<blockquote><em>ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ದೇಶದ ಸಾಮಾಜಿಕ ಮತ್ತು ರಾಜಕೀಯ ಪರಿಸರವನ್ನು ತೀವ್ರವಾಗಿ ಗಾಸಿಗೊಳಿಸುತ್ತಿದ್ದಾರೆ; ಸಭ್ಯ ರಾಜಕಾರಣದ ಎಲ್ಲೆಗಳನ್ನು ದಾಟಿದ್ದಾರೆ.</em></blockquote>.<p>ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣ ಮಾಡುವುದರಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಇತರ ಎಲ್ಲ ಹಿಂದುತ್ವ ರಾಜಕಾರಣಿಗಳಿಗಿಂತ ಮುಂದಿದ್ದಾರೆ. 2021ರಲ್ಲಿ ಮುಖ್ಯಮಂತ್ರಿ ಆದಾಗಿನಿಂದ ಅವರು ಮುಸ್ಲಿಮರ ವಿರುದ್ಧ ದ್ವೇಷ ಕಾರಿದ್ದಾರೆ, ತಾರತಮ್ಯಕ್ಕೆ ದಾರಿ ಮಾಡಿಕೊಡುವಂತಹ ನೀತಿಗಳನ್ನು ಅನುಸರಿಸಿದ್ದಾರೆ; ಮುಸ್ಲಿಮರನ್ನು ಕಿರುಕುಳಕ್ಕೆ ಗುರಿಪಡಿಸುವ, ಅವರನ್ನು ಹತ್ತಿಕ್ಕುವ ಕ್ರಮಗಳನ್ನು ಎಗ್ಗಿಲ್ಲದೆ ಕೈಗೊಂಡಿದ್ದಾರೆ. ಅವರು ಈಚೆಗೆ ಎಸಗಿದ ಕೃತ್ಯವೊಂದು ತೀರಾ ಆಕ್ಷೇಪಾರ್ಹವಾಗಿದೆ. ಶರ್ಮಾ ಅವರ ಇತ್ತೀಚಿನ ಕೆಲವು ಮಾತುಗಳನ್ನು ಉಲ್ಲೇಖಿಸಿ ಕೆಲವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಮುಸ್ಲಿಮರು ಧರಿಸುವಂತಹ ಟೋಪಿ ಧರಿಸಿದ್ದ ಕೆಲವರನ್ನು ಗುರಿಯಾಗಿಸಿಕೊಂಡು ಶರ್ಮಾ ಅವರು ಗುಂಡು ಹಾರಿಸುತ್ತಿರುವ ಚಿತ್ರವೊಂದು ಇರುವ ವಿಡಿಯೊ ಬಗ್ಗೆ ಅರ್ಜಿದಾರರು ಕೋರ್ಟ್ನ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ. ಈ ವಿಡಿಯೊವನ್ನು ನಂತರ ಅಳಿಸಿಹಾಕಲಾಗಿದೆ. ಆದರೆ, ಇದು ಅಸ್ಸಾಂನಲ್ಲಿ ಹಾಗೂ ದೇಶದ ಇತರೆಡೆಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ‘ಮಿಯಾಗಳನ್ನು ಗುರಿಯಾಗಿಸಿಕೊಳ್ಳಿ’ ಎಂದು ಶರ್ಮಾ ಅವರು ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಹೇಳಿದ್ದರು. ಬಂಗಾಳಿ ಭಾಷೆ ಮಾತನಾಡುವ ಮುಸ್ಲಿಮರನ್ನು ‘ಮಿಯಾಗಳು’ ಎಂದು ಕರೆಯಲಾಗುತ್ತಿದೆ. ಮುಸ್ಲಿಮರನ್ನು ಗುರಿಯಾಗಿಸಿಕೊಂಡು ತಾರತಮ್ಯ ಎಸಗುವವರಿಗೆ, ಅವರನ್ನು ಕಿರುಕುಳಕ್ಕೆ ಗುರಿಪಡಿಸುವವರಿಗೆ ಸರ್ಕಾರ ರಕ್ಷಣೆ ಒದಗಿಸುತ್ತದೆ ಎಂದು ಕೂಡ ಶರ್ಮಾ ಭರವಸೆ ನೀಡಿದ್ದಾರೆ.</p><p>ಅಸ್ಸಾಂನ ವಿಧಾನಸಭೆಗೆ ಚುನಾವಣೆ ಹತ್ತಿರವಾಗುತ್ತಿದೆ. ಅಲ್ಲಿ ಸತತ ಮೂರನೆಯ ಬಾರಿಯೂ ಜಯ ಸಾಧಿಸಲು ಬಿಜೆಪಿ ಯತ್ನಿಸುತ್ತಿದೆ. ಶರ್ಮಾ ಅವರು ಮುಸ್ಲಿಮರನ್ನು ಗುರಿಯಾಗಿಸಿ ಕೊಂಡು ಎಸಗುತ್ತಿರುವ ಕೃತ್ಯಗಳ ಹಿಂದೆ ಚುನಾವಣಾ ಲೆಕ್ಕಾಚಾರದ ಆಯಾಮವೂ ಇದ್ದಿರಬಹುದು. ಆದರೆ ಅವನ್ನೆಲ್ಲ ಚುನಾವಣಾ ಪ್ರಚಾರ ತಂತ್ರದ ಭಾಗ ಮಾತ್ರ ಎಂದಷ್ಟೇ ಪರಿಗಣಿಸಲು ಆಗದು. ಶರ್ಮಾ ಅವರ ಆರ್ಭಟದ ಮಾತುಗಳು ಅತ್ಯಂತ ವಿಭಜನಕಾರಿ ಯಾಗಿವೆ, ಅವು ದ್ವೇಷ ಭಾಷಣದ ವ್ಯಾಪ್ತಿಗೆ ಬರುವಂಥವು. ತಮ್ಮ ಮಾತುಗಳು ಬಾಂಗ್ಲಾದೇಶದಿಂದ ಬಂದಿರುವ ಅಕ್ರಮ ವಲಸಿಗರನ್ನು ಮಾತ್ರ ಗುರಿಯಾಗಿಸಿಕೊಂಡಿವೆ ಎಂದು ಶರ್ಮಾ ಹೇಳಿದ್ದಾರೆ. ಆದರೆ ವಾಸ್ತವದಲ್ಲಿ ಅವರ ಮಾತುಗಳಲ್ಲಿ ಆ ಬಗೆಯ ವ್ಯತ್ಯಾಸ ಕಾಣುತ್ತಿಲ್ಲ. ಅವರ ಮಾತುಗಳು ಮುಸ್ಲಿಮರೆಲ್ಲರನ್ನೂ ಗುರಿಯಾಗಿಸಿಕೊಂಡಂತೆ ಇವೆ. ಪ್ರಜೆಗಳನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಲು ಮುಂದಾಗುವ, ಕೋಮು ಪ್ರಚೋದನಕಾರಿ ಸಂದೇಶ ರವಾನಿಸಲು ನಿರ್ದಿಷ್ಟ ಸಾಂಕೇತಿಕ ಪದಗಳನ್ನು ಬಳಕೆ ಮಾಡುವ ಮುಖ್ಯಮಂತ್ರಿ, ತಾನು ಸ್ವೀಕರಿಸಿದ ಪ್ರತಿಜ್ಞಾವಿಧಿಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ ಎನ್ನಬೇಕಾಗುತ್ತದೆ. ಅವರು ಸಭ್ಯ ರಾಜಕಾರಣದ ಎಲ್ಲೆಗಳನ್ನೆಲ್ಲ ಮೀರಿದ್ದಾರೆ.</p><p>ಬಾಂಗ್ಲಾದೇಶದ ಅಕ್ರಮ ವಲಸಿಗರ ವಿಷಯವನ್ನು ಬಿಜೆಪಿ ನಾಯಕರು ಹಾಗೂ ಶರ್ಮಾ ಅವರು ರಾಜಕೀಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಅಸ್ಸಾಂಗೆ ಈಚೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಅಕ್ರಮ ವಲಸಿಗರ ಬಗ್ಗೆ ಮಾತನಾಡಿದ್ದಾರೆ. ಕೇಂದ್ರದಲ್ಲಿ ಹಾಗೂ ಅಸ್ಸಾಂನಲ್ಲಿ ಬಿಜೆಪಿಯು 10 ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಅಧಿಕಾರದಲ್ಲಿದೆ. ಈ ಸಮಸ್ಯೆಯನ್ನು ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಬಗೆಹರಿಸುವ ಅಧಿಕಾರ, ಹೊಣೆ ಆ ಪಕ್ಷದ ಬಳಿಯೇ ಇದೆ. 1985ರ ಅಸ್ಸಾಂ ಒಪ್ಪಂದ ಹಾಗೂ ನಂತರದ ಸುಪ್ರೀಂ ಕೋರ್ಟ್ ತೀರ್ಪುಗಳು ಆಡಳಿತಾರೂಢರಿಗೆ ಮಾರ್ಗದರ್ಶಿಯಂತೆ ಇವೆ. ಆದರೆ ಎಲ್ಲ ಮುಸ್ಲಿಮರನ್ನು ಕೆಟ್ಟವರೆಂದು ಚಿತ್ರಿಸಲು ಯತ್ನಿಸುವುದು ಸರಿಯಾದ ಕ್ರಮವಲ್ಲ. ಶರ್ಮಾ ಅವರು ಕಾಂಗ್ರೆಸ್ಸಿನಿಂದ ಬಿಜೆಪಿ ಸೇರಿದವರು. ತಾವು ಇತರರಿಗಿಂತ ಹೆಚ್ಚಿನ ಮಟ್ಟದ ಹಿಂದುತ್ವ ಮೂಲಭೂತವಾದಿ ಎಂಬುದನ್ನು ಸಾಬೀತು ಮಾಡಲು ಅವರು ಯತ್ನಿಸುತ್ತಿರಬಹುದು. ಆ ಕಸರತ್ತಿನ ಭರಾಟೆಯಲ್ಲಿ ಅವರು ದೇಶದ ಸಾಮಾಜಿಕ ಪರಿಸರಕ್ಕೆ ಮತ್ತು ರಾಜಕೀಯ ಭಿತ್ತಿಗೆ ತೀವ್ರವಾದ ಅಪಾಯ ಉಂಟು ಮಾಡುತ್ತಿದ್ದಾರೆ. ಅವರು ಹದ್ದು ಮೀರಿ ವರ್ತಿಸುತ್ತಿದ್ದಾರೆ, ತಪ್ಪು ಮಾಡಿಯೂ ತಪ್ಪಿಸಿಕೊಳ್ಳಲು ಅವರಿಗೆ ಅವಕಾಶ ಕೊಡಬಾರದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote><em>ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ದೇಶದ ಸಾಮಾಜಿಕ ಮತ್ತು ರಾಜಕೀಯ ಪರಿಸರವನ್ನು ತೀವ್ರವಾಗಿ ಗಾಸಿಗೊಳಿಸುತ್ತಿದ್ದಾರೆ; ಸಭ್ಯ ರಾಜಕಾರಣದ ಎಲ್ಲೆಗಳನ್ನು ದಾಟಿದ್ದಾರೆ.</em></blockquote>.<p>ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣ ಮಾಡುವುದರಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಇತರ ಎಲ್ಲ ಹಿಂದುತ್ವ ರಾಜಕಾರಣಿಗಳಿಗಿಂತ ಮುಂದಿದ್ದಾರೆ. 2021ರಲ್ಲಿ ಮುಖ್ಯಮಂತ್ರಿ ಆದಾಗಿನಿಂದ ಅವರು ಮುಸ್ಲಿಮರ ವಿರುದ್ಧ ದ್ವೇಷ ಕಾರಿದ್ದಾರೆ, ತಾರತಮ್ಯಕ್ಕೆ ದಾರಿ ಮಾಡಿಕೊಡುವಂತಹ ನೀತಿಗಳನ್ನು ಅನುಸರಿಸಿದ್ದಾರೆ; ಮುಸ್ಲಿಮರನ್ನು ಕಿರುಕುಳಕ್ಕೆ ಗುರಿಪಡಿಸುವ, ಅವರನ್ನು ಹತ್ತಿಕ್ಕುವ ಕ್ರಮಗಳನ್ನು ಎಗ್ಗಿಲ್ಲದೆ ಕೈಗೊಂಡಿದ್ದಾರೆ. ಅವರು ಈಚೆಗೆ ಎಸಗಿದ ಕೃತ್ಯವೊಂದು ತೀರಾ ಆಕ್ಷೇಪಾರ್ಹವಾಗಿದೆ. ಶರ್ಮಾ ಅವರ ಇತ್ತೀಚಿನ ಕೆಲವು ಮಾತುಗಳನ್ನು ಉಲ್ಲೇಖಿಸಿ ಕೆಲವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಮುಸ್ಲಿಮರು ಧರಿಸುವಂತಹ ಟೋಪಿ ಧರಿಸಿದ್ದ ಕೆಲವರನ್ನು ಗುರಿಯಾಗಿಸಿಕೊಂಡು ಶರ್ಮಾ ಅವರು ಗುಂಡು ಹಾರಿಸುತ್ತಿರುವ ಚಿತ್ರವೊಂದು ಇರುವ ವಿಡಿಯೊ ಬಗ್ಗೆ ಅರ್ಜಿದಾರರು ಕೋರ್ಟ್ನ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ. ಈ ವಿಡಿಯೊವನ್ನು ನಂತರ ಅಳಿಸಿಹಾಕಲಾಗಿದೆ. ಆದರೆ, ಇದು ಅಸ್ಸಾಂನಲ್ಲಿ ಹಾಗೂ ದೇಶದ ಇತರೆಡೆಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ‘ಮಿಯಾಗಳನ್ನು ಗುರಿಯಾಗಿಸಿಕೊಳ್ಳಿ’ ಎಂದು ಶರ್ಮಾ ಅವರು ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಹೇಳಿದ್ದರು. ಬಂಗಾಳಿ ಭಾಷೆ ಮಾತನಾಡುವ ಮುಸ್ಲಿಮರನ್ನು ‘ಮಿಯಾಗಳು’ ಎಂದು ಕರೆಯಲಾಗುತ್ತಿದೆ. ಮುಸ್ಲಿಮರನ್ನು ಗುರಿಯಾಗಿಸಿಕೊಂಡು ತಾರತಮ್ಯ ಎಸಗುವವರಿಗೆ, ಅವರನ್ನು ಕಿರುಕುಳಕ್ಕೆ ಗುರಿಪಡಿಸುವವರಿಗೆ ಸರ್ಕಾರ ರಕ್ಷಣೆ ಒದಗಿಸುತ್ತದೆ ಎಂದು ಕೂಡ ಶರ್ಮಾ ಭರವಸೆ ನೀಡಿದ್ದಾರೆ.</p><p>ಅಸ್ಸಾಂನ ವಿಧಾನಸಭೆಗೆ ಚುನಾವಣೆ ಹತ್ತಿರವಾಗುತ್ತಿದೆ. ಅಲ್ಲಿ ಸತತ ಮೂರನೆಯ ಬಾರಿಯೂ ಜಯ ಸಾಧಿಸಲು ಬಿಜೆಪಿ ಯತ್ನಿಸುತ್ತಿದೆ. ಶರ್ಮಾ ಅವರು ಮುಸ್ಲಿಮರನ್ನು ಗುರಿಯಾಗಿಸಿ ಕೊಂಡು ಎಸಗುತ್ತಿರುವ ಕೃತ್ಯಗಳ ಹಿಂದೆ ಚುನಾವಣಾ ಲೆಕ್ಕಾಚಾರದ ಆಯಾಮವೂ ಇದ್ದಿರಬಹುದು. ಆದರೆ ಅವನ್ನೆಲ್ಲ ಚುನಾವಣಾ ಪ್ರಚಾರ ತಂತ್ರದ ಭಾಗ ಮಾತ್ರ ಎಂದಷ್ಟೇ ಪರಿಗಣಿಸಲು ಆಗದು. ಶರ್ಮಾ ಅವರ ಆರ್ಭಟದ ಮಾತುಗಳು ಅತ್ಯಂತ ವಿಭಜನಕಾರಿ ಯಾಗಿವೆ, ಅವು ದ್ವೇಷ ಭಾಷಣದ ವ್ಯಾಪ್ತಿಗೆ ಬರುವಂಥವು. ತಮ್ಮ ಮಾತುಗಳು ಬಾಂಗ್ಲಾದೇಶದಿಂದ ಬಂದಿರುವ ಅಕ್ರಮ ವಲಸಿಗರನ್ನು ಮಾತ್ರ ಗುರಿಯಾಗಿಸಿಕೊಂಡಿವೆ ಎಂದು ಶರ್ಮಾ ಹೇಳಿದ್ದಾರೆ. ಆದರೆ ವಾಸ್ತವದಲ್ಲಿ ಅವರ ಮಾತುಗಳಲ್ಲಿ ಆ ಬಗೆಯ ವ್ಯತ್ಯಾಸ ಕಾಣುತ್ತಿಲ್ಲ. ಅವರ ಮಾತುಗಳು ಮುಸ್ಲಿಮರೆಲ್ಲರನ್ನೂ ಗುರಿಯಾಗಿಸಿಕೊಂಡಂತೆ ಇವೆ. ಪ್ರಜೆಗಳನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಲು ಮುಂದಾಗುವ, ಕೋಮು ಪ್ರಚೋದನಕಾರಿ ಸಂದೇಶ ರವಾನಿಸಲು ನಿರ್ದಿಷ್ಟ ಸಾಂಕೇತಿಕ ಪದಗಳನ್ನು ಬಳಕೆ ಮಾಡುವ ಮುಖ್ಯಮಂತ್ರಿ, ತಾನು ಸ್ವೀಕರಿಸಿದ ಪ್ರತಿಜ್ಞಾವಿಧಿಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ ಎನ್ನಬೇಕಾಗುತ್ತದೆ. ಅವರು ಸಭ್ಯ ರಾಜಕಾರಣದ ಎಲ್ಲೆಗಳನ್ನೆಲ್ಲ ಮೀರಿದ್ದಾರೆ.</p><p>ಬಾಂಗ್ಲಾದೇಶದ ಅಕ್ರಮ ವಲಸಿಗರ ವಿಷಯವನ್ನು ಬಿಜೆಪಿ ನಾಯಕರು ಹಾಗೂ ಶರ್ಮಾ ಅವರು ರಾಜಕೀಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಅಸ್ಸಾಂಗೆ ಈಚೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಅಕ್ರಮ ವಲಸಿಗರ ಬಗ್ಗೆ ಮಾತನಾಡಿದ್ದಾರೆ. ಕೇಂದ್ರದಲ್ಲಿ ಹಾಗೂ ಅಸ್ಸಾಂನಲ್ಲಿ ಬಿಜೆಪಿಯು 10 ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಅಧಿಕಾರದಲ್ಲಿದೆ. ಈ ಸಮಸ್ಯೆಯನ್ನು ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಬಗೆಹರಿಸುವ ಅಧಿಕಾರ, ಹೊಣೆ ಆ ಪಕ್ಷದ ಬಳಿಯೇ ಇದೆ. 1985ರ ಅಸ್ಸಾಂ ಒಪ್ಪಂದ ಹಾಗೂ ನಂತರದ ಸುಪ್ರೀಂ ಕೋರ್ಟ್ ತೀರ್ಪುಗಳು ಆಡಳಿತಾರೂಢರಿಗೆ ಮಾರ್ಗದರ್ಶಿಯಂತೆ ಇವೆ. ಆದರೆ ಎಲ್ಲ ಮುಸ್ಲಿಮರನ್ನು ಕೆಟ್ಟವರೆಂದು ಚಿತ್ರಿಸಲು ಯತ್ನಿಸುವುದು ಸರಿಯಾದ ಕ್ರಮವಲ್ಲ. ಶರ್ಮಾ ಅವರು ಕಾಂಗ್ರೆಸ್ಸಿನಿಂದ ಬಿಜೆಪಿ ಸೇರಿದವರು. ತಾವು ಇತರರಿಗಿಂತ ಹೆಚ್ಚಿನ ಮಟ್ಟದ ಹಿಂದುತ್ವ ಮೂಲಭೂತವಾದಿ ಎಂಬುದನ್ನು ಸಾಬೀತು ಮಾಡಲು ಅವರು ಯತ್ನಿಸುತ್ತಿರಬಹುದು. ಆ ಕಸರತ್ತಿನ ಭರಾಟೆಯಲ್ಲಿ ಅವರು ದೇಶದ ಸಾಮಾಜಿಕ ಪರಿಸರಕ್ಕೆ ಮತ್ತು ರಾಜಕೀಯ ಭಿತ್ತಿಗೆ ತೀವ್ರವಾದ ಅಪಾಯ ಉಂಟು ಮಾಡುತ್ತಿದ್ದಾರೆ. ಅವರು ಹದ್ದು ಮೀರಿ ವರ್ತಿಸುತ್ತಿದ್ದಾರೆ, ತಪ್ಪು ಮಾಡಿಯೂ ತಪ್ಪಿಸಿಕೊಳ್ಳಲು ಅವರಿಗೆ ಅವಕಾಶ ಕೊಡಬಾರದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>