<p>ಬೇಸಿಗೆ ರಜೆಗೆ ಬಂದ ಮಕ್ಕಳು ದಸರಾ ರಜೆ ಬಂದರೂ ಸ್ಕೂಲ್ ಕಡೆ ಹೋಗಲಾಗುತ್ತಿಲ್ಲ. ಹಿಂಗಾದ್ರೆ ಮಕ್ಕಳ ಭವಿಷ್ಯ ಹೆಂಗೆ ಅಂತ ಚಟ್ನಿಹಳ್ಳಿ ಪೇರೆಂಟ್ಸ್ ಕಳವಳಗೊಂಡರು.</p>.<p>‘ವಯಸ್ಸಿಗೆ ತಕ್ಕಂತೆ ಮಕ್ಕಳು ವಿದ್ಯೆ ಕಲಿಯಬೇಕು, ಇಲ್ಲದಿದ್ದರೆ ಕಲಿಯಬಾರದ್ದನ್ನು ಕಲಿತುಬಿಡ್ತಾರೆ’ ಸಿದ್ಧನಂಜ ಆತಂಕಗೊಂಡ.</p>.<p>‘ಶಿಕ್ಷಕರು ಮಾಸ್ಕ್ ಹಾಕ್ಕೊಂಡು ಊರಿಗೆ ಬಂದು ಅರಳಿಕಟ್ಟೆ, ಜಗಲಿಕಟ್ಟೆ ಮೇಲೆ ಮಕ್ಕಳಿಗೆ ಪಾಠ ಹೇಳ್ತಿದ್ದರು. ಸರ್ಕಾರ ಈಗ ಆ ವಿದ್ಯಾಗಮಕ್ಕೂ ರಜೆ ಕೊಟ್ಟುಬಿಟ್ಟಿದೆ’ ಎಂದ ತಿಮ್ಮಣ್ಣ.</p>.<p>‘ಕೊರೊನಾ ಕಾಟ ಮುಗಿಯುವವರೆಗೂ ಶಾಲೆಯ ಬೆಲ್ ಹೊಡೆಯುವುದಿಲ್ಲ, ಮಕ್ಕಳ ಆರೋಗ್ಯ, ಶಿಕ್ಷಣದ ಹೊಣೆ ಪೋಷಕರದ್ದು ಅಂತ ಸರ್ಕಾರ ಹೇಳಿಬಿಟ್ಟಿದೆ’- ಕೆಂಚಪ್ಪ.</p>.<p>‘ಮಕ್ಕಳ ವಿಚಾರಕ್ಕೆ ಸರ್ಕಾರ ಕೈ ಚೆಲ್ಲಬಾರದು. ಶಿಕ್ಷಕರೇ ಮಕ್ಕಳ ಮನೆಗೆ ಬಂದು ಹೋಂ ಟ್ಯೂಷನ್ ಹೇಳುವ ವ್ಯವಸ್ಥೆ ಮಾಡಲಿ’- ಶಿವರಾಮ.</p>.<p>‘ಅಲ್ವೋಲೇ, ಒಬ್ಬ ವಿದ್ಯಾರ್ಥಿಗೆ ಒಬ್ಬೊಬ್ಬ ಟೀಚರ್ ಅಂತ ಮಾಡಿದ್ರೆ ಅಷ್ಟೊಂದು ಮೇಷ್ಟ್ರುಗಳಿಗೆ ಸಂಬಳ ಕೊಡಲು ಸರ್ಕಾರದಲ್ಲಿ ದುಡ್ಡಿಲ್ಲ’- ಶಿವನಂಜ.</p>.<p>‘ಮನೆಯನ್ನೇ ಪಾಠಶಾಲೆ ಮಾಡಿ, ಅಪ್ಪ, ಅಮ್ಮನಿಗೆ ಟೀಚರ್ ಟ್ರೈನಿಂಗ್ ಕೊಟ್ಟು, ಸಂಬಳ ಕೊಟ್ಟು, ಅವರವರ ಮಕ್ಕಳಿಗೆ ಅವರೇ ಪಾಠ ಹೇಳಲು ಸರ್ಕಾರ ಕ್ರಮ ತಗೊಳ್ಳಬೇಕು’ ಎಂದ ರಂಗಪ್ಪ.</p>.<p>‘ಹೌದು, ಬಿಸಿಯೂಟ, ಯೂನಿಫಾರಂ, ಸೈಕಲ್ನ ದುಡ್ಡನ್ನು ಪೇರೆಂಟ್ಸ್ ಸಂಬಳಕ್ಕೆ ಬಳಸಿಕೊಳ್ಳಲಿ’ ಕಿಟ್ಟಪ್ಪನ ಸಲಹೆ.</p>.<p>‘ಎಲ್ಲಾ ಮನೆಯಲ್ಲೇ ಆಗಿಬಿಟ್ಟರೆ ಸ್ಕೂಲ್ ಬಿಲ್ಡಿಂಗ್ ಪಾಳು ಬೀಳುತ್ತದಲ್ಲ...’</p>.<p>‘ಹಬ್ಬ-ಹರಿದಿನ ಬಂದಂಗೆ ಆಗಾಗ ಚುನಾವಣೆಗಳು ಬರುತ್ತವೆ. ಸ್ಕೂಲ್ಗಳಿಗೆ ಬಣ್ಣ ಬಳಿಸಿ ಮತಕೇಂದ್ರ ಅಂತ ಬೋರ್ಡ್ ಹಾಕಿದರಾಯ್ತು’ ಎಂದ ತಿಮ್ಮಣ್ಣ.</p>.<p>ಅಷ್ಟೊತ್ತಿಗೆ, ಬೈ ಎಲೆಕ್ಷನ್ ಕ್ಯಾಂಡಿಡೇಟು ಪ್ರಚಾರಕ್ಕೆ ಬಂದ ವಿಚಾರ ಗೊತ್ತಾಗಿ ಎಲ್ಲರೂ ಅತ್ತ ಓಡಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಬೇಸಿಗೆ ರಜೆಗೆ ಬಂದ ಮಕ್ಕಳು ದಸರಾ ರಜೆ ಬಂದರೂ ಸ್ಕೂಲ್ ಕಡೆ ಹೋಗಲಾಗುತ್ತಿಲ್ಲ. ಹಿಂಗಾದ್ರೆ ಮಕ್ಕಳ ಭವಿಷ್ಯ ಹೆಂಗೆ ಅಂತ ಚಟ್ನಿಹಳ್ಳಿ ಪೇರೆಂಟ್ಸ್ ಕಳವಳಗೊಂಡರು.</p>.<p>‘ವಯಸ್ಸಿಗೆ ತಕ್ಕಂತೆ ಮಕ್ಕಳು ವಿದ್ಯೆ ಕಲಿಯಬೇಕು, ಇಲ್ಲದಿದ್ದರೆ ಕಲಿಯಬಾರದ್ದನ್ನು ಕಲಿತುಬಿಡ್ತಾರೆ’ ಸಿದ್ಧನಂಜ ಆತಂಕಗೊಂಡ.</p>.<p>‘ಶಿಕ್ಷಕರು ಮಾಸ್ಕ್ ಹಾಕ್ಕೊಂಡು ಊರಿಗೆ ಬಂದು ಅರಳಿಕಟ್ಟೆ, ಜಗಲಿಕಟ್ಟೆ ಮೇಲೆ ಮಕ್ಕಳಿಗೆ ಪಾಠ ಹೇಳ್ತಿದ್ದರು. ಸರ್ಕಾರ ಈಗ ಆ ವಿದ್ಯಾಗಮಕ್ಕೂ ರಜೆ ಕೊಟ್ಟುಬಿಟ್ಟಿದೆ’ ಎಂದ ತಿಮ್ಮಣ್ಣ.</p>.<p>‘ಕೊರೊನಾ ಕಾಟ ಮುಗಿಯುವವರೆಗೂ ಶಾಲೆಯ ಬೆಲ್ ಹೊಡೆಯುವುದಿಲ್ಲ, ಮಕ್ಕಳ ಆರೋಗ್ಯ, ಶಿಕ್ಷಣದ ಹೊಣೆ ಪೋಷಕರದ್ದು ಅಂತ ಸರ್ಕಾರ ಹೇಳಿಬಿಟ್ಟಿದೆ’- ಕೆಂಚಪ್ಪ.</p>.<p>‘ಮಕ್ಕಳ ವಿಚಾರಕ್ಕೆ ಸರ್ಕಾರ ಕೈ ಚೆಲ್ಲಬಾರದು. ಶಿಕ್ಷಕರೇ ಮಕ್ಕಳ ಮನೆಗೆ ಬಂದು ಹೋಂ ಟ್ಯೂಷನ್ ಹೇಳುವ ವ್ಯವಸ್ಥೆ ಮಾಡಲಿ’- ಶಿವರಾಮ.</p>.<p>‘ಅಲ್ವೋಲೇ, ಒಬ್ಬ ವಿದ್ಯಾರ್ಥಿಗೆ ಒಬ್ಬೊಬ್ಬ ಟೀಚರ್ ಅಂತ ಮಾಡಿದ್ರೆ ಅಷ್ಟೊಂದು ಮೇಷ್ಟ್ರುಗಳಿಗೆ ಸಂಬಳ ಕೊಡಲು ಸರ್ಕಾರದಲ್ಲಿ ದುಡ್ಡಿಲ್ಲ’- ಶಿವನಂಜ.</p>.<p>‘ಮನೆಯನ್ನೇ ಪಾಠಶಾಲೆ ಮಾಡಿ, ಅಪ್ಪ, ಅಮ್ಮನಿಗೆ ಟೀಚರ್ ಟ್ರೈನಿಂಗ್ ಕೊಟ್ಟು, ಸಂಬಳ ಕೊಟ್ಟು, ಅವರವರ ಮಕ್ಕಳಿಗೆ ಅವರೇ ಪಾಠ ಹೇಳಲು ಸರ್ಕಾರ ಕ್ರಮ ತಗೊಳ್ಳಬೇಕು’ ಎಂದ ರಂಗಪ್ಪ.</p>.<p>‘ಹೌದು, ಬಿಸಿಯೂಟ, ಯೂನಿಫಾರಂ, ಸೈಕಲ್ನ ದುಡ್ಡನ್ನು ಪೇರೆಂಟ್ಸ್ ಸಂಬಳಕ್ಕೆ ಬಳಸಿಕೊಳ್ಳಲಿ’ ಕಿಟ್ಟಪ್ಪನ ಸಲಹೆ.</p>.<p>‘ಎಲ್ಲಾ ಮನೆಯಲ್ಲೇ ಆಗಿಬಿಟ್ಟರೆ ಸ್ಕೂಲ್ ಬಿಲ್ಡಿಂಗ್ ಪಾಳು ಬೀಳುತ್ತದಲ್ಲ...’</p>.<p>‘ಹಬ್ಬ-ಹರಿದಿನ ಬಂದಂಗೆ ಆಗಾಗ ಚುನಾವಣೆಗಳು ಬರುತ್ತವೆ. ಸ್ಕೂಲ್ಗಳಿಗೆ ಬಣ್ಣ ಬಳಿಸಿ ಮತಕೇಂದ್ರ ಅಂತ ಬೋರ್ಡ್ ಹಾಕಿದರಾಯ್ತು’ ಎಂದ ತಿಮ್ಮಣ್ಣ.</p>.<p>ಅಷ್ಟೊತ್ತಿಗೆ, ಬೈ ಎಲೆಕ್ಷನ್ ಕ್ಯಾಂಡಿಡೇಟು ಪ್ರಚಾರಕ್ಕೆ ಬಂದ ವಿಚಾರ ಗೊತ್ತಾಗಿ ಎಲ್ಲರೂ ಅತ್ತ ಓಡಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>