‘ನೋಡ್ಲಾ ಸಂಪುಟ ವಿಸ್ತರಣೆಯಾದ್ರೆ, ಪದವಿ ಕಳಕಂಡ ಸೀನಿಯರುಗಳು, ಪದವಿ ಸಿಗದ ರೆಬೆಲ್ಗಳು, ಪಕ್ಸಾಂತರ ಮಾಡಿ ತಪ್ಪು ಮಾಡಿದೆ ಅಂತ ನೊಂದ್ಕಂಡೋರು, ಆತ್ಮಹತ್ಯೆ ಕೇಸು, ಸೀಡಿ ಕೇಸು, ಅಕ್ರಮದ ಕೇಸಿಗೆ ರಾಜೀನಾಮೆ ಕೊಟ್ಟು ಜಾಬಿಲ್ದೆ ಕುಂತಿರೋ ಬೇರೋಜುಗಾರರು ಬೇಜಾನ್ ಜನವ್ರೆ! ತಿನ್ನು- ತಿನ್ಸು ಅನ್ನೋ ನಮ್ಮ ಪಕ್ಸದ ಅಜೆಂಡಾ ಒಪ್ಪಿ ಇವರೆಲ್ಲಾ ‘ಹಿಂಬಾಲಕರ ಜೊತೆಗೇ ನಿಮ್ಮ ಪಕ್ಸಕ್ಕೆ ಬತ್ತೀವಿ ನಮ್ಮುನ್ನ ಸಿಎಂ ಮಾಡ್ಸಿ. 3,000 ಕೋಟಿ ಬೇಕಾದ್ರೂ ಕೊಟ್ಟೇವು’ ಅಂತ ಜುಲುಮೆ ಮಾಡ್ತಾವ್ರೆ’ ಅಂದ್ರು ತುರೇಮಣೆ.