ರಾಜಕಾರಣಿಗಳು ಜನೋದ್ಧಾರಕ್ಕಾಗಿ ಪರದೂಷಣ ಮಂತ್ರ ಜಪಿಸತೊಡಗುತ್ತಾರೆ. ರ್ಯಾಲಿ, ಸಭೆ–ಸಮಾರಂಭ, ಪಾದಯಾತ್ರೆಗಳಿಂದಾಗಿ ಜನರಿಗೆ ಉಚಿತ ಸೋಂಕು ಹಂಚಿಕೆ ಹೆಚ್ಚುವುವು. ನಾಯಕರಿಗೆ ಪಾದಗಳಲ್ಲಿ ಬಾವು, ಜ್ವರ ಸಂಭವ. ಮತಬಾಧೆ ನಿವಾರಣೆಗೆ ಚುನಾವಣೆಗಳಲ್ಲಿ ಬೂತುಚೇಷ್ಟೆ, ಬೂತುಬಲಿ ಪ್ರಸಂಗಗಳು ಹೆಚ್ಚಲಿವೆ. ಸ್ವಪಕ್ಷಗಾರರಿಗೆ ಅನುದಾನಗಳು ಹೆಚ್ಚುವುದರಿಂದ ಸರ್ಕಾರಕ್ಕೆ ಆಯುರ್ದಾನ. ರಾಜ್ಯ ಮಂತ್ರಿಗಳಿಗೆ ಸ್ಥಾನ ಪಲ್ಲಟ ಭಯ. ಪಿತೃಪಕ್ಷದಿಂದ ಮುಖಾಬೆಲೆ ಹೆಚ್ಚಳಕ್ಕೆ ವಾದಪೂಜೆ. ಮಾತೃಪಕ್ಷದಿಂದ ವೃಥಾಶ್ರಮ.