ಗೌಡರ ಗುಡುಗುಗಳು,ಸಿದ್ದು ಗುದ್ದುಗಳು, ತೆನೆ ಕೈಬಿಟ್ಟರೆ ಉ.ಮು.ಮಂ. ಕುರ್ಚಿಗೂ ಸಂಚಕಾರ... ಹೀಗೆ ಹತ್ತಾರು ಕುದಿಸಂಕಟದಲ್ಲಿ ಮಲಗಿದ್ದರು ಪಾಪದ ಪರಮೇಶಣ್ಣ. ಯಾರೋ ಕರೆದಂತೆ ಅನ್ನಿಸಿ ಕಿಟಕಿಯತ್ತ ನೋಡಿದರೆ, ಮಾಸಿದ ಸೀರೆಯ ಬಡಕಲು ಹೆಂಗಸು ಕಂಡಳು. ‘ಜನತಾ ದರ್ಶನ ಯಾದಗಿರಿಯಲ್ಲಿ... ಇಲ್ಲಲ್ಲ...’ ಬೆಂಗಾವಲಿನವರು ಹಚಾ ಎಂದಟ್ಟಲು ನೋಡಿದರು. ಬಡಪೆಟ್ಟಿಗೆ ಹೆಂಗಸು ಕದಲಲಿಲ್ಲ. ಪರಮೇಶಣ್ಣನೇ ಎದ್ದು ಬಂದು ವಿಚಾರಿಸಿದರು.