<p><em><strong>ವಿದ್ಯಾರ್ಥಿಗಳಲ್ಲಿ ನಾಯಕತ್ವ, ಹೊಣೆಗಾರಿಕೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸಲು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಚುನಾವಣೆಗಳನ್ನು ನಡೆಸಲು ರಾಜ್ಯ ಸರ್ಕಾರವು ಹೆಜ್ಜೆ ಮುಂದಿಟ್ಟಿದೆ. ಜೆ.ಎಂ.ಲಿಂಗ್ಡೋ ಅವರ ಸಮಿತಿಯ ಶಿಫಾರಸಿನಂತೆ ರಾಜ್ಯದಲ್ಲೂ ವಿದ್ಯಾರ್ಥಿ ಚುನಾವಣೆಯನ್ನು ಜಾರಿಗೆ ತರಲು ತಯಾರಿ ನಡೆದಿದೆ. ಸರ್ಕಾರದ ಈ ನಿರ್ಧಾರದ ಬಗ್ಗೆ ಕಲಬುರಗಿ ಕೇಂದ್ರೀಯ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ.ರೋಹಿಣಾಕ್ಷ ಶಿರ್ಲಾಲು ಹಾಗೂ ಗದಗದ ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ (ಪ್ರಬಾರ) ಹಾಗೂ ಕುಲಸಚಿವ ಪ್ರೊ. ಸುರೇಶ್ ವಿ. ನಾಡಗೌಡರ್ 'ಪ್ರಜಾವಾಣಿ ಡಿಜಿಟಲ್' ಜತೆಗೆ ತಂತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.</strong></em></p>.<blockquote><strong>ಕ್ಯಾಂಪಸ್ ವಾತಾವರಣ ಹಾಳಾಗದ ನಿಯಮ ಜಾರಿ ಅಗತ್ಯ</strong></blockquote>.<p>ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸುವ ಕರ್ನಾಟಕ ಸರ್ಕಾರದ ನಿಲುವು ಮತ್ತೊಮ್ಮೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಯುವ ನಾಯಕತ್ವದ ನಿರ್ಮಾಣಕ್ಕೆ ಚುನಾವಣೆಗಳು ಬೇಕು ಎನ್ನುವವರು ಒಂದೆಡೆಯಾದರೆ, ಚುನಾವಣೆಗಳಿಂದ ಶೈಕ್ಷಣಿಕ ವಾತಾವರಣ ಕೆಡುತ್ತದೆ ಎಂಬ ಕಾರಣಕ್ಕೆ ಚುನಾವಣೆ ಬೇಡ ಎನ್ನುವ ವಾದವೂ ಇನ್ನೊಂದೆಡೆಯಿಂದ ಕೇಳಿಬರುತ್ತಿದೆ. ಈ ಎರಡೂ ವಾದಗಳಲ್ಲಿ ಸತ್ಯಾಂಶವಿಲ್ಲದಿಲ್ಲ. </p><p>ಹಾಗಾದರೆ ವಿದ್ಯಾರ್ಥಿ ಸಂಘಗಳು ಬೇಡವೇ? ಈ ಹಿಂದೆ ನಿಯಮಿತವಾಗಿ ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ನಡೆಯುತ್ತಿದ್ದಾಗ ಈ ಮೂಲಕ ಮುಂಚೂಣಿಗೆ ಬಂದ ಅನೇಕರು ಮುಂದಿನ ದಿನಗಳಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳ ನಾಯಕರಾದರು. ಚುನಾಯಿತ ಜನಪ್ರತಿನಿಧಿಗಳಾದರು. ಮಂತ್ರಿ, ಮುಖ್ಯ ಮಂತ್ರಿ ಹುದ್ದೆಯವೆರಗೂ ಏರಿದರು. ಕಾರ್ಮಿಕ ಸಂಘಟನೆ, ರೈತ ಹೋರಾಟ, ಪರಿಸರ ಹೋರಾಟಗಳಲ್ಲಿ ಬಹು ದೀರ್ಘಕಾಲ ನಾಯಕರಾಗಿ ಕಾರ್ಯನಿರತರಾದರು. ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಾದವರು, ಆಡಳಿತ ಸೇವೆಗಳಲ್ಲಿ ಸೇರಿಕೊಂಡವರೂ ತಮ್ಮ ವೃತ್ತಿ ಕ್ಷೇತ್ರಗಳಲ್ಲಿ ಸುಧೀರ್ಘ ಕಾಲ ಪ್ರಾಮಾಣಿಕತೆಯನ್ನು ಉಳಿಸಿಕೊಂಡರು. ಅವರು ಎಲ್ಲೇ ಇದ್ದರೂ ಅನ್ಯಾಯದ ವಿರುದ್ಧ ಸೆಟೆದು ನಿಲ್ಲುತ್ತಿದ್ದರು. ಇಂತಹ ವಾತಾವರಣಗಳನ್ನು ಇಂದಿನ ದಿನಗಳಲ್ಲಿ ಕಾಣುವುದು ತೀರಾ ವಿರಳವಾಗಿದೆ. ಸೋ಼ಷಿಯಲ್ ಮೀಡಿಯಾಗಳ ಮೂಲಕ ಪೋಸ್ಟ್ಗಳನ್ನು ಹಂಚಿಕೊಳ್ಳುವುದೇ ಹೋರಾಟ ಎಂದಾಗಿರುವ ದಿನಗಳಲ್ಲಿ ನಿಜವಾದ ಹೋರಾಟದ ನಾಯಕತ್ವ ಹುಟ್ಟಬೇಕಾದರೆ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಯಬೇಕು. ಆದರೆ ಹೇಗೆ ನಡೆಯಬೇಕು ಎನ್ನುವ ಪಾರದರ್ಶಕ ನಿಯಮಗಳನ್ನು ನಾವು ಸರಿಯಾಗಿಯೇ ರೂಪಿಸಿಕೊಳ್ಳಬೇಕು. ಇಲ್ಲವಾದರೆ ಚುನಾವಣೆಯ ನೆಪದಲ್ಲಿ ಕ್ಯಾಂಪಸ್ಗಳು ರಾಜಕೀಯ ಪಕ್ಷಗಳ, ಸ್ಥಳೀಯ ಪ್ರಭಾವಿಗಳ ಹಿಂಬಾಲಕರ ಅಡ್ಡೆಗಳಾಗುವ ಸಾಧ್ಯತೆ ಇದೆ. </p><p><strong>ಯಾಕಾಗಿ ವಿದ್ಯಾರ್ಥಿ ಸಂಘಗಳು ಬೇಕು? </strong></p><p>ವಿದ್ಯಾರ್ಥಿ ಸಂಘ ಯಾಕೆ ಬೇಕು ಎನ್ನುವುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದೆ. ಇಂದಿನ ಕಾಲೇಜು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ನಿತ್ಯವೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಪ್ರಸ್ತುತ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ನೈಜ ಪ್ರಾತಿನಿಧ್ಯವಿಲ್ಲ. ಪ್ರಜಾಪ್ರಭುತ್ವದ ಪ್ರಕ್ರಿಯೆಯಂತೆ ತಮ್ಮ ನಾಯಕರನ್ನು ತಾವೇ ಆಯ್ಕೆ ಮಾಡುವ ಅವಕಾಶವನ್ನು ಕೊಟ್ಟಲ್ಲಿ ವಿದ್ಯಾರ್ಥಿಗಳು ಉತ್ತಮ ನಾಯಕತ್ವದ ಗುಣವಿರುವ ವ್ಯಕ್ತಿಗಳನ್ನೇ ತಮ್ಮನ್ನು ಪ್ರತಿನಿಧಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಬಲ್ಲ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ. ಈ ಹಿನ್ನೆಲೆಯಿಂದ ಸರ್ಕಾರದ ನಿಲುವು ಅಭಿನಂದನಾರ್ಹ. </p><p>ಆದರೆ ಕಾಲೇಜು- ವಿಶ್ವವಿದ್ಯಾಲಯಗಳಲ್ಲಿ ಚುನಾವಣೆಗಳನ್ನು ನಡೆಸುವುದು ಅಷ್ಟೊಂದು ಸುಲಭವೇನಲ್ಲ. ಈಗಾಗಲೇ ತಮ್ಮದೇ ಆದ ರಾಜಕೀಯ ಒಲವು ನಿಲುವುಗಳನ್ನು ರೂಪಿಸಿಕೊಂಡಿರುವ ಈ ಯುವ ಸಮೂಹವನ್ನು ರಾಜಕೀಯೇತರವಾಗಿ ಉಳಿಸಿಕೊಳ್ಳುವುದು ಹೇಗೆ ಎನ್ನುವ ಸವಾಲು ಕೂಡ ಇದೆ. ಇದಕ್ಕಾಗಿ ಈ ಹಿಂದೆ ಜೆ.ಎಂ.ಲಿಂಗ್ಡೋ ಸಮಿತಿ ನೀಡಿದ ಪ್ರಮುಖ ಮಾರ್ಗಸೂಚಿಗಳನ್ನು ಪರಿಗಣಿಸಬೇಕು. ವಿದ್ಯಾರ್ಥಿ ಸಂಘಗಳ ಮೂಲಕ ಚುನಾಯಿತರಾಗುವ ನಾಯಕರು ಮುಂದೆ ಸಮಾಜಕ್ಕೆ ಮಾದರಿಯಾಗಬೇಕು. ಈಗಾಗಲೇ ರಾಜಕೀಯವೂ ಸೇರಿದಂತೆ ಎಲ್ಲ ವಲಯಗಳಲ್ಲಿ ತುಂಬಿರುವ ಕೊಳೆ ಕಸಗಳನ್ನು ನಿವಾರಿಸುವ ಭರವಸೆ ಹುಟ್ಟಿಸುವವರಾಗಬೇಕು. ಯಾವುದೋ ದೇಶದ ಜೆನ್ಜಿ ಕ್ರಾಂತಿಯನ್ನು ಸಂಭ್ರಮಿಸುವ ನಾವು, ನಮ್ಮ ದೇಶದ ಜೆನ್ಜಿಗಳು ಸಮಾಜದ ರಚನಾತ್ಮಕ ಬದಲಾವಣೆಯ ಪಾಲುದಾರರಾಗುವಂತೆ ಏಕೆ ಮಾಡಬಾರದು? ಅದಕ್ಕಾಗಿ ವಿದ್ಯಾರ್ಥಿ ಸಂಘದ ಚುನಾವಣೆಗಳು ಅತ್ಯಂತ ಪಾರದರ್ಶಕವಾಗಿ ನಡೆಯುವಂತೆ ಮಾಡುವ ಹೊಣೆಗಾರಿಕೆ ವ್ಯವಸ್ಥೆಯದ್ದು. ಜತೆಗೆ ಯಾವುದೇ ರಾಜಕೀಯ ಪಕ್ಷಗಳು ಈ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಎಚ್ಚರ ವಹಿಸಿಕೊಳ್ಳಬೇಕು. ಇದಕ್ಕಾಗಿ ನಿಯಮಗಳನ್ನು ರೂಪಿಸಬೇಕು. </p><p>ಉದಾಹರಣೆಗೆ, ಚುನಾವಣೆಗೆ ಸ್ಪರ್ಧಿಸಲು ಬಯಸುವ ವಿದ್ಯಾರ್ಥಿಗಳು ಆಯಾ ಕಾಲೇಜಿನ ಅಧಿಕೃತ ವಿದ್ಯಾರ್ಥಿಗಳಾಗಿರಬೇಕು. ಇಲ್ಲವಾದರೆ ಯಾರನ್ನೋ ಯಾವುದೋ ಕಾಲೇಜಿನಿಂದ ತಂದು ನಿಲ್ಲಿಸಿ ಇಡೀಯ ಪ್ರಕ್ರಿಯೆಯ ಆಶಯವನ್ನೇ ಭಂಗಗೊಳಿಸಬಹುದು. ವಿದ್ಯಾರ್ಥಿಗಳು ಯಾವುದೇ ಸಂದರ್ಭದಲ್ಲೂ ಅರ್ಹತೆಯ ಮಾನದಂಡವಾದ ಕನಿಷ್ಠ 60 ರಿಂದ 70ರಷ್ಟು ಶೇಕಡಾ ಹಾಜರಾತಿಯನ್ನು ಕಡ್ಡಾಯಗೊಳಿಸಲೇಕು. ಇಲ್ಲವಾದರೆ ನಾಮ್ ಕೇ ವಾಸ್ಥೆಗೆ ಕಾಲೇಜು ಸೇರಿ ಅವಕಾಶವನ್ನು ದುರುಪಯೋಗ ಪಡಿಸಿಕೊಳ್ಳಬಹುದು.</p><p>ಶೈಕ್ಷಣಿಕ ಫಲಿತಾಂಶ ಕೂಡ ಉತ್ತಮವಾಗಿದ್ದು ಯಾವುದೇ ಕಾರಣಕ್ಕೂ ಹಿಂದಿನ ಸೆಮಿಸ್ಟರ್ಗಳಲ್ಲಿ ಯಾವುದೇ ವಿಷಯಗಳಲ್ಲಿ ಅನುತ್ತೀರ್ಣಗೊಂಡಿರಬಾರದು ಎನ್ನುವುದನ್ನು ಕಡ್ಡಾಯಗೊಳಿಸಬೇಕು. ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವ ವಿದ್ಯಾರ್ಥಿಗಳು ಈ ಹಿಂದೆ ಯಾವುದೇ ಅಹಿತಕರ ಘಟನೆಗಳಲ್ಲಿ ಭಾಗಿಯಾದ ಅಥವಾ ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದ ಹಿನ್ನೆಲೆ ಇರಬಾರದು. ಯಾವುದೇ ಕೇಸುಗಳು ದಾಖಲಾಗಿರಬಾರದು. ಯಾವುದೇ ರಾಜಕೀಯ ಪಕ್ಷಗಳ ಸದಸ್ಯ ಅಥವಾ ಪದಾಧಿಕಾರಿ ಆಗಿರಬಾರದು. ಚುನಾವಣೆಯು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ಬೆಳೆಸುವುದಕ್ಕಾಗಿ ಇರಬೇಕೇ ಹೊರತು ಕೇವಲ ರಾಜಕೀಯ ಪಕ್ಷಗಳಿಗೆ ಕಾರ್ಯಕರ್ತರನ್ನು ತಯಾರಿಸಿ ಕೊಡಲು ಅಲ್ಲ. ಯಾವುದೇ ರಾಜಕೀಯ ಪಕ್ಷಗಳು ಯಾವುದೇ ರೀತಿಯಿಂದಲೂ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಗಳಾಗಲು ಅವಕಾಶ ನೀಡಲೇಬಾರದು. ಚುನಾವಣಾ ಪ್ರಚಾರ, ಮತದಾನ ಎಲ್ಲವೂ ಕ್ಯಾಂಪಸ್ನ ಒಳಗಷ್ಟೇ ಸೀಮಿತಗೊಳ್ಳುವಂತೆ ಮಾಡಬೇಕು. ಜತೆಗೆ ಚುನಾವಣೆಗೆ ನಡೆಸುವ ಖರ್ಚು–ವೆಚ್ಚಗಳ ಬಗ್ಗೆ ಸೂಕ್ತ ಮಿತಿಯನ್ನು ಹಾಕಬೇಕು. </p><p>ಈ ರೀತಿಯಾಗಿ ಚುನಾವಣ ಪ್ರಕ್ರಿಯೆಯನ್ನು ಒಂದಷ್ಟು ಕಠಿಣ ನಿಯಮಗಳ ಚೌಕಟ್ಟಿಗೆ ಒಳಪಡಿಸಿಯೇ ನಡೆಸಿದಾಗ ಶೈಕ್ಷಣಿಕ ಪರಿಸರಕ್ಕೆ ಚುನಾವಣೆಗಳು ಭೂಷಣವಾಗುತ್ತವೆ. ಇಲ್ಲವಾದರೆ ಶೈಕ್ಷಣಿಕ ವಾತಾವರಣ ಕೆಡುವ ಸಾಧ್ಯತೆಯೂ ಇದ್ದೇ ಇದೆ. ಹಿಂಸಾಚಾರ, ಜಾತಿ ರಾಜಕೀಯಗಳಿಗೆ ಅವಕಾಶ ನೀಡದಂತೆ, ಬಾಹ್ಯ ಗೂಂಡಾಗಿರಿಗಳು ಶೈಕ್ಷಣಿಕ ಪರಿಸರದ ಒಳಗೆ ಬಾರದಂತೆ ತಡೆಯುವ ಹೊಣೆಗಾರಿಕೆಯೂ ಇಲ್ಲಿದೆ.</p><p> ಒಂದು ವೇಳೆ ಈ ಚುನಾವಣೆಗಳು ವ್ಯವಸ್ಥಿತವಾಗಿ ನಡೆಯಲಾರಂಭಿಸಿದರೆ ನಮ್ಮ ಕಾಲದ ಕೆಲವು ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ಸಾಧ್ಯವಾಗಬಹುದು. ಸಾಮಾಜಿಕ ನ್ಯಾಯದ ಪ್ರಾತಿನಿಧ್ಯ, ಮಹಿಳಾ ಪ್ರಾತಿನಿಧ್ಯವೂ ಸೇರಿದಂತೆ ಪ್ರಜಾಪ್ರಭುತ್ವದ ಆಶಯವನ್ನು ಬಲಪಡಿಸುವ ಎಲ್ಲ ಸಂಗತಿಗಳನ್ನು ಅನುಷ್ಠಾನಗೊಳಿಸಿಕೊಳ್ಳಬೇಕು. ಹೀಗೆ ಆದಾಗ ಚುನಾವಣೆಗಳು ಮಾತ್ರ ಆಗುವುದಿಲ್ಲ. ಈ ಮೂಲಕ ನಮ್ಮ ಸಮಾಜದ ಎಲ್ಲ ವಲಯಗಳಿಗೂ ಬೇಕಾದ ಉತ್ತಮ ನಾಯಕತ್ವದ ಗುಣ ಸಾಮಾನ್ಯ ವಿದ್ಯಾರ್ಥಿಗಳಲ್ಲೂ ಬೆಳೆಯಲು ಸಾಧ್ಯವಾಗುತ್ತದೆ. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಕುಟುಂಬ ರಾಜಕಾರಣ, ಜಾತೀಯತೆಯೇ ಮೊದಲಾದ ಸಾಂಕ್ರಾಮಿಕ ರೋಗಗಳಿಗೆ ಯೋಗ್ಯವಾದ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗಬಹುದು. </p><p>ಯಾವುದೇ ಕಾರಣಕ್ಕೂ ಈ ಚುನಾವಣೆಗಳು ರಾಜಕೀಯ ಪಕ್ಷಗಳ ಕಾರ್ಯಸೂಚಿಯ ಅನುಷ್ಠಾನದ ವೇದಿಕೆಗಳಾಗದಂತೆ ತಡೆಯಬೇಕು. ಉತ್ತಮ ಬದ್ಧತೆಯುಳ್ಳ ಯುವಕ ಯುವತಿಯರು ರಾಜಕೀಯ ಮಾತ್ರವಲ್ಲದೆ ಎಲ್ಲ ವಲಯಗಳಿಗೂ ಕ್ಯಾಂಪಸ್ಗಳಿಂದಲೇ ಸಿಗುವಂತಾಗಬೇಕು. ಈ ನಾಯಕತ್ವವನ್ನು ರಚನಾತ್ಮಕವಾಗಿ ಬೆಳೆಸಿದರೆ ರಾಷ್ಟ್ರದ ಸಂಪತ್ತಾಗುತ್ತಾರೆ. ಜಡಗಟ್ಟಿದ ವ್ಯವಸ್ಥೆಯೊಳಗೆ ಸ್ವಲ್ಪ ಚಲನಶೀಲತೆ ಕಾಣಲಾರಂಭಿಸಬಹುದು. ಒಳ್ಳೆಯ ನಾಯಕತ್ವ ರೂಪುಗೊಂಡಾಗ ಕ್ಯಾಂಪಸ್ಗಳಲ್ಲಿ ದೂರಗಾಮಿ ಪರಿಣಾಮವನ್ನು ಉಂಟುಮಾಡುವ ಹೋರಾಟಗಳು ಹುಟ್ಟಬಹುದು. </p><p>ವಿದ್ಯಾರ್ಥಿ ಜೀವನದಲ್ಲೇ ಸಾಮಾಜಿಕ ಬದುಕಿಗೆ ತೆರೆದುಕೊಳ್ಳುವ ಸೇವಾ ಚಟುವಟಿಕೆಗಳಿಗೆ ಅವಕಾಶ ಒದಗಿಸಿಕೊಡುತ್ತದೆ. ಒಳ್ಳೆಯ ವಿದ್ಯಾರ್ಥಿ ಆಂದೋಲನ ಹುಟ್ಟಿದಾಗ, ಹೋರಾಟದ ಗುಣ ರೂಪುಗೊಳ್ಳುತ್ತದೆ. ವಿದ್ಯಾರ್ಥಿ ಸಂಘದ ಚುನಾವಣೆಗಳು ಇದಕ್ಕೊಂದು ಉತ್ತಮ ಅವಕಾಶವಾಗುತ್ತದೆ. ಇಂತಹ ವಿದ್ಯಾರ್ಥಿ ಶಕ್ತಿ ಗುಡುಗಿದರೆ ವಿಧಾನಸೌಧವೂ ನಡುಗುವುದರಲ್ಲಿ ಯಾವ ಅನುಮಾನವೂ ಇಲ್ಲ.</p><p><em><strong>ಡಾ.ರೋಹಿಣಾಕ್ಷ ಶಿರ್ಲಾಲು, ಸಹಾಯಕ ಪ್ರಾಧ್ಯಾಪಕ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ</strong></em></p>.ಆಳ–ಅಗಲ: ವಿದ್ಯಾರ್ಥಿ ಚುನಾವಣೆಯ ಸುತ್ತ.ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ; ಸಿ.ಎಂಗೆ ಶಿಫಾರಸು: ಸಚಿವರ ಭರವಸೆ.<blockquote>ನಾಯಕತ್ವ ಗುಣ ಬೆಳೆಯಲು ಅನುಕೂಲ</blockquote>.<p>ಕರ್ನಾಟಕ ಸರ್ಕಾರವು ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಸಂಘ ಚುನಾವಣೆಗಳನ್ನು ಮರುಪ್ರಾರಂಭಿಸುವ ನಿರ್ಧಾರ ಕೈಗೊಂಡಿರುವುದು ಅತ್ಯಂತ ಸ್ವಾಗತಾರ್ಹ ಹಾಗೂ ದೂರದೃಷ್ಟಿಯ ಹೆಜ್ಜೆಯಾಗಿದೆ. ಈ ಕ್ರಮವು ಯುವಜನರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವುದರ ಜೊತೆಗೆ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬಲಪಡಿಸಲು ಮಹತ್ವದ ಪಾತ್ರವಹಿಸುತ್ತದೆ.</p><p>ವಿದ್ಯಾರ್ಥಿ ಸಂಘ ಚುನಾವಣೆಗಳು ಭವಿಷ್ಯದ ನಾಯಕತ್ವವನ್ನು ರೂಪಿಸುವ ಪ್ರಮುಖ ವೇದಿಕೆಯಾಗಿದೆ. ಇವು ವಿದ್ಯಾರ್ಥಿಗಳಿಗೆ ಆಡಳಿತ, ಪ್ರತಿನಿಧಿತ್ವ ಮತ್ತು ಸಾರ್ವಜನಿಕ ಸಂಪರ್ಕಗಳ ಬಗ್ಗೆ ನೇರ ಅನುಭವವನ್ನು ನೀಡುತ್ತವೆ. ಇಂದಿನ ದಿನಗಳಲ್ಲಿ ಹೊಣೆಗಾರಿಕೆಯುತ ಮತ್ತು ಸಾಮರ್ಥ್ಯವುಳ್ಳ ನಾಯಕತ್ವದ ಅಗತ್ಯ ಹೆಚ್ಚುತ್ತಿರುವ ಸಂದರ್ಭದಲ್ಲಿ, ಇಂತಹ ಅವಕಾಶಗಳು ಜಾಗೃತ, ಆತ್ಮವಿಶ್ವಾಸಿ ಮತ್ತು ಸಾಮಾಜಿಕ ಜವಾಬ್ದಾರಿಯುತ ವ್ಯಕ್ತಿತ್ವಗಳನ್ನು ರೂಪಿಸಲು ಸಹಾಯಕವಾಗುತ್ತವೆ.</p><p>ನನ್ನ ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳುವುದಾದರೆ, ನಾನು ನನ್ನ ಕಾನೂನು ಪದವಿ ಅಭ್ಯಾಸದ ಸಮಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ವಿದ್ಯಾರ್ಥಿಗಳಿಂದ ಚುನಾಯಿತ ಸೆನೆಟ್ ಸದಸ್ಯನಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಪಡೆದಿದ್ದೆ. ಆ ಅನುಭವವು ನನ್ನ ಜೀವನದಲ್ಲಿ ಮಹತ್ವದ ತಿರುವಾಗಿದ್ದು, ನನ್ನ ವ್ಯಕ್ತಿತ್ವ ಅಭಿವೃದ್ಧಿ, ಸಂವಹನ ಕೌಶಲ್ಯಗಳು ಮತ್ತು ಹೊಣೆಗಾರಿಕೆಯ ಭಾವನೆಗಳನ್ನು ಹೆಚ್ಚಿಸಲು ಬಹಳ ಸಹಾಯ ಮಾಡಿದೆ.</p><p>ಈ ಚುನಾವಣಾ ವ್ಯವಸ್ಥೆಯನ್ನು ಮರುಪ್ರಾರಂಭಿಸುವುದರಿಂದ ರಾಜ್ಯದ ಅನೇಕ ವಿದ್ಯಾರ್ಥಿಗಳಿಗೆ ಇಂತಹ ಅಮೂಲ್ಯ ಅನುಭವಗಳನ್ನು ಪಡೆಯುವ ಅವಕಾಶ ಸಿಗುತ್ತದೆ. ಇದು ವಿದ್ಯಾರ್ಥಿಗಳಿಗೆ ತಮ್ಮ ಧ್ವನಿಯನ್ನು ಹೊರಹಾಕಲು, ನಿರ್ಧಾರ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ಪ್ರಾಮಾಣಿಕತೆ ಹಾಗೂ ದೃಷ್ಟಿಯೊಂದಿಗೆ ನಾಯಕತ್ವ ವಹಿಸಲು ಅಗತ್ಯವಾದ ಗುಣಗಳನ್ನು ಬೆಳೆಸಲು ನೆರವಾಗುತ್ತದೆ.</p><p>ಈ ಕ್ರಮವು ಕೇವಲ ಕ್ಯಾಂಪಸ್ ಆಡಳಿತದ ವಿಷಯವಲ್ಲ — ಇದು ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಭವಿಷ್ಯವನ್ನು ಬಲಪಡಿಸುವ ಹೂಡಿಕೆಯಾಗಿದೆ. ಈ ದಿಟ್ಟ ನಿರ್ಧಾರಕ್ಕಾಗಿ ಕರ್ನಾಟಕ ಸರ್ಕಾರ ಅಭಿನಂದನಾರ್ಹವಾಗಿದೆ.</p><p><em><strong>ಪ್ರೊ. ಡಾ. ಸುರೇಶ್ ವಿ. ನಾಡಗೌಡರ್, ಕುಲಪತಿಗಳು (ಪ್ರಭಾರ) ಹಾಗೂ ಕುಲಸಚಿವರು ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ್</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ವಿದ್ಯಾರ್ಥಿಗಳಲ್ಲಿ ನಾಯಕತ್ವ, ಹೊಣೆಗಾರಿಕೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸಲು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಚುನಾವಣೆಗಳನ್ನು ನಡೆಸಲು ರಾಜ್ಯ ಸರ್ಕಾರವು ಹೆಜ್ಜೆ ಮುಂದಿಟ್ಟಿದೆ. ಜೆ.ಎಂ.ಲಿಂಗ್ಡೋ ಅವರ ಸಮಿತಿಯ ಶಿಫಾರಸಿನಂತೆ ರಾಜ್ಯದಲ್ಲೂ ವಿದ್ಯಾರ್ಥಿ ಚುನಾವಣೆಯನ್ನು ಜಾರಿಗೆ ತರಲು ತಯಾರಿ ನಡೆದಿದೆ. ಸರ್ಕಾರದ ಈ ನಿರ್ಧಾರದ ಬಗ್ಗೆ ಕಲಬುರಗಿ ಕೇಂದ್ರೀಯ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ.ರೋಹಿಣಾಕ್ಷ ಶಿರ್ಲಾಲು ಹಾಗೂ ಗದಗದ ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ (ಪ್ರಬಾರ) ಹಾಗೂ ಕುಲಸಚಿವ ಪ್ರೊ. ಸುರೇಶ್ ವಿ. ನಾಡಗೌಡರ್ 'ಪ್ರಜಾವಾಣಿ ಡಿಜಿಟಲ್' ಜತೆಗೆ ತಂತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.</strong></em></p>.<blockquote><strong>ಕ್ಯಾಂಪಸ್ ವಾತಾವರಣ ಹಾಳಾಗದ ನಿಯಮ ಜಾರಿ ಅಗತ್ಯ</strong></blockquote>.<p>ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸುವ ಕರ್ನಾಟಕ ಸರ್ಕಾರದ ನಿಲುವು ಮತ್ತೊಮ್ಮೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಯುವ ನಾಯಕತ್ವದ ನಿರ್ಮಾಣಕ್ಕೆ ಚುನಾವಣೆಗಳು ಬೇಕು ಎನ್ನುವವರು ಒಂದೆಡೆಯಾದರೆ, ಚುನಾವಣೆಗಳಿಂದ ಶೈಕ್ಷಣಿಕ ವಾತಾವರಣ ಕೆಡುತ್ತದೆ ಎಂಬ ಕಾರಣಕ್ಕೆ ಚುನಾವಣೆ ಬೇಡ ಎನ್ನುವ ವಾದವೂ ಇನ್ನೊಂದೆಡೆಯಿಂದ ಕೇಳಿಬರುತ್ತಿದೆ. ಈ ಎರಡೂ ವಾದಗಳಲ್ಲಿ ಸತ್ಯಾಂಶವಿಲ್ಲದಿಲ್ಲ. </p><p>ಹಾಗಾದರೆ ವಿದ್ಯಾರ್ಥಿ ಸಂಘಗಳು ಬೇಡವೇ? ಈ ಹಿಂದೆ ನಿಯಮಿತವಾಗಿ ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ನಡೆಯುತ್ತಿದ್ದಾಗ ಈ ಮೂಲಕ ಮುಂಚೂಣಿಗೆ ಬಂದ ಅನೇಕರು ಮುಂದಿನ ದಿನಗಳಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳ ನಾಯಕರಾದರು. ಚುನಾಯಿತ ಜನಪ್ರತಿನಿಧಿಗಳಾದರು. ಮಂತ್ರಿ, ಮುಖ್ಯ ಮಂತ್ರಿ ಹುದ್ದೆಯವೆರಗೂ ಏರಿದರು. ಕಾರ್ಮಿಕ ಸಂಘಟನೆ, ರೈತ ಹೋರಾಟ, ಪರಿಸರ ಹೋರಾಟಗಳಲ್ಲಿ ಬಹು ದೀರ್ಘಕಾಲ ನಾಯಕರಾಗಿ ಕಾರ್ಯನಿರತರಾದರು. ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಾದವರು, ಆಡಳಿತ ಸೇವೆಗಳಲ್ಲಿ ಸೇರಿಕೊಂಡವರೂ ತಮ್ಮ ವೃತ್ತಿ ಕ್ಷೇತ್ರಗಳಲ್ಲಿ ಸುಧೀರ್ಘ ಕಾಲ ಪ್ರಾಮಾಣಿಕತೆಯನ್ನು ಉಳಿಸಿಕೊಂಡರು. ಅವರು ಎಲ್ಲೇ ಇದ್ದರೂ ಅನ್ಯಾಯದ ವಿರುದ್ಧ ಸೆಟೆದು ನಿಲ್ಲುತ್ತಿದ್ದರು. ಇಂತಹ ವಾತಾವರಣಗಳನ್ನು ಇಂದಿನ ದಿನಗಳಲ್ಲಿ ಕಾಣುವುದು ತೀರಾ ವಿರಳವಾಗಿದೆ. ಸೋ಼ಷಿಯಲ್ ಮೀಡಿಯಾಗಳ ಮೂಲಕ ಪೋಸ್ಟ್ಗಳನ್ನು ಹಂಚಿಕೊಳ್ಳುವುದೇ ಹೋರಾಟ ಎಂದಾಗಿರುವ ದಿನಗಳಲ್ಲಿ ನಿಜವಾದ ಹೋರಾಟದ ನಾಯಕತ್ವ ಹುಟ್ಟಬೇಕಾದರೆ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಯಬೇಕು. ಆದರೆ ಹೇಗೆ ನಡೆಯಬೇಕು ಎನ್ನುವ ಪಾರದರ್ಶಕ ನಿಯಮಗಳನ್ನು ನಾವು ಸರಿಯಾಗಿಯೇ ರೂಪಿಸಿಕೊಳ್ಳಬೇಕು. ಇಲ್ಲವಾದರೆ ಚುನಾವಣೆಯ ನೆಪದಲ್ಲಿ ಕ್ಯಾಂಪಸ್ಗಳು ರಾಜಕೀಯ ಪಕ್ಷಗಳ, ಸ್ಥಳೀಯ ಪ್ರಭಾವಿಗಳ ಹಿಂಬಾಲಕರ ಅಡ್ಡೆಗಳಾಗುವ ಸಾಧ್ಯತೆ ಇದೆ. </p><p><strong>ಯಾಕಾಗಿ ವಿದ್ಯಾರ್ಥಿ ಸಂಘಗಳು ಬೇಕು? </strong></p><p>ವಿದ್ಯಾರ್ಥಿ ಸಂಘ ಯಾಕೆ ಬೇಕು ಎನ್ನುವುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದೆ. ಇಂದಿನ ಕಾಲೇಜು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ನಿತ್ಯವೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಪ್ರಸ್ತುತ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ನೈಜ ಪ್ರಾತಿನಿಧ್ಯವಿಲ್ಲ. ಪ್ರಜಾಪ್ರಭುತ್ವದ ಪ್ರಕ್ರಿಯೆಯಂತೆ ತಮ್ಮ ನಾಯಕರನ್ನು ತಾವೇ ಆಯ್ಕೆ ಮಾಡುವ ಅವಕಾಶವನ್ನು ಕೊಟ್ಟಲ್ಲಿ ವಿದ್ಯಾರ್ಥಿಗಳು ಉತ್ತಮ ನಾಯಕತ್ವದ ಗುಣವಿರುವ ವ್ಯಕ್ತಿಗಳನ್ನೇ ತಮ್ಮನ್ನು ಪ್ರತಿನಿಧಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಬಲ್ಲ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ. ಈ ಹಿನ್ನೆಲೆಯಿಂದ ಸರ್ಕಾರದ ನಿಲುವು ಅಭಿನಂದನಾರ್ಹ. </p><p>ಆದರೆ ಕಾಲೇಜು- ವಿಶ್ವವಿದ್ಯಾಲಯಗಳಲ್ಲಿ ಚುನಾವಣೆಗಳನ್ನು ನಡೆಸುವುದು ಅಷ್ಟೊಂದು ಸುಲಭವೇನಲ್ಲ. ಈಗಾಗಲೇ ತಮ್ಮದೇ ಆದ ರಾಜಕೀಯ ಒಲವು ನಿಲುವುಗಳನ್ನು ರೂಪಿಸಿಕೊಂಡಿರುವ ಈ ಯುವ ಸಮೂಹವನ್ನು ರಾಜಕೀಯೇತರವಾಗಿ ಉಳಿಸಿಕೊಳ್ಳುವುದು ಹೇಗೆ ಎನ್ನುವ ಸವಾಲು ಕೂಡ ಇದೆ. ಇದಕ್ಕಾಗಿ ಈ ಹಿಂದೆ ಜೆ.ಎಂ.ಲಿಂಗ್ಡೋ ಸಮಿತಿ ನೀಡಿದ ಪ್ರಮುಖ ಮಾರ್ಗಸೂಚಿಗಳನ್ನು ಪರಿಗಣಿಸಬೇಕು. ವಿದ್ಯಾರ್ಥಿ ಸಂಘಗಳ ಮೂಲಕ ಚುನಾಯಿತರಾಗುವ ನಾಯಕರು ಮುಂದೆ ಸಮಾಜಕ್ಕೆ ಮಾದರಿಯಾಗಬೇಕು. ಈಗಾಗಲೇ ರಾಜಕೀಯವೂ ಸೇರಿದಂತೆ ಎಲ್ಲ ವಲಯಗಳಲ್ಲಿ ತುಂಬಿರುವ ಕೊಳೆ ಕಸಗಳನ್ನು ನಿವಾರಿಸುವ ಭರವಸೆ ಹುಟ್ಟಿಸುವವರಾಗಬೇಕು. ಯಾವುದೋ ದೇಶದ ಜೆನ್ಜಿ ಕ್ರಾಂತಿಯನ್ನು ಸಂಭ್ರಮಿಸುವ ನಾವು, ನಮ್ಮ ದೇಶದ ಜೆನ್ಜಿಗಳು ಸಮಾಜದ ರಚನಾತ್ಮಕ ಬದಲಾವಣೆಯ ಪಾಲುದಾರರಾಗುವಂತೆ ಏಕೆ ಮಾಡಬಾರದು? ಅದಕ್ಕಾಗಿ ವಿದ್ಯಾರ್ಥಿ ಸಂಘದ ಚುನಾವಣೆಗಳು ಅತ್ಯಂತ ಪಾರದರ್ಶಕವಾಗಿ ನಡೆಯುವಂತೆ ಮಾಡುವ ಹೊಣೆಗಾರಿಕೆ ವ್ಯವಸ್ಥೆಯದ್ದು. ಜತೆಗೆ ಯಾವುದೇ ರಾಜಕೀಯ ಪಕ್ಷಗಳು ಈ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಎಚ್ಚರ ವಹಿಸಿಕೊಳ್ಳಬೇಕು. ಇದಕ್ಕಾಗಿ ನಿಯಮಗಳನ್ನು ರೂಪಿಸಬೇಕು. </p><p>ಉದಾಹರಣೆಗೆ, ಚುನಾವಣೆಗೆ ಸ್ಪರ್ಧಿಸಲು ಬಯಸುವ ವಿದ್ಯಾರ್ಥಿಗಳು ಆಯಾ ಕಾಲೇಜಿನ ಅಧಿಕೃತ ವಿದ್ಯಾರ್ಥಿಗಳಾಗಿರಬೇಕು. ಇಲ್ಲವಾದರೆ ಯಾರನ್ನೋ ಯಾವುದೋ ಕಾಲೇಜಿನಿಂದ ತಂದು ನಿಲ್ಲಿಸಿ ಇಡೀಯ ಪ್ರಕ್ರಿಯೆಯ ಆಶಯವನ್ನೇ ಭಂಗಗೊಳಿಸಬಹುದು. ವಿದ್ಯಾರ್ಥಿಗಳು ಯಾವುದೇ ಸಂದರ್ಭದಲ್ಲೂ ಅರ್ಹತೆಯ ಮಾನದಂಡವಾದ ಕನಿಷ್ಠ 60 ರಿಂದ 70ರಷ್ಟು ಶೇಕಡಾ ಹಾಜರಾತಿಯನ್ನು ಕಡ್ಡಾಯಗೊಳಿಸಲೇಕು. ಇಲ್ಲವಾದರೆ ನಾಮ್ ಕೇ ವಾಸ್ಥೆಗೆ ಕಾಲೇಜು ಸೇರಿ ಅವಕಾಶವನ್ನು ದುರುಪಯೋಗ ಪಡಿಸಿಕೊಳ್ಳಬಹುದು.</p><p>ಶೈಕ್ಷಣಿಕ ಫಲಿತಾಂಶ ಕೂಡ ಉತ್ತಮವಾಗಿದ್ದು ಯಾವುದೇ ಕಾರಣಕ್ಕೂ ಹಿಂದಿನ ಸೆಮಿಸ್ಟರ್ಗಳಲ್ಲಿ ಯಾವುದೇ ವಿಷಯಗಳಲ್ಲಿ ಅನುತ್ತೀರ್ಣಗೊಂಡಿರಬಾರದು ಎನ್ನುವುದನ್ನು ಕಡ್ಡಾಯಗೊಳಿಸಬೇಕು. ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವ ವಿದ್ಯಾರ್ಥಿಗಳು ಈ ಹಿಂದೆ ಯಾವುದೇ ಅಹಿತಕರ ಘಟನೆಗಳಲ್ಲಿ ಭಾಗಿಯಾದ ಅಥವಾ ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದ ಹಿನ್ನೆಲೆ ಇರಬಾರದು. ಯಾವುದೇ ಕೇಸುಗಳು ದಾಖಲಾಗಿರಬಾರದು. ಯಾವುದೇ ರಾಜಕೀಯ ಪಕ್ಷಗಳ ಸದಸ್ಯ ಅಥವಾ ಪದಾಧಿಕಾರಿ ಆಗಿರಬಾರದು. ಚುನಾವಣೆಯು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ಬೆಳೆಸುವುದಕ್ಕಾಗಿ ಇರಬೇಕೇ ಹೊರತು ಕೇವಲ ರಾಜಕೀಯ ಪಕ್ಷಗಳಿಗೆ ಕಾರ್ಯಕರ್ತರನ್ನು ತಯಾರಿಸಿ ಕೊಡಲು ಅಲ್ಲ. ಯಾವುದೇ ರಾಜಕೀಯ ಪಕ್ಷಗಳು ಯಾವುದೇ ರೀತಿಯಿಂದಲೂ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಗಳಾಗಲು ಅವಕಾಶ ನೀಡಲೇಬಾರದು. ಚುನಾವಣಾ ಪ್ರಚಾರ, ಮತದಾನ ಎಲ್ಲವೂ ಕ್ಯಾಂಪಸ್ನ ಒಳಗಷ್ಟೇ ಸೀಮಿತಗೊಳ್ಳುವಂತೆ ಮಾಡಬೇಕು. ಜತೆಗೆ ಚುನಾವಣೆಗೆ ನಡೆಸುವ ಖರ್ಚು–ವೆಚ್ಚಗಳ ಬಗ್ಗೆ ಸೂಕ್ತ ಮಿತಿಯನ್ನು ಹಾಕಬೇಕು. </p><p>ಈ ರೀತಿಯಾಗಿ ಚುನಾವಣ ಪ್ರಕ್ರಿಯೆಯನ್ನು ಒಂದಷ್ಟು ಕಠಿಣ ನಿಯಮಗಳ ಚೌಕಟ್ಟಿಗೆ ಒಳಪಡಿಸಿಯೇ ನಡೆಸಿದಾಗ ಶೈಕ್ಷಣಿಕ ಪರಿಸರಕ್ಕೆ ಚುನಾವಣೆಗಳು ಭೂಷಣವಾಗುತ್ತವೆ. ಇಲ್ಲವಾದರೆ ಶೈಕ್ಷಣಿಕ ವಾತಾವರಣ ಕೆಡುವ ಸಾಧ್ಯತೆಯೂ ಇದ್ದೇ ಇದೆ. ಹಿಂಸಾಚಾರ, ಜಾತಿ ರಾಜಕೀಯಗಳಿಗೆ ಅವಕಾಶ ನೀಡದಂತೆ, ಬಾಹ್ಯ ಗೂಂಡಾಗಿರಿಗಳು ಶೈಕ್ಷಣಿಕ ಪರಿಸರದ ಒಳಗೆ ಬಾರದಂತೆ ತಡೆಯುವ ಹೊಣೆಗಾರಿಕೆಯೂ ಇಲ್ಲಿದೆ.</p><p> ಒಂದು ವೇಳೆ ಈ ಚುನಾವಣೆಗಳು ವ್ಯವಸ್ಥಿತವಾಗಿ ನಡೆಯಲಾರಂಭಿಸಿದರೆ ನಮ್ಮ ಕಾಲದ ಕೆಲವು ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ಸಾಧ್ಯವಾಗಬಹುದು. ಸಾಮಾಜಿಕ ನ್ಯಾಯದ ಪ್ರಾತಿನಿಧ್ಯ, ಮಹಿಳಾ ಪ್ರಾತಿನಿಧ್ಯವೂ ಸೇರಿದಂತೆ ಪ್ರಜಾಪ್ರಭುತ್ವದ ಆಶಯವನ್ನು ಬಲಪಡಿಸುವ ಎಲ್ಲ ಸಂಗತಿಗಳನ್ನು ಅನುಷ್ಠಾನಗೊಳಿಸಿಕೊಳ್ಳಬೇಕು. ಹೀಗೆ ಆದಾಗ ಚುನಾವಣೆಗಳು ಮಾತ್ರ ಆಗುವುದಿಲ್ಲ. ಈ ಮೂಲಕ ನಮ್ಮ ಸಮಾಜದ ಎಲ್ಲ ವಲಯಗಳಿಗೂ ಬೇಕಾದ ಉತ್ತಮ ನಾಯಕತ್ವದ ಗುಣ ಸಾಮಾನ್ಯ ವಿದ್ಯಾರ್ಥಿಗಳಲ್ಲೂ ಬೆಳೆಯಲು ಸಾಧ್ಯವಾಗುತ್ತದೆ. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಕುಟುಂಬ ರಾಜಕಾರಣ, ಜಾತೀಯತೆಯೇ ಮೊದಲಾದ ಸಾಂಕ್ರಾಮಿಕ ರೋಗಗಳಿಗೆ ಯೋಗ್ಯವಾದ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗಬಹುದು. </p><p>ಯಾವುದೇ ಕಾರಣಕ್ಕೂ ಈ ಚುನಾವಣೆಗಳು ರಾಜಕೀಯ ಪಕ್ಷಗಳ ಕಾರ್ಯಸೂಚಿಯ ಅನುಷ್ಠಾನದ ವೇದಿಕೆಗಳಾಗದಂತೆ ತಡೆಯಬೇಕು. ಉತ್ತಮ ಬದ್ಧತೆಯುಳ್ಳ ಯುವಕ ಯುವತಿಯರು ರಾಜಕೀಯ ಮಾತ್ರವಲ್ಲದೆ ಎಲ್ಲ ವಲಯಗಳಿಗೂ ಕ್ಯಾಂಪಸ್ಗಳಿಂದಲೇ ಸಿಗುವಂತಾಗಬೇಕು. ಈ ನಾಯಕತ್ವವನ್ನು ರಚನಾತ್ಮಕವಾಗಿ ಬೆಳೆಸಿದರೆ ರಾಷ್ಟ್ರದ ಸಂಪತ್ತಾಗುತ್ತಾರೆ. ಜಡಗಟ್ಟಿದ ವ್ಯವಸ್ಥೆಯೊಳಗೆ ಸ್ವಲ್ಪ ಚಲನಶೀಲತೆ ಕಾಣಲಾರಂಭಿಸಬಹುದು. ಒಳ್ಳೆಯ ನಾಯಕತ್ವ ರೂಪುಗೊಂಡಾಗ ಕ್ಯಾಂಪಸ್ಗಳಲ್ಲಿ ದೂರಗಾಮಿ ಪರಿಣಾಮವನ್ನು ಉಂಟುಮಾಡುವ ಹೋರಾಟಗಳು ಹುಟ್ಟಬಹುದು. </p><p>ವಿದ್ಯಾರ್ಥಿ ಜೀವನದಲ್ಲೇ ಸಾಮಾಜಿಕ ಬದುಕಿಗೆ ತೆರೆದುಕೊಳ್ಳುವ ಸೇವಾ ಚಟುವಟಿಕೆಗಳಿಗೆ ಅವಕಾಶ ಒದಗಿಸಿಕೊಡುತ್ತದೆ. ಒಳ್ಳೆಯ ವಿದ್ಯಾರ್ಥಿ ಆಂದೋಲನ ಹುಟ್ಟಿದಾಗ, ಹೋರಾಟದ ಗುಣ ರೂಪುಗೊಳ್ಳುತ್ತದೆ. ವಿದ್ಯಾರ್ಥಿ ಸಂಘದ ಚುನಾವಣೆಗಳು ಇದಕ್ಕೊಂದು ಉತ್ತಮ ಅವಕಾಶವಾಗುತ್ತದೆ. ಇಂತಹ ವಿದ್ಯಾರ್ಥಿ ಶಕ್ತಿ ಗುಡುಗಿದರೆ ವಿಧಾನಸೌಧವೂ ನಡುಗುವುದರಲ್ಲಿ ಯಾವ ಅನುಮಾನವೂ ಇಲ್ಲ.</p><p><em><strong>ಡಾ.ರೋಹಿಣಾಕ್ಷ ಶಿರ್ಲಾಲು, ಸಹಾಯಕ ಪ್ರಾಧ್ಯಾಪಕ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ</strong></em></p>.ಆಳ–ಅಗಲ: ವಿದ್ಯಾರ್ಥಿ ಚುನಾವಣೆಯ ಸುತ್ತ.ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ; ಸಿ.ಎಂಗೆ ಶಿಫಾರಸು: ಸಚಿವರ ಭರವಸೆ.<blockquote>ನಾಯಕತ್ವ ಗುಣ ಬೆಳೆಯಲು ಅನುಕೂಲ</blockquote>.<p>ಕರ್ನಾಟಕ ಸರ್ಕಾರವು ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಸಂಘ ಚುನಾವಣೆಗಳನ್ನು ಮರುಪ್ರಾರಂಭಿಸುವ ನಿರ್ಧಾರ ಕೈಗೊಂಡಿರುವುದು ಅತ್ಯಂತ ಸ್ವಾಗತಾರ್ಹ ಹಾಗೂ ದೂರದೃಷ್ಟಿಯ ಹೆಜ್ಜೆಯಾಗಿದೆ. ಈ ಕ್ರಮವು ಯುವಜನರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವುದರ ಜೊತೆಗೆ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬಲಪಡಿಸಲು ಮಹತ್ವದ ಪಾತ್ರವಹಿಸುತ್ತದೆ.</p><p>ವಿದ್ಯಾರ್ಥಿ ಸಂಘ ಚುನಾವಣೆಗಳು ಭವಿಷ್ಯದ ನಾಯಕತ್ವವನ್ನು ರೂಪಿಸುವ ಪ್ರಮುಖ ವೇದಿಕೆಯಾಗಿದೆ. ಇವು ವಿದ್ಯಾರ್ಥಿಗಳಿಗೆ ಆಡಳಿತ, ಪ್ರತಿನಿಧಿತ್ವ ಮತ್ತು ಸಾರ್ವಜನಿಕ ಸಂಪರ್ಕಗಳ ಬಗ್ಗೆ ನೇರ ಅನುಭವವನ್ನು ನೀಡುತ್ತವೆ. ಇಂದಿನ ದಿನಗಳಲ್ಲಿ ಹೊಣೆಗಾರಿಕೆಯುತ ಮತ್ತು ಸಾಮರ್ಥ್ಯವುಳ್ಳ ನಾಯಕತ್ವದ ಅಗತ್ಯ ಹೆಚ್ಚುತ್ತಿರುವ ಸಂದರ್ಭದಲ್ಲಿ, ಇಂತಹ ಅವಕಾಶಗಳು ಜಾಗೃತ, ಆತ್ಮವಿಶ್ವಾಸಿ ಮತ್ತು ಸಾಮಾಜಿಕ ಜವಾಬ್ದಾರಿಯುತ ವ್ಯಕ್ತಿತ್ವಗಳನ್ನು ರೂಪಿಸಲು ಸಹಾಯಕವಾಗುತ್ತವೆ.</p><p>ನನ್ನ ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳುವುದಾದರೆ, ನಾನು ನನ್ನ ಕಾನೂನು ಪದವಿ ಅಭ್ಯಾಸದ ಸಮಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ವಿದ್ಯಾರ್ಥಿಗಳಿಂದ ಚುನಾಯಿತ ಸೆನೆಟ್ ಸದಸ್ಯನಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಪಡೆದಿದ್ದೆ. ಆ ಅನುಭವವು ನನ್ನ ಜೀವನದಲ್ಲಿ ಮಹತ್ವದ ತಿರುವಾಗಿದ್ದು, ನನ್ನ ವ್ಯಕ್ತಿತ್ವ ಅಭಿವೃದ್ಧಿ, ಸಂವಹನ ಕೌಶಲ್ಯಗಳು ಮತ್ತು ಹೊಣೆಗಾರಿಕೆಯ ಭಾವನೆಗಳನ್ನು ಹೆಚ್ಚಿಸಲು ಬಹಳ ಸಹಾಯ ಮಾಡಿದೆ.</p><p>ಈ ಚುನಾವಣಾ ವ್ಯವಸ್ಥೆಯನ್ನು ಮರುಪ್ರಾರಂಭಿಸುವುದರಿಂದ ರಾಜ್ಯದ ಅನೇಕ ವಿದ್ಯಾರ್ಥಿಗಳಿಗೆ ಇಂತಹ ಅಮೂಲ್ಯ ಅನುಭವಗಳನ್ನು ಪಡೆಯುವ ಅವಕಾಶ ಸಿಗುತ್ತದೆ. ಇದು ವಿದ್ಯಾರ್ಥಿಗಳಿಗೆ ತಮ್ಮ ಧ್ವನಿಯನ್ನು ಹೊರಹಾಕಲು, ನಿರ್ಧಾರ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ಪ್ರಾಮಾಣಿಕತೆ ಹಾಗೂ ದೃಷ್ಟಿಯೊಂದಿಗೆ ನಾಯಕತ್ವ ವಹಿಸಲು ಅಗತ್ಯವಾದ ಗುಣಗಳನ್ನು ಬೆಳೆಸಲು ನೆರವಾಗುತ್ತದೆ.</p><p>ಈ ಕ್ರಮವು ಕೇವಲ ಕ್ಯಾಂಪಸ್ ಆಡಳಿತದ ವಿಷಯವಲ್ಲ — ಇದು ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಭವಿಷ್ಯವನ್ನು ಬಲಪಡಿಸುವ ಹೂಡಿಕೆಯಾಗಿದೆ. ಈ ದಿಟ್ಟ ನಿರ್ಧಾರಕ್ಕಾಗಿ ಕರ್ನಾಟಕ ಸರ್ಕಾರ ಅಭಿನಂದನಾರ್ಹವಾಗಿದೆ.</p><p><em><strong>ಪ್ರೊ. ಡಾ. ಸುರೇಶ್ ವಿ. ನಾಡಗೌಡರ್, ಕುಲಪತಿಗಳು (ಪ್ರಭಾರ) ಹಾಗೂ ಕುಲಸಚಿವರು ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ್</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>