ಹರಟೆಕಟ್ಟೇಲಿ ಲೌಡ್ಸ್ಪೀಕರ್ ಮತ್ತು ಭಜನೆ ಬಗ್ಗೆ ಕಾವೇರಿದ ಚರ್ಚೆ ನಡೆದಿತ್ತು. ಮನೇಲಿ ಹೆಂಡತಿಯಿಂದ ಪೂಜೆ, ಮಂಗಳಾರತಿ ಸೇವೆ ಮಾಡಿಸಿಕೊಂಡು ಆ ಸಿಟ್ಟಿಗೆ ‘ತೀರ್ಥಸ್ವರೂಪ’ ನಾಗಿ ಹರಟೆಕಟ್ಟೆಗೆ ಬಂದಿದ್ದ ತೆಪರೇಸಿ, ‘ನೋ ಅವಾಜ್, ನೋ ಸೌಂಡ್... ಯಾರೂ ಮಾತಾಡಂಗಿಲ್ಲ’ ಎನ್ನುತ್ತ ಎಲ್ಲರ ಮೇಲೂ ಎಗರಿ ಬೀಳುತ್ತಿದ್ದ.