದು ಬೆಕ್ಕಣ್ಣ ಅಲವತ್ತುಕೊಂಡಿತು. </p>.<p>‘ನಿನಗೆ ಎದಕ್ಕ ಚಿಂತಿ? ನೀ ಏನ್ ನೊಬೆಲ್ ಪ್ರಶಸ್ತಿ ಮಂಡಳಿವಳಗೆ ಅದೀಯೇನಲೇ’ ಎಂದು ರೇಗಿದೆ.</p>.<p>‘ನನಗ ಅಂದರೆ ನನಗೇ ಅಂತಲ್ಲ... ಪಾಪದ ನೊಬೆಲ್ ಪ್ರಶಸ್ತಿ ಮಂಡಳಿಯವರಿಗೆ ಚಿಂತಿಯಾಗಿರತೈತಿ’ ಎಂದು ಮುಸಿಮುಸಿ ನಕ್ಕಿತು.</p>.<p>‘ಯಾಕ... ಈಗ ಶಾಂತಿ ಕಪ್ಪಿಗೆ ಯಾವ ಹೊಸ ಕ್ಯಾಂಡಿಡೇಟ್ ಬಂದಾರೆ?’ ಎಂದೆ ಕುತೂಹಲದಿಂದ.</p>.<p>‘ಇರಾನ್–ಅಮೆರಿಕ ಮಾತುಕತಿಗೆ ಮಧ್ಯಸ್ಥಿಕೆ ವಹಿಸ್ತಿರೋ ಪಾಕ್ ಲಿಸ್ಟ್ ವಳಗೆ ಮೊದ್ಲೇ ಐತಿ. ಯುದ್ಧ ಬ್ಯಾಡ ಅಂತಿದ್ದ ಅಮೆರಿಕದ ಉಪಾಧ್ಯಕ್ಷ ವ್ಯಾನ್ಸ್ ಶಾಂತಿ ಮಾತುಕತೆಗೆ ಪಾಕಿಸ್ತಾನಕ್ಕೆ ಬಂದಾನೆ. ಅವಂಗೆ ಶಾಂತಿ ಕಪ್ ಕೊಡಬೌದಾ ಅಂತ’ ಬೆಕ್ಕಣ್ಣ ಉದ್ದಕ್ಕೆ ವಿವರಿಸಿತು.</p>.<p>‘ಅಮೆರಿಕದಲ್ಲೇ ತನ್ನ ಬಿಟ್ಟು ಇನ್ನೊಬ್ಬರಿಗೆ ಕೊಟ್ಟರೆ ಟ್ರಂಪಣ್ಣ ಸುಮ್ಮನೇ ಕೂರತಾನೇನು? ಅಂವಾ ನೊಬೆಲ್ ಶಾಂತಿ ಪ್ರಶಸ್ತಿ ಮಂಡಳಿ ಇರೋ ನಾರ್ವೆ ಮ್ಯಾಲೇ ಯುದ್ಧ ಸಾರತಾನೆ’ ಎಂದೆ.</p>.<p>‘ಟ್ರಂಪಣ್ಣನಿಗೆ ಈಗಲೇ ಅಡ್ವಾನ್ಸ್ ಶಾಂತಿ ಕಪ್ ಕೊಟ್ಟು, ಇನ್ ಯುದ್ಧ ಮಾಡಬ್ಯಾಡ ಅಂದ್ರ ಹೆಂಗಿರತೈತಿ?’ ಬೆಕ್ಕಣ್ಣ ಹೊಸ ಉಪಾಯ ಮುಂದಿಟ್ಟಿತು.</p>.<p>‘ಅಂವಾ ಸುಮ್ಮನಿದ್ದರೂ ಆ ನೆತನ್ಯಾಹು ಸುಮ್ಮನಿರಂಗಿಲ್ಲ. ತನ್ನ ಪೂರ್ವಜರು ಹಿಟ್ಲರ್ ಕೈಯಾಗೆ ನರಮೇಧಕ್ಕೆ ಒಳಗಾಗಿದ್ದು ಅವನಿಗೆ ಮರೆತೇ ಹೋಗಿರಬಕು’ ಎಂದೆ ಸಿಟ್ಟಿನಿಂದ.</p>.<p>‘ನರಮೇಧ ಹಾದುಬಂದವರು ಅವನ ಸ್ವಂತ ಕುಟುಂಬದವರು ಅಲ್ಲವಲ್ಲ... ಅವನಿಗೆ ದೊಡ್ಡದೊಂದು ಅಶಾಂತಿ ಕಪ್ ಕೊಡಬಕು!’ ಬೆಕ್ಕಣ್ಣ ಕುಟುಕಿತು.</p>.<p>‘ಶಾಂತಿ–ಅಶಾಂತಿ ಕಪ್ ವಿಚಾರ ಬಿಡಲೇ. ಈಗ ಪಾಕ್ ಶಾಂತಿ ಸಂಧಾನಕ್ಕೆ ಮಧ್ಯಸ್ಥಿಕೆ ವಹಿಸಿ, ನಮ್ ವಿಶ್ವಗುರು ಪಟ್ಟಕ್ಕೂ ಕುತ್ತು ಬಂತಲ್ಲ...’ ಎಂದೆ ಯೋಚಿಸುತ್ತ.</p>.<p>‘ಪಾಕ್ ಹೆಚ್ಚೆಂದರೆ ಮಧ್ಯಸ್ಥ–ಗುರು ಆಗಬೌದು... ವಿಶ್ವಗುರು ಪಟ್ಟ ಯಾವಾಗಿದ್ರೂ ನಮ್ ಮೋದಿ ಮಾಮಂದೇ!’ ಬೆಕ್ಕಣ್ಣ ಮೀಸೆ ತಿರುವಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>