ಇಬ್ಬರೂ ಗಡುವು ವಿಧಿಸಿದ್ದಾರೆ. ಬಡಗಿಗೆ ಹೇಳಿ ಎರಡು ಮುಖ್ಯಮಂತ್ರಿ ಕುರ್ಚಿ ಕೆತ್ತಿಸಿ ನಿಧಾನಸೌಧದಲ್ಲಿಟ್ಟರೆ ಹೇಗೆ...? ತಲೆ ಕೆಟ್ಟ ಚಾಮುಂಡಿ, ಬ್ರಹ್ಮನ ಬಳಿ ಹೋದಳು. ಅಲ್ಲಾಗಲೇ ಶೃಂಗೇರಿ ಶಾರದಾಂಬೆಯಿಂದ ಹಿಡಿದು ಕೊಲ್ಲೂರ ಮೂಕಾಂಬಿಕೆಯವರೆಗೆ ಎಲ್ಲ ದೊಡ್ಡ ದೇವಸ್ಥಾನಗಳ ದೇವಮೂರ್ತಿಗಳು ಅರ್ಜಿ ಹಿಡಿದು ನಿಂತಿದ್ದರು. ಎಲ್ಲರದೂ ಒಂದೇ ಗೋಳು. ‘ಎರಡು ಮೂರು ಪಕ್ಷದವರು ಬರ್ತಾರೆ, ಎಲ್ಲರೂ ಮಂತ್ರಿ ಕುರ್ಚಿಗಾಗಿ ಪ್ರಾರ್ಥನೆ ಮಾಡ್ತಾರೆ. ಬಲಕ್ಕೆ ಹೂ ಉದುರಿಸಲಿಲ್ಲ ಅಂದ್ರೆ ಕ್ಯಾಕರಿಸಿ ಉಗೀತಾರೆ. ದೇವಸ್ಥಾನಕ್ಕೆ ಬಂದ ರಾಜಕಾರಣಿಗೆ ಕುರ್ಚಿ ಕೈತಪ್ಪೋ ಹಂಗೆ ಶಾಪ ಕೊಡು ಅಥವಾ ಒಂದೊಂದು ಪಕ್ಷಕ್ಕೆ ಒಂದೊಂದು ದೇವಸ್ಥಾನ ಅಂತ ಫಿಕ್ಸ್ ಮಾಡು. ನಮಗೆ ಸಾಕಾಗಿಬಿಟ್ಟಿದೆ...’