‘ಏನಾದ್ರೂ ಸಮಸ್ಯೆ ಇದೆಯೇ?...’ ಎನ್ನುತ್ತಾ ಬಂದರು ಅಂಗನವಾಡಿ ಮೇಡಂ.
‘ಬನ್ನಿ, ನಮ್ಮ ಸಮಸ್ಯೆ ಒಂದಾ ಎರಡಾ... ಮನೆ ಸಾಲದ ಕಂತು ಕಟ್ಟಿಲ್ಲ, ಕೊರೊನಾ ಕಾಟ ಶುರುವಾಗಿ ಗಂಡನಿಗೆ ಅರ್ಧ ಸಂಬಳ, ಜೀವನ ಕಷ್ಟ ಆಗಿಬಿಟ್ಟಿದೆ’ ಸುಮಿ ಸಂಕಟ ಹೇಳಿಕೊಂಡಳು.
‘ಆರ್ಥಿಕ ಸಮಸ್ಯೆ ಅಲ್ಲ, ಆರೋಗ್ಯ ಸಮಸ್ಯೆ ಹೇಳಿ’.
‘ಪಕ್ಕದ ಮನೆಯವರ ನಾಯಿ ಅಟ್ಟಿಸಿಕೊಂಡು ಬಂದು ನನ್ನ ಮಗ ಬಿದ್ದು ಗಾಯ ಮಾಡಿಕೊಂಡ. ನೋಡಿ, ಇನ್ನೂ ಬ್ಯಾಂಡೇಜ್ ಬಿಚ್ಚಿಲ್ಲ. ನಾಯಿ ಹಿಡಿಯುವವರು ಇದ್ದರೆ ಹೇಳಿ, ನಾಯಿ ಜೊತೆಗೆ ಪಕ್ಕದ ಮನೆಯವಳನ್ನೂ ಹಿಡುಕೊಂಡು ಹೋಗ್ಲಿ...’ ಸುಮಿಗೆ ಸಿಟ್ಟು.