‘ಕೆತ್ತೆಬಜೆ ನನ್ಮಗ ನೀನು. ಸಾಹಿತ್ಯಕ್ಕೂ ಹಕ್ಕಿಗೂ ಸಂಬಂಜ ಇಲ್ಲ ಅಂತ ಇವಾದ ಆಗ್ಯದೆ! ನಾನೇಳ್ತಾ ಇರದೇ ಬ್ಯಾರೆ ಕಲಾ. ಟಿವಿನಗೆ ಹಳೇ ಈರೋ, ಈರೋಯಿನ್ನುಗಳು ಬಂದೂ ಬಂದೂ ‘ಮನೇಲಿರದು, ಬಚ್ಚಿಟ್ಟಿರದು, ಅಡವಿಟ್ಟಿರದು ಚಿನ್ನ ತಕ್ಕಬಂದು ನಮ್ಮ ಕಂಪನೀಗೇ ಮಾರಿ ಸಾಲ ತಗಳಿ’ ಅಂತ ಬೆಳಗ್ಗಿಂದಾ ಸಂದೇಗಂಟಾ ಕುಯ್ತರೆ ಕನೋ. ಕಷ್ಟಕ್ಕಾಗಲಿ ಅಂತ ಮಡಗಿರ್ತೀವಿ, ಅದುನ್ನೂ ಮಾರಿ ಮಸಾಲೆ ದೋಸೆ ತಿಂದುಕಳನೇ? ಟಿವಿ ವದರಿಗಾರರು ವತ್ತಾರೆಗೆ ಕೊರೊನಾಕ್ಕೆ ಸಮಾಧಿ ಫಿಕ್ಸ್ ಅಂತರೆ. ಮದ್ಯಾನ್ನಕ್ಕೆ ಮದ್ದೇ ಬಂದಿಲ್ಲ ಅಂತರೆ. ಇನ್ನೂ ಘೋರ ಖಾಯಿಲೆ ಬತ್ತಾ ಅವೆ ಅಂತ ರಾತ್ರಿಕೆ ನಿದ್ದೆಗೆಡಸ್ತರೆ! ಬದುಕಿದ್ರೆ ಪಂಚೆ ಪ್ರಶ್ನೆ ಕಾಟ, ಸತ್ರೆ ಒಪ್ಪ ಮಾಡೋರಿಲ್ಲ’ ಅಂದ್ರು.