<p>ಮಹಾರಾಜರ ಒಡ್ಡೋಲಗ ನಡೆದಿತ್ತು.</p>.<p>ದೂತ ಬಂದು, ‘ಮಹಾರಾಜರಿಗೆ ನಮೋ ನಮಃ...’ ಎಂದು ನಮಸ್ಕರಿಸಿದ.</p>.<p>‘ದೂತರೆ, ಏನು ಸಂದೇಶ ತಂದಿದ್ದೀರಿ?’ ಮಹಾರಾಜರು ಕೇಳಿದರು.</p>.<p>‘ಪ್ರಭು, ಬಂಗಾಳ ಸಂಸ್ಥಾನ ಗೆದ್ದ ನಿಮ್ಮ ಶೌರ್ಯ, ಪರಾಕ್ರಮವನ್ನು ಪ್ರಜೆಗಳು ಹಾಡಿ ಹೊಗಳುತ್ತಿದ್ದಾರೆ. ಎಲ್ಲೆಡೆ ಅಭಿಮಾನಿಗಳು ವಿಜಯೋತ್ಸವ ಆಚರಿಸುತ್ತಾ ಸಂಭ್ರಮಿಸುತ್ತಿದ್ದಾರೆ’.</p>.<p>‘ಹೌದೆ? ಸಂತೋಷವಾಯಿತು’ ವಿಜಯದ ನಗೆ ನಕ್ಕರು.</p>.<p>‘ಹಸ್ತ ಸಂಸ್ಥಾನದ ಕುರ್ಚಿಗಳು ಅಲ್ಲಾಡುತ್ತಿವೆ ಎಂಬ ತಮ್ಮ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ ಪ್ರಭು’.</p>.<p>‘ಹೌದೆ?’</p>.<p>‘ಹೌದು ಪ್ರಭು, ಕಂಡೋರ ಕುರ್ಚಿ ವಿಷಯದಲ್ಲಿ ಕಡ್ಡಿ ಆಡಿಸಬೇಡಿ, ನಮ್ಮ ಕುರ್ಚಿ ಅಲ್ಲಾಡಿದರೆ ನಾವೇ ಮೊಳೆ ಹೊಡೆದು ಟೈಟ್ ಮಾಡಿಕೊಳ್ಳುತ್ತೇವೆ. ನಮಗೂ ಕುರ್ಚಿಭದ್ರ ಹಿತಾಸಕ್ತಿಯಿದೆ ಎಂದು ಹಸ್ತಪ್ರತಿಗಳು ಕೆರಳಿ ಕೆಂಡವಾಗಿದ್ದಾರೆ’.</p>.<p>‘ಅವರು ಕೆರಳಲಿ, ನರಳಲಿ ಎನ್ನುವ ಕಾರಣಕ್ಕೆ ಅಲ್ಲವೆ ತಾವು ಅಂತಹ ಹೇಳಿಕೆ ನೀಡಿರುವುದು! ಹಹ್ಹಹ್ಹಾ’.</p>.<p>‘ತಾವು ಹಾಗೂ ಮಹಾಮಂತ್ರಿಗಳು ಇತ್ತೀಚೆಗೆ ದಕ್ಷಿಣ ಭಾರತ ಪ್ರವಾಸ ಕೈಗೊಳ್ಳುವುದು ಹೆಚ್ಚಾಗಿದೆ. ಕೇವಲ ಯಾತ್ರೆಯೋ ಅಥವಾ ಸಾಮ್ರಾಜ್ಯ ವಿಸ್ತರಿಸುವ ದಂಡೆಯಾತ್ರೆಯೋ ಎಂದು ಗೊತ್ತಾಗದೆ ವಿರೋಧಿಗಳು ನಡುಗಿಹೋಗಿದ್ದಾರೆ ಪ್ರಭು’.</p>.<p>‘ಹಹ್ಹಹ್ಹಾ...’ ಪ್ರಭುಗಳು ಮತ್ತೊಮ್ಮೆ ನಕ್ಕರು.</p>.<p>‘ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳನ್ನು ಸದೆಬಡಿದು ಏಕ ಭಾರತ, ಏಕ ಪಕ್ಷ ಆಡಳಿತದ ಹುನ್ನಾರ ನಡೆಸಿದ್ದೀರಂತೆ...’</p>.<p>‘ಒಂದು ದೇಶ, ಒಂದು ಆಡಳಿತ, ಒಂದು ಧರ್ಮ, ಒಂದು ಭಾಷೆ ಇದ್ದರೆ ಬಲಿಷ್ಠ ಭಾರತ ನಿರ್ಮಾಣ ಸಾಧ್ಯವಾಗುತ್ತದೆ ದೂತರೇ...’</p>.<p>‘ಏಕಚಕ್ರಾಧಿಪತಿ ಆಡಳಿತವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗುವುದಿಲ್ಲವೆ? ಹೀಗಾದರೆ ಪ್ರಜಾಪ್ರಭುತ್ವ ಹೋಗಿ ರಾಜಪ್ರಭುತ್ವದ ಮರುಸ್ಥಾಪನೆ ಆಗೋದಿಲ್ವೆ ಪ್ರಭು? ಹಾಗಂತ ನಾನು ಹೇಳುತ್ತಿಲ್ಲ, ನಮಗೆ ಆಗದವರು ಹೀಗೆ ಮಾತನಾಡಿಕೊಳ್ಳುತ್ತಿದ್ದಾರೆ...’</p>.<p>ಪ್ರಭುಗಳು ಸಿಟ್ಟಾದರು. ‘ಅಧಿಕಪ್ರಸಂಗಿ, ತೊಲಗು ಇಲ್ಲಿಂದ...’ ಎಂದು ರೇಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಹಾರಾಜರ ಒಡ್ಡೋಲಗ ನಡೆದಿತ್ತು.</p>.<p>ದೂತ ಬಂದು, ‘ಮಹಾರಾಜರಿಗೆ ನಮೋ ನಮಃ...’ ಎಂದು ನಮಸ್ಕರಿಸಿದ.</p>.<p>‘ದೂತರೆ, ಏನು ಸಂದೇಶ ತಂದಿದ್ದೀರಿ?’ ಮಹಾರಾಜರು ಕೇಳಿದರು.</p>.<p>‘ಪ್ರಭು, ಬಂಗಾಳ ಸಂಸ್ಥಾನ ಗೆದ್ದ ನಿಮ್ಮ ಶೌರ್ಯ, ಪರಾಕ್ರಮವನ್ನು ಪ್ರಜೆಗಳು ಹಾಡಿ ಹೊಗಳುತ್ತಿದ್ದಾರೆ. ಎಲ್ಲೆಡೆ ಅಭಿಮಾನಿಗಳು ವಿಜಯೋತ್ಸವ ಆಚರಿಸುತ್ತಾ ಸಂಭ್ರಮಿಸುತ್ತಿದ್ದಾರೆ’.</p>.<p>‘ಹೌದೆ? ಸಂತೋಷವಾಯಿತು’ ವಿಜಯದ ನಗೆ ನಕ್ಕರು.</p>.<p>‘ಹಸ್ತ ಸಂಸ್ಥಾನದ ಕುರ್ಚಿಗಳು ಅಲ್ಲಾಡುತ್ತಿವೆ ಎಂಬ ತಮ್ಮ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ ಪ್ರಭು’.</p>.<p>‘ಹೌದೆ?’</p>.<p>‘ಹೌದು ಪ್ರಭು, ಕಂಡೋರ ಕುರ್ಚಿ ವಿಷಯದಲ್ಲಿ ಕಡ್ಡಿ ಆಡಿಸಬೇಡಿ, ನಮ್ಮ ಕುರ್ಚಿ ಅಲ್ಲಾಡಿದರೆ ನಾವೇ ಮೊಳೆ ಹೊಡೆದು ಟೈಟ್ ಮಾಡಿಕೊಳ್ಳುತ್ತೇವೆ. ನಮಗೂ ಕುರ್ಚಿಭದ್ರ ಹಿತಾಸಕ್ತಿಯಿದೆ ಎಂದು ಹಸ್ತಪ್ರತಿಗಳು ಕೆರಳಿ ಕೆಂಡವಾಗಿದ್ದಾರೆ’.</p>.<p>‘ಅವರು ಕೆರಳಲಿ, ನರಳಲಿ ಎನ್ನುವ ಕಾರಣಕ್ಕೆ ಅಲ್ಲವೆ ತಾವು ಅಂತಹ ಹೇಳಿಕೆ ನೀಡಿರುವುದು! ಹಹ್ಹಹ್ಹಾ’.</p>.<p>‘ತಾವು ಹಾಗೂ ಮಹಾಮಂತ್ರಿಗಳು ಇತ್ತೀಚೆಗೆ ದಕ್ಷಿಣ ಭಾರತ ಪ್ರವಾಸ ಕೈಗೊಳ್ಳುವುದು ಹೆಚ್ಚಾಗಿದೆ. ಕೇವಲ ಯಾತ್ರೆಯೋ ಅಥವಾ ಸಾಮ್ರಾಜ್ಯ ವಿಸ್ತರಿಸುವ ದಂಡೆಯಾತ್ರೆಯೋ ಎಂದು ಗೊತ್ತಾಗದೆ ವಿರೋಧಿಗಳು ನಡುಗಿಹೋಗಿದ್ದಾರೆ ಪ್ರಭು’.</p>.<p>‘ಹಹ್ಹಹ್ಹಾ...’ ಪ್ರಭುಗಳು ಮತ್ತೊಮ್ಮೆ ನಕ್ಕರು.</p>.<p>‘ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳನ್ನು ಸದೆಬಡಿದು ಏಕ ಭಾರತ, ಏಕ ಪಕ್ಷ ಆಡಳಿತದ ಹುನ್ನಾರ ನಡೆಸಿದ್ದೀರಂತೆ...’</p>.<p>‘ಒಂದು ದೇಶ, ಒಂದು ಆಡಳಿತ, ಒಂದು ಧರ್ಮ, ಒಂದು ಭಾಷೆ ಇದ್ದರೆ ಬಲಿಷ್ಠ ಭಾರತ ನಿರ್ಮಾಣ ಸಾಧ್ಯವಾಗುತ್ತದೆ ದೂತರೇ...’</p>.<p>‘ಏಕಚಕ್ರಾಧಿಪತಿ ಆಡಳಿತವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗುವುದಿಲ್ಲವೆ? ಹೀಗಾದರೆ ಪ್ರಜಾಪ್ರಭುತ್ವ ಹೋಗಿ ರಾಜಪ್ರಭುತ್ವದ ಮರುಸ್ಥಾಪನೆ ಆಗೋದಿಲ್ವೆ ಪ್ರಭು? ಹಾಗಂತ ನಾನು ಹೇಳುತ್ತಿಲ್ಲ, ನಮಗೆ ಆಗದವರು ಹೀಗೆ ಮಾತನಾಡಿಕೊಳ್ಳುತ್ತಿದ್ದಾರೆ...’</p>.<p>ಪ್ರಭುಗಳು ಸಿಟ್ಟಾದರು. ‘ಅಧಿಕಪ್ರಸಂಗಿ, ತೊಲಗು ಇಲ್ಲಿಂದ...’ ಎಂದು ರೇಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>