‘ಹೌದಾ? ಅಲೆ ಇವ್ನ, ನಿನ್ನಂಥ ಕನ್ನಡದ ಕವಿಗೆ ಅಷ್ಟು ತಾತ್ಸಾರನಾ? ಹೆದರಬ್ಯಾಡ, ಅವರು ದಸರಾ ಕವಿಗೋಷ್ಠಿಗೆ ಕರೀದಿದ್ರೇನಂತೆ, ನಾವು ‘ದುಸರಾ’ ಕವಿಗೋಷ್ಠಿ ಮಾಡಾಣ. ಅದಿರ್ಲಿ, ನೀನು ಯಾವುದರ ಮೇಲೆ ಕವನ ಬರೆದಿದ್ದೆ?’ ದುಬ್ಬೀರ ಕೇಳಿದ.
‘ಪೋಸ್ಟರ್ ಮೇಲೆ...’
‘ಥು ನಿನ್ನ, ಅಲ್ಲಲೆ ಯಾರಾದ್ರು ಪೋಸ್ಟರ್ ಮೇಲೆ ಕವನ ಬರೀತಾರಾ? ಬಿಳಿ ಹಾಳೆ ಮೇಲಲ್ವಾ?’ ಗುಡ್ಡೆಗೆ ಸಿಟ್ಟು ಬಂತು.