<p>ಬೆಕ್ಕಣ್ಣ ಎಡಗೈಯಲ್ಲಿ ದಪ್ಪ ತೊಟ್ಟಿನ ಕಮಲದ ಹೂ ಹಿಡಿದು, ಬಲಗೈಯಲ್ಲಿ ಪೊರಕೆ ಹಿಡಿದು ಕಸ ಗುಡಿಸುತ್ತಿತ್ತು.</p>.<p>‘ಏನಲೇ ಇದು ಹೊಸ ಅವತಾರ?’ ಕುತೂಹಲದಿಂದ ಕೇಳಿದೆ.</p>.<p>‘ಇನ್ಮೇಲೆ ಹಿಂಗೇ’ ಎಂದು ಮುಗುಮ್ಮಾಗಿ ನಸುನಕ್ಕಿತು.</p>.<p>ಒಟ್ಟುಗೂಡಿಸಿದ ಕಸವನ್ನು ಕೇಸರಿ ಬಣ್ಣದ ಕಾಗದದಲ್ಲಿ ಹಾಕಿತು. ಕಸವನ್ನು ಮಧ್ಯೆ ಇಟ್ಟು, ಬಣ್ಣದ ಕಾಗದವನ್ನು ಹಾಗೆ ಹೀಗೆ ಮಡಚಿ, ಏಳು ಕಮಲದ ಹೂ ಮಾಡಿತು! ಚಡ್ಡಾ ಮತ್ತು ಆರು ಜನ ಎಎಪಿ ಬಿಟ್ಟವರ ಹೆಸರುಗಳನ್ನು ಈ ಹೂವುಗಳಿಗೆ ಇಟ್ಟಿತು.</p>.<p>‘ಭಪ್ಪರೇ!’ ನಾನು ದಂಗಾಗಿಬಿಟ್ಟೆ. </p>.<p>‘ನೋಡು... ಇಷ್ಟುದಿನ ಪೊರಕೆಯ ಗುಣಗಾನ ಮಾಡ್ತಿದ್ದವರು ಈಗ ಹೆಂಗೆ ಸ್ವತಃ ಕಮಲದ ಹೂ ಆಗ್ಯಾವೆ! ಇದೇ ನಮ್ ಮೋದಿಮಾಮಾರ ಕರಾಮತ್ತು!’ ಎಂದು ಹೆಮ್ಮೆಯಿಂದ ಉಲಿಯಿತು.</p>.<p>ಪೊರಕೆಯನ್ನು ಮೂಲೆಯಲ್ಲಿ ಜೋಪಾನವಾಗಿ ಎತ್ತಿಡುತ್ತ, ‘ಮತ್ತ ನಾಳೆ ಬೇಕಾಗತೈತಿ’ ಎಂದು ಕಣ್ಣು ಮಿಟುಕಿಸಿತು.</p>.<p>‘ಬಂಗಾಳವಳಗೂ ಮೋದಿಮಾಮಾರು ಹಿಂಗೇ ಕರಾಮತ್ತು ನಡೆಸ್ಯಾರೇನು?’ ಕೇಳಿದೆ.</p>.<p>‘ಅಲ್ಲಿ ಕರಾಮತ್ತು ಸ್ವಲ್ಪ ಬ್ಯಾರೆ. ಈ ಸಲನೂ ಮಮತಾ ದೀದೀನೇ ಗೆಲ್ಲಬೌದು ಖರೇ... ಆದ್ರ ಹುಲ್ಲಲ್ಲಿ ಅರಳಿದ ಎರಡು ಹೂಗಳ ಹತ್ರಾನೆ ಕಮಲದ ಹೂ ಕೂಡ ಅರಳತೈತಿ! ನಾಕಾರು ಇ.ಡಿ. ದಾಳಿ ಆಯಿತು ಅಂದರೆ ದೀದಿಯ ಹೂಗಳು ಕಮಲದ ಹೂಗಳಾಗತಾವೆ’ ಎಂದು ಖಣಿ ಹೇಳಿತು.</p>.<p>‘ನಮ್ಮ ದೇಶದಾಗೆ ಅತ್ಯಂತ ಬಡ ಸಿಎಮ್ಮು ಅಂದರೆ ದೀದಿ... ಬಂಗಾಳದ ಹುಲಿ ಇ.ಡಿ. ದಾಳಿಗೆ ಹೆದರಂಗಿಲ್ಲಲೇ’ ಎಂದೆ.</p>.<p>‘ಇನ್ ಮ್ಯಾಗೆ ಕೇಂದ್ರದಾಗೆ ಬಹುಮತದ ಆಡಳಿತ ಪಕ್ಷ ಆರಿಸಕ್ಕೆ ಚುನಾವಣೆ ಮಾಡೂ ಅಗತ್ಯನೇ ಇಲ್ಲ. ಅದು ಹೆಂಗಿದ್ರೂ ನಮ್ ಕಮಲಕ್ಕನ ಪಕ್ಷ. ಬಹುಮತದ ವಿರೋಧ ಪಕ್ಷ ಆರಿಸಕ್ಕೆ ಚುನಾವಣೆ ಮಾಡಬಕು ಅಷ್ಟೇ’ ಎಂದು ಬೆಕ್ಕಣ್ಣ ಚುನಾವಣೆಯ ಹೊಸ ವ್ಯಾಖ್ಯಾನ ಮಾಡಿತು! </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಕ್ಕಣ್ಣ ಎಡಗೈಯಲ್ಲಿ ದಪ್ಪ ತೊಟ್ಟಿನ ಕಮಲದ ಹೂ ಹಿಡಿದು, ಬಲಗೈಯಲ್ಲಿ ಪೊರಕೆ ಹಿಡಿದು ಕಸ ಗುಡಿಸುತ್ತಿತ್ತು.</p>.<p>‘ಏನಲೇ ಇದು ಹೊಸ ಅವತಾರ?’ ಕುತೂಹಲದಿಂದ ಕೇಳಿದೆ.</p>.<p>‘ಇನ್ಮೇಲೆ ಹಿಂಗೇ’ ಎಂದು ಮುಗುಮ್ಮಾಗಿ ನಸುನಕ್ಕಿತು.</p>.<p>ಒಟ್ಟುಗೂಡಿಸಿದ ಕಸವನ್ನು ಕೇಸರಿ ಬಣ್ಣದ ಕಾಗದದಲ್ಲಿ ಹಾಕಿತು. ಕಸವನ್ನು ಮಧ್ಯೆ ಇಟ್ಟು, ಬಣ್ಣದ ಕಾಗದವನ್ನು ಹಾಗೆ ಹೀಗೆ ಮಡಚಿ, ಏಳು ಕಮಲದ ಹೂ ಮಾಡಿತು! ಚಡ್ಡಾ ಮತ್ತು ಆರು ಜನ ಎಎಪಿ ಬಿಟ್ಟವರ ಹೆಸರುಗಳನ್ನು ಈ ಹೂವುಗಳಿಗೆ ಇಟ್ಟಿತು.</p>.<p>‘ಭಪ್ಪರೇ!’ ನಾನು ದಂಗಾಗಿಬಿಟ್ಟೆ. </p>.<p>‘ನೋಡು... ಇಷ್ಟುದಿನ ಪೊರಕೆಯ ಗುಣಗಾನ ಮಾಡ್ತಿದ್ದವರು ಈಗ ಹೆಂಗೆ ಸ್ವತಃ ಕಮಲದ ಹೂ ಆಗ್ಯಾವೆ! ಇದೇ ನಮ್ ಮೋದಿಮಾಮಾರ ಕರಾಮತ್ತು!’ ಎಂದು ಹೆಮ್ಮೆಯಿಂದ ಉಲಿಯಿತು.</p>.<p>ಪೊರಕೆಯನ್ನು ಮೂಲೆಯಲ್ಲಿ ಜೋಪಾನವಾಗಿ ಎತ್ತಿಡುತ್ತ, ‘ಮತ್ತ ನಾಳೆ ಬೇಕಾಗತೈತಿ’ ಎಂದು ಕಣ್ಣು ಮಿಟುಕಿಸಿತು.</p>.<p>‘ಬಂಗಾಳವಳಗೂ ಮೋದಿಮಾಮಾರು ಹಿಂಗೇ ಕರಾಮತ್ತು ನಡೆಸ್ಯಾರೇನು?’ ಕೇಳಿದೆ.</p>.<p>‘ಅಲ್ಲಿ ಕರಾಮತ್ತು ಸ್ವಲ್ಪ ಬ್ಯಾರೆ. ಈ ಸಲನೂ ಮಮತಾ ದೀದೀನೇ ಗೆಲ್ಲಬೌದು ಖರೇ... ಆದ್ರ ಹುಲ್ಲಲ್ಲಿ ಅರಳಿದ ಎರಡು ಹೂಗಳ ಹತ್ರಾನೆ ಕಮಲದ ಹೂ ಕೂಡ ಅರಳತೈತಿ! ನಾಕಾರು ಇ.ಡಿ. ದಾಳಿ ಆಯಿತು ಅಂದರೆ ದೀದಿಯ ಹೂಗಳು ಕಮಲದ ಹೂಗಳಾಗತಾವೆ’ ಎಂದು ಖಣಿ ಹೇಳಿತು.</p>.<p>‘ನಮ್ಮ ದೇಶದಾಗೆ ಅತ್ಯಂತ ಬಡ ಸಿಎಮ್ಮು ಅಂದರೆ ದೀದಿ... ಬಂಗಾಳದ ಹುಲಿ ಇ.ಡಿ. ದಾಳಿಗೆ ಹೆದರಂಗಿಲ್ಲಲೇ’ ಎಂದೆ.</p>.<p>‘ಇನ್ ಮ್ಯಾಗೆ ಕೇಂದ್ರದಾಗೆ ಬಹುಮತದ ಆಡಳಿತ ಪಕ್ಷ ಆರಿಸಕ್ಕೆ ಚುನಾವಣೆ ಮಾಡೂ ಅಗತ್ಯನೇ ಇಲ್ಲ. ಅದು ಹೆಂಗಿದ್ರೂ ನಮ್ ಕಮಲಕ್ಕನ ಪಕ್ಷ. ಬಹುಮತದ ವಿರೋಧ ಪಕ್ಷ ಆರಿಸಕ್ಕೆ ಚುನಾವಣೆ ಮಾಡಬಕು ಅಷ್ಟೇ’ ಎಂದು ಬೆಕ್ಕಣ್ಣ ಚುನಾವಣೆಯ ಹೊಸ ವ್ಯಾಖ್ಯಾನ ಮಾಡಿತು! </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>