ಬೆಕ್ಕಣ್ಣ ಆರಂಭದಲ್ಲಿ ‘ಕೊರೊನಾಗೆ ಗಾಳ್ಯಾಗೆ ತೇಲಾಡತಾ ಇರಕೆ ಶಕ್ತಿ ಇಲ್ಲಂತ. ಕೊರೊನಾ ಪೀಡಿತರು ಸೀನಿದ್ರೆ, ಕೆಮ್ಮಿದ್ರೆ ಗಾಳ್ಯಾಗೆ ಚಿಮ್ಮಿದ ಕೂಡ್ಲೇ ನೆಲದ ಮ್ಯಾಗೆ, ಬಾಗಿಲು ಹಿಡಿಕಿ, ರೇಲಿಂಗ್ಸ್ ಹಿಂತಾ ಮೇಲ್ಮೈ ಮ್ಯಾಗ ಧಬಕ್ಕನ ಬೀಳ್ತದಂತ. ಗಾಳ್ಯಾಗೇನೂ ಇರಂಗಿಲ್ಲ, ನೀ ವಾಕಿಂಗ್ ಹೋಗಿ ಬಾ’ ಎಂದು ನನಗೆ ಬುದ್ಧಿವಾದ ಹೇಳುತ್ತಲೇ ಇತ್ತು. ಮೊನ್ನೆ ಪೇಪರು ಓದುತ್ತ, ‘ಈ ವೈರಸ್ಸು ಗಾಳ್ಯಾಗೂ ತೇಲ್ಕೋತನೇ ಹೋಗ್ತದಂತಲ್ಲ... ಅದಕ್ಕೇ ಎಲ್ಲಾ ಕಡಿಗಿ ಕೇಸುಗಳು ಇಷ್ಟ್ ಹೆಚ್ಚಾಗ್ತದವು... ವಾಕಿಂಗ್ಗೀಕಿಂಗ್ ಎಲ್ಲ ಬಿಟ್ ಬಿಡು ಇನ್ನು’ ಎಂದು ಉಪದೇಶಿಸಿತು.