<p>ಲೋಕಸಭೆಯಲ್ಲಿ ಕಳೆದ ವಾರ ಮಂಡನೆ ಆಗಿರುವ ‘ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ 2026’ ಸರ್ಕಾರೇತರ ಸಂಸ್ಥೆಗಳ (ಎನ್ಜಿಒ) ಚಟುವಟಿಕೆ ಮೇಲೆ ನಿಯಂತ್ರಣ ಸಾಧಿಸಲು ಹಾಗೂ ಅವುಗಳ ಮೇಲಿನ ಹಿಡಿತವನ್ನು ಇನ್ನಷ್ಟು ಬಲಗೊಳಿಸಲು ಕೇಂದ್ರ ಸರ್ಕಾರಕ್ಕೆ ಅವಕಾಶ ಕಲ್ಪಿಸಲಿದೆ. ಕಾನೂನು ಪ್ರಕಾರ ನೋಂದಣಿ ರದ್ದುಗೊಂಡಿರುವ ಇಲ್ಲವೇ ನಿರ್ಬಂಧಕ್ಕೊಳಗಾಗಿರುವ ಎನ್ಜಿಒಗಳ ವಿದೇಶಿ ನಿಧಿಗಳು ಮತ್ತು ಸ್ವತ್ತುಗಳ ನಿರ್ವಹಣೆಗಾಗಿ ‘ನಿರ್ದಿಷ್ಟ ಪ್ರಾಧಿಕಾರ’ವೊಂದನ್ನು ಸ್ಥಾಪಿಸಲು ಮಸೂದೆ ಉದ್ದೇಶಿಸಿದೆ. 2010ರ ಮೂಲಶಾಸನದಲ್ಲಿನ ಲೋಪಗಳನ್ನು ಸರಿಪಡಿಸುವುದು ಮಸೂದೆಯ ಉದ್ದೇಶವಾಗಿದೆ ಎಂದು ಸರ್ಕಾರ ಹೇಳಿದೆ. ವಿದೇಶಗಳಿಂದ ಪಡೆಯುವ ದೇಣಿಗೆಗಳ ಮೇಲ್ವಿಚಾರಣೆ ಹಾಗೂ ನಿರ್ವಹಣೆಗೆ ‘ಉದ್ದೇಶಿತ ಪ್ರಾಧಿಕಾರ’ದ ಮೂಲಕ ಸಮಗ್ರ ಚೌಕಟ್ಟು ರೂಪಿಸುವ ಅವಕಾಶವನ್ನು ಈ ಮಸೂದೆ ಒಳಗೊಂಡಿದೆ ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಹೇಳಿದ್ದಾರೆ. ಆದರೆ, ವಾಸ್ತವದಲ್ಲಿ ಇದು ಎನ್ಜಿಒಗಳನ್ನು ದುರ್ಬಲಗೊಳಿಸಲಿದೆ ಹಾಗೂ ಅವುಗಳನ್ನು ಸರ್ಕಾರದ ಕಠಿಣ ನಿಯಂತ್ರಣಕ್ಕೆ ಒಳಪಡಿಸಲಿದೆ. ಎನ್ಜಿಒಗಳ ಕುರಿತ ಸರ್ಕಾರದ ಅಸಮಾಧಾನ ರಹಸ್ಯವೇನೂ ಅಲ್ಲ. ಉದ್ದೇಶಿತ ತಿದ್ದುಪಡಿಯು ಅವುಗಳನ್ನು ಮತ್ತಷ್ಟು ತೊಂದರೆಗೊಳಪಡಿಸಲು ಹೊಸ ಸಾಧನವನ್ನು ಸರ್ಕಾರಕ್ಕೆ ಒದಗಿಸಲಿದೆ. ಈ ಹಿಂದೆಯೂ ಸರ್ಕಾರ ಅಳವಡಿಸಿಕೊಂಡಿದ್ದ ನೀತಿಗಳು ಎನ್ಜಿಒಗಳ ಕಾರ್ಯಾಚರಣೆಯನ್ನು ಕಠಿಣಗೊಳಿಸಿದ್ದವು ಹಾಗೂ ಕೆಲವು ಸರ್ಕಾರೇತರ ಸಂಸ್ಥೆಗಳು ಮುಚ್ಚಲು ಕಾರಣವಾಗಿದ್ದವು.</p>.<p>ಪರವಾನಗಿ ರದ್ದಾಗಿರುವ ಅಥವಾ ಅಮಾನತುಗೊಂಡಿರುವ ಎನ್ಜಿಒಗಳಿಗೆ ಸೇರಿದ, ವಿದೇಶಿ ದೇಣಿಗೆಯನ್ನು ಬಳಸಿ ಕೊಂಡು ನಿರ್ಮಿಸಿರುವ ಆಸ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಲು ಅವಕಾಶ ಕಲ್ಪಿಸುವ ವಿವಾದಾಸ್ಪದ ಪ್ರಸ್ತಾವ ಮಸೂದೆಯಲ್ಲಿದೆ. ಅಂಥ ಆಸ್ತಿಗಳನ್ನು ‘ಸಾರ್ವಜನಿಕ ಉದ್ದೇಶ’ಗಳಿಗಾಗಿ ಬಳಸುವ, ನಿರ್ವಹಿಸುವ, ವರ್ಗಾಯಿಸುವ ಅಥವಾ ವಿಲೇವಾರಿ ಮಾಡುವ ಅಧಿಕಾರ ಪ್ರಾಧಿಕಾರಕ್ಕೆ ದೊರೆಯಲಿದೆ. ಸರ್ಕಾರದ ಪೂರ್ವಾನುಮತಿ ಇಲ್ಲದೆ, ವಿದೇಶಿ ನಿಧಿಯಿಂದ ನಿರ್ಮಿಸಲಾದ ಸ್ವತ್ತುಗಳ ವರ್ಗಾವಣೆ ಅಥವಾ ವಿಲೇವಾರಿಗೂ ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧಗಳು ಸರ್ಕಾರೇತರ ಸಂಸ್ಥೆಗಳ ಸ್ವಾಯತ್ತ<br />ಕಾರ್ಯಾಚರಣೆಯ ಮೇಲೆ ದುಷ್ಪರಿ ಣಾಮ ಬೀರಲಿವೆ. ರಾಜ್ಯ ಸರ್ಕಾರಗಳು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗೆ (ಎಎಫ್ಸಿಆರ್ಎ) ಸಂಬಂಧಿಸಿದ ಯಾವುದೇ ತನಿಖೆಯನ್ನು ಆರಂಭಿಸುವ ಮುನ್ನ ಕೇಂದ್ರದ ಅನುಮತಿಯನ್ನು ಪಡೆಯಬೇಕು ಎನ್ನುವ ನಿಯಮವು ರಾಜ್ಯಗಳ ಅಧಿಕಾರವನ್ನು ಮಿತಗೊಳಿಸುವಂತಿದೆ ಹಾಗೂ ಒಕ್ಕೂಟ ತತ್ತ್ವಕ್ಕೆ ವಿರುದ್ಧವಾದುದಾಗಿದೆ.</p>.<p>ಪ್ರಸಕ್ತ ಮಸೂದೆಯು 2010ರ ಕಾಯ್ದೆಯನ್ನು ಕಠಿಣಗೊಳಿಸುತ್ತಲೇ ಹೋಗಿರುವ 2016, 2018 ಮತ್ತು 2020ರಲ್ಲಿ ತರಲಾದ ತಿದ್ದುಪಡಿಗಳ ಮುಂದುವರಿಕೆಯಾಗಿದೆ. ನಿರ್ದಿಷ್ಟ ಪ್ರಾಧಿಕಾರಕ್ಕೆ ನೀಡಲಾಗುವ ಅಧಿಕಾರವು ವಿವೇಚನೆಗೆ ಒಳಪಟ್ಟಿದ್ದು, ಅನಿಯಂತ್ರಿತ ಹಾಗೂ ವ್ಯಕ್ತಿನಿಷ್ಠತೆಗೆ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ. ಆಸ್ತಿ ಜಪ್ತಿ ಮಾಡುವ ಪರಮಾಧಿಕಾರವು, ಸಂಸ್ಥೆಯನ್ನು ಕೊನೆಗಾಣಿಸುವುದಕ್ಕೂ ಕಾರಣ ಆಗಬಹುದಾಗಿದೆ. ಸ್ವದೇಶಿ ನಿಧಿ ಹಾಗೂ ವಿದೇಶಿ ದೇಣಿಗೆ ಎರಡನ್ನೂ ಬಳಸಿಕೊಂಡು ಸ್ವತ್ತುಗಳನ್ನು ಸೃಜಿಸಿರುವ ಉದಾಹರಣೆಗಳೂ ಇದ್ದು, ತೊಡಗಿಸಿರುವ ಸಂಪನ್ಮೂಲವನ್ನು ಪ್ರತ್ಯೇಕಿಸಿ ನೋಡುವುದು ಸುಲಭವಲ್ಲ. ಈ ಮಸೂದೆಯು ಸರ್ಕಾರದ ಅನುಕೂಲಕ್ಕೆ ಪೂರಕವಾಗಿ ನಿಯಮಗಳನ್ನು ಪಾಲಿಸಲು ಒತ್ತಡವನ್ನು ಸೃಷ್ಟಿಸುವಂತಿದೆ. ಸದುದ್ದೇಶದ ನಿಯಮಗಳು ಹಾಗೂ ನಿಬಂಧನೆಗಳು ಸಹ ಸರ್ಕಾರದ ನೀತಿಗಳನ್ನು ಪ್ರಶ್ನಿಸುವ ಅಥವಾ ಸರ್ಕಾರಕ್ಕೆ ಇಷ್ಟವಿಲ್ಲದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಗಳನ್ನು ಗುರಿಯಾಗಿಸಲು ಅನುಕೂಲ ಆಗುವಂತೆ ತಪ್ಪಾಗಿ ಅರ್ಥೈಸಬಹುದು, ದುರುಪಯೋಗಕ್ಕೆ ಕಾರಣವಾಗಬಹುದು. ಮಾನವ ಹಕ್ಕುಗಳು ಹಾಗೂ ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ಕಾರ್ಯ ನಿರ್ವಹಿಸುವ ಎನ್ಜಿಒಗಳು ಸದಾ ಹೆಚ್ಚಿನ ಸಂಕಷ್ಟಕ್ಕೆ ಗುರಿಯಾಗುತ್ತಿರುತ್ತವೆ. ಸುಮಾರು ಒಂದು ದಶಕದ ಅವಧಿಯಲ್ಲಿ 20,711 ಸಂಸ್ಥೆಗಳ ವಿದೇಶಿ ದೇಣಿಗೆಗಳ ಪರವಾನಗಿಗಳನ್ನು ರದ್ದುಪಡಿಸಲಾಗಿದೆ. ಪ್ರಸ್ತುತ ಎಫ್ಸಿಆರ್ಎ ಪ್ರಮಾಣಪತ್ರವನ್ನು ಹೊಂದಿರುವ 16,000 ಸಂಸ್ಥೆಗಳಷ್ಟೇ ಉಳಿದುಕೊಂಡಿವೆ. ಸರ್ಕಾರದ ಮತ್ತೊಂದು ರಾಜಕೀಯ ಆಯುಧವಾಗಿ ಎಫ್ಸಿಆರ್ಎ ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿಯೇ, ವಿದೇಶಿ ದೇಣಿಗೆ ಮಸೂದೆಯನ್ನು ‘ಅಪಾಯಕಾರಿ’ ಎಂದು ಕರೆದಿರುವ ವಿರೋಧ ಪಕ್ಷಗಳ ಟೀಕೆ ಹಾಗೂ ನಾಗರಿಕ ಸಂಘಟನೆಗಳ ವ್ಯಾಪಕ ವಿರೋಧವನ್ನು ಗಮನಿಸಬೇಕಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಲೋಕಸಭೆಯಲ್ಲಿ ಕಳೆದ ವಾರ ಮಂಡನೆ ಆಗಿರುವ ‘ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ 2026’ ಸರ್ಕಾರೇತರ ಸಂಸ್ಥೆಗಳ (ಎನ್ಜಿಒ) ಚಟುವಟಿಕೆ ಮೇಲೆ ನಿಯಂತ್ರಣ ಸಾಧಿಸಲು ಹಾಗೂ ಅವುಗಳ ಮೇಲಿನ ಹಿಡಿತವನ್ನು ಇನ್ನಷ್ಟು ಬಲಗೊಳಿಸಲು ಕೇಂದ್ರ ಸರ್ಕಾರಕ್ಕೆ ಅವಕಾಶ ಕಲ್ಪಿಸಲಿದೆ. ಕಾನೂನು ಪ್ರಕಾರ ನೋಂದಣಿ ರದ್ದುಗೊಂಡಿರುವ ಇಲ್ಲವೇ ನಿರ್ಬಂಧಕ್ಕೊಳಗಾಗಿರುವ ಎನ್ಜಿಒಗಳ ವಿದೇಶಿ ನಿಧಿಗಳು ಮತ್ತು ಸ್ವತ್ತುಗಳ ನಿರ್ವಹಣೆಗಾಗಿ ‘ನಿರ್ದಿಷ್ಟ ಪ್ರಾಧಿಕಾರ’ವೊಂದನ್ನು ಸ್ಥಾಪಿಸಲು ಮಸೂದೆ ಉದ್ದೇಶಿಸಿದೆ. 2010ರ ಮೂಲಶಾಸನದಲ್ಲಿನ ಲೋಪಗಳನ್ನು ಸರಿಪಡಿಸುವುದು ಮಸೂದೆಯ ಉದ್ದೇಶವಾಗಿದೆ ಎಂದು ಸರ್ಕಾರ ಹೇಳಿದೆ. ವಿದೇಶಗಳಿಂದ ಪಡೆಯುವ ದೇಣಿಗೆಗಳ ಮೇಲ್ವಿಚಾರಣೆ ಹಾಗೂ ನಿರ್ವಹಣೆಗೆ ‘ಉದ್ದೇಶಿತ ಪ್ರಾಧಿಕಾರ’ದ ಮೂಲಕ ಸಮಗ್ರ ಚೌಕಟ್ಟು ರೂಪಿಸುವ ಅವಕಾಶವನ್ನು ಈ ಮಸೂದೆ ಒಳಗೊಂಡಿದೆ ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಹೇಳಿದ್ದಾರೆ. ಆದರೆ, ವಾಸ್ತವದಲ್ಲಿ ಇದು ಎನ್ಜಿಒಗಳನ್ನು ದುರ್ಬಲಗೊಳಿಸಲಿದೆ ಹಾಗೂ ಅವುಗಳನ್ನು ಸರ್ಕಾರದ ಕಠಿಣ ನಿಯಂತ್ರಣಕ್ಕೆ ಒಳಪಡಿಸಲಿದೆ. ಎನ್ಜಿಒಗಳ ಕುರಿತ ಸರ್ಕಾರದ ಅಸಮಾಧಾನ ರಹಸ್ಯವೇನೂ ಅಲ್ಲ. ಉದ್ದೇಶಿತ ತಿದ್ದುಪಡಿಯು ಅವುಗಳನ್ನು ಮತ್ತಷ್ಟು ತೊಂದರೆಗೊಳಪಡಿಸಲು ಹೊಸ ಸಾಧನವನ್ನು ಸರ್ಕಾರಕ್ಕೆ ಒದಗಿಸಲಿದೆ. ಈ ಹಿಂದೆಯೂ ಸರ್ಕಾರ ಅಳವಡಿಸಿಕೊಂಡಿದ್ದ ನೀತಿಗಳು ಎನ್ಜಿಒಗಳ ಕಾರ್ಯಾಚರಣೆಯನ್ನು ಕಠಿಣಗೊಳಿಸಿದ್ದವು ಹಾಗೂ ಕೆಲವು ಸರ್ಕಾರೇತರ ಸಂಸ್ಥೆಗಳು ಮುಚ್ಚಲು ಕಾರಣವಾಗಿದ್ದವು.</p>.<p>ಪರವಾನಗಿ ರದ್ದಾಗಿರುವ ಅಥವಾ ಅಮಾನತುಗೊಂಡಿರುವ ಎನ್ಜಿಒಗಳಿಗೆ ಸೇರಿದ, ವಿದೇಶಿ ದೇಣಿಗೆಯನ್ನು ಬಳಸಿ ಕೊಂಡು ನಿರ್ಮಿಸಿರುವ ಆಸ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಲು ಅವಕಾಶ ಕಲ್ಪಿಸುವ ವಿವಾದಾಸ್ಪದ ಪ್ರಸ್ತಾವ ಮಸೂದೆಯಲ್ಲಿದೆ. ಅಂಥ ಆಸ್ತಿಗಳನ್ನು ‘ಸಾರ್ವಜನಿಕ ಉದ್ದೇಶ’ಗಳಿಗಾಗಿ ಬಳಸುವ, ನಿರ್ವಹಿಸುವ, ವರ್ಗಾಯಿಸುವ ಅಥವಾ ವಿಲೇವಾರಿ ಮಾಡುವ ಅಧಿಕಾರ ಪ್ರಾಧಿಕಾರಕ್ಕೆ ದೊರೆಯಲಿದೆ. ಸರ್ಕಾರದ ಪೂರ್ವಾನುಮತಿ ಇಲ್ಲದೆ, ವಿದೇಶಿ ನಿಧಿಯಿಂದ ನಿರ್ಮಿಸಲಾದ ಸ್ವತ್ತುಗಳ ವರ್ಗಾವಣೆ ಅಥವಾ ವಿಲೇವಾರಿಗೂ ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧಗಳು ಸರ್ಕಾರೇತರ ಸಂಸ್ಥೆಗಳ ಸ್ವಾಯತ್ತ<br />ಕಾರ್ಯಾಚರಣೆಯ ಮೇಲೆ ದುಷ್ಪರಿ ಣಾಮ ಬೀರಲಿವೆ. ರಾಜ್ಯ ಸರ್ಕಾರಗಳು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗೆ (ಎಎಫ್ಸಿಆರ್ಎ) ಸಂಬಂಧಿಸಿದ ಯಾವುದೇ ತನಿಖೆಯನ್ನು ಆರಂಭಿಸುವ ಮುನ್ನ ಕೇಂದ್ರದ ಅನುಮತಿಯನ್ನು ಪಡೆಯಬೇಕು ಎನ್ನುವ ನಿಯಮವು ರಾಜ್ಯಗಳ ಅಧಿಕಾರವನ್ನು ಮಿತಗೊಳಿಸುವಂತಿದೆ ಹಾಗೂ ಒಕ್ಕೂಟ ತತ್ತ್ವಕ್ಕೆ ವಿರುದ್ಧವಾದುದಾಗಿದೆ.</p>.<p>ಪ್ರಸಕ್ತ ಮಸೂದೆಯು 2010ರ ಕಾಯ್ದೆಯನ್ನು ಕಠಿಣಗೊಳಿಸುತ್ತಲೇ ಹೋಗಿರುವ 2016, 2018 ಮತ್ತು 2020ರಲ್ಲಿ ತರಲಾದ ತಿದ್ದುಪಡಿಗಳ ಮುಂದುವರಿಕೆಯಾಗಿದೆ. ನಿರ್ದಿಷ್ಟ ಪ್ರಾಧಿಕಾರಕ್ಕೆ ನೀಡಲಾಗುವ ಅಧಿಕಾರವು ವಿವೇಚನೆಗೆ ಒಳಪಟ್ಟಿದ್ದು, ಅನಿಯಂತ್ರಿತ ಹಾಗೂ ವ್ಯಕ್ತಿನಿಷ್ಠತೆಗೆ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ. ಆಸ್ತಿ ಜಪ್ತಿ ಮಾಡುವ ಪರಮಾಧಿಕಾರವು, ಸಂಸ್ಥೆಯನ್ನು ಕೊನೆಗಾಣಿಸುವುದಕ್ಕೂ ಕಾರಣ ಆಗಬಹುದಾಗಿದೆ. ಸ್ವದೇಶಿ ನಿಧಿ ಹಾಗೂ ವಿದೇಶಿ ದೇಣಿಗೆ ಎರಡನ್ನೂ ಬಳಸಿಕೊಂಡು ಸ್ವತ್ತುಗಳನ್ನು ಸೃಜಿಸಿರುವ ಉದಾಹರಣೆಗಳೂ ಇದ್ದು, ತೊಡಗಿಸಿರುವ ಸಂಪನ್ಮೂಲವನ್ನು ಪ್ರತ್ಯೇಕಿಸಿ ನೋಡುವುದು ಸುಲಭವಲ್ಲ. ಈ ಮಸೂದೆಯು ಸರ್ಕಾರದ ಅನುಕೂಲಕ್ಕೆ ಪೂರಕವಾಗಿ ನಿಯಮಗಳನ್ನು ಪಾಲಿಸಲು ಒತ್ತಡವನ್ನು ಸೃಷ್ಟಿಸುವಂತಿದೆ. ಸದುದ್ದೇಶದ ನಿಯಮಗಳು ಹಾಗೂ ನಿಬಂಧನೆಗಳು ಸಹ ಸರ್ಕಾರದ ನೀತಿಗಳನ್ನು ಪ್ರಶ್ನಿಸುವ ಅಥವಾ ಸರ್ಕಾರಕ್ಕೆ ಇಷ್ಟವಿಲ್ಲದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಗಳನ್ನು ಗುರಿಯಾಗಿಸಲು ಅನುಕೂಲ ಆಗುವಂತೆ ತಪ್ಪಾಗಿ ಅರ್ಥೈಸಬಹುದು, ದುರುಪಯೋಗಕ್ಕೆ ಕಾರಣವಾಗಬಹುದು. ಮಾನವ ಹಕ್ಕುಗಳು ಹಾಗೂ ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ಕಾರ್ಯ ನಿರ್ವಹಿಸುವ ಎನ್ಜಿಒಗಳು ಸದಾ ಹೆಚ್ಚಿನ ಸಂಕಷ್ಟಕ್ಕೆ ಗುರಿಯಾಗುತ್ತಿರುತ್ತವೆ. ಸುಮಾರು ಒಂದು ದಶಕದ ಅವಧಿಯಲ್ಲಿ 20,711 ಸಂಸ್ಥೆಗಳ ವಿದೇಶಿ ದೇಣಿಗೆಗಳ ಪರವಾನಗಿಗಳನ್ನು ರದ್ದುಪಡಿಸಲಾಗಿದೆ. ಪ್ರಸ್ತುತ ಎಫ್ಸಿಆರ್ಎ ಪ್ರಮಾಣಪತ್ರವನ್ನು ಹೊಂದಿರುವ 16,000 ಸಂಸ್ಥೆಗಳಷ್ಟೇ ಉಳಿದುಕೊಂಡಿವೆ. ಸರ್ಕಾರದ ಮತ್ತೊಂದು ರಾಜಕೀಯ ಆಯುಧವಾಗಿ ಎಫ್ಸಿಆರ್ಎ ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿಯೇ, ವಿದೇಶಿ ದೇಣಿಗೆ ಮಸೂದೆಯನ್ನು ‘ಅಪಾಯಕಾರಿ’ ಎಂದು ಕರೆದಿರುವ ವಿರೋಧ ಪಕ್ಷಗಳ ಟೀಕೆ ಹಾಗೂ ನಾಗರಿಕ ಸಂಘಟನೆಗಳ ವ್ಯಾಪಕ ವಿರೋಧವನ್ನು ಗಮನಿಸಬೇಕಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>