‘ಪುರಸೊತ್ತೇ ಇಲ್ರೀ ಆಂಟಿ... ದಿನಾ ಬೆಳಗಾದ್ರೆ ಎಷ್ಟ್ ಮಂದಿ ಶಾಸಕರು ಬಲಕಡಿಗಿ ಎದ್ದೇಳಕ ಹತ್ಯಾರ ಅಂದ್ರ, ನಮ್ಮ ಡೇಟಾಬೇಸ್ ತುಂಬಿ ತುಳಕಾಕ ಹತ್ತೇದ. ನಮ್ಮ ರಾಜ್ಯ ಅಷ್ಟೇ ಅಲ್ರೀ, ರಾಷ್ಟ್ರ ಮಟ್ಟದಾಗ ಎಷ್ಟ್ ಅತೃಪ್ತಾತ್ಮಗಳು ಅದಾವು, ಎಷ್ಟ್ ಮಂದಿ ಒಂದ್ ಕಾಲಿನ ಮ್ಯಾಗೆ ನಿಂತಾರ, ಎಷ್ಟ್ ಮಂದಿನ ಒಂಟಿ ಕಾಲಿನ ಮ್ಯಾಗ ನಿಂದ್ರಸಬಕು, ಯಾರ್ಯಾರದು ಏನೇನ್ ಹಕೀಕತ್ತ್ ಅದ, ಇದೇ ಅನಾಲಿಸಿಸ್ ಮಾಡಾಕ ಹತ್ತೇವ್ರಿ. ಮತ್ತ್ ನೀವು ಎಲ್ಲಾನೂ ಒಕ್ಕಣ್ಣಿಂದ ನೋಡೂದು ಬಿಟ್ಟು, ಜರಾ ಪಾಸಿಟಿವ್ ಕಣ್ಣಿಂದ ನೋಡೂದು ಕಲೀರಿ ಆಂಟಿ’ ಒಂದೇ ಉಸಿರಿನಲ್ಲಿ ಹೇಳಿದಳು.