‘ಹ್ಞೂಂ ಕಣ್ರಿ ಸಾ, ನಾನು ನಾಗಮಂಗಲದೋನು. ಮುಂಬೈನಗಿದ್ದೆ, ಊರಿಗೆ ಕರೊನಾ ತಕ್ಕಬಂದು ಗೊಟಕ್ ಅಂದ್ಮೇಲೆ ಇಲ್ಲಿ ಅಪಾಯಿಂಟ್ಮೆಂಟ್ ಆಗ್ಯದೆ’ ಅಂದ ಅವ. ತಿರುಗಾ ಮೊಬೈಲು ರಿಂಗಾಯ್ತು. ಮಾತಾಡಿದ ಗಂಧರ್ವ ‘ನಮ್ಮ ಕಮೀಶನರ್ ಯಮರಾಜ್ ಯಮರ್ಜೆನ್ಸಿ ಮೀಟಿಂಗ್ ಕರೆದವ್ರೆ. ನನ್ನ ರಿಲೀವರ್ ಬ್ಯಾರೆ ರಜಾ ಹಾಕ್ಯವನೆ, ಏನು ಮಾಡದು?’ ಅಂತ ಟೆನ್ಷನ್ ಆದ. ಅವನಿಗೆ ಒಂದು ಐಡಿಯಾ ಬಂತು.