<p>ಸರ್ಕಾರಿ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳ ಬಲವರ್ಧನೆಗಾಗಿ ಎಂಟು ‘ಗ್ಯಾರಂಟಿ’ಗಳನ್ನು ಘೋಷಿಸಿರುವ ಕರ್ನಾಟಕ ಸರ್ಕಾರದ ನಡೆ, ಶಿಕ್ಷಣ ಕ್ಷೇತ್ರದ ಸಮಗ್ರ ಸುಧಾರಣೆಗೆ ಸಂಬಂಧಿಸಿದಂತೆ ಸ್ವಾಗತಾರ್ಹ. ಆಮೂಲಾಗ್ರ ಸುಧಾರಣೆಯ ಉದ್ದೇಶ ಹೊಂದಿರುವ ಈ ಮಹತ್ವಾಕಾಂಕ್ಷೆಯ ನಿರ್ಧಾರದ ಅನುಷ್ಠಾನಕ್ಕೆ ಕಾಲಮಿತಿಯನ್ನು ನಿಗದಿಪಡಿಸಿರುವುದು ಸರ್ಕಾರದ ಪ್ರಾಮಾಣಿಕ ಉದ್ದೇಶ ಮತ್ತು ಉತ್ತರದಾಯಿತ್ವದ ಸಂಕೇತದಂತಿದೆ. ಈ ಗ್ಯಾರಂಟಿಗಳು ಬಹುಕಾಲದಿಂದ ಬಾಕಿಯುಳಿದಿದ್ದ ಸಾಂಸ್ಥಿಕ ಕೊರತೆಗಳನ್ನು ನೀಗಿಸುವ ದೃಷ್ಟಿಯಿಂದ ಮಹತ್ವ ಪಡೆದಿವೆ. ಐದನೇ ತರಗತಿಯವರೆಗೆ ತರಗತಿಗೊಬ್ಬರು ಶಿಕ್ಷಕರು ಹಾಗೂ ನಂತರದ ಹಂತದಲ್ಲಿ ವಿಷಯವಾರು ಶಿಕ್ಷಕರನ್ನು ಲಭ್ಯವಾಗಿಸುವುದು ಸೇರಿದಂತೆ, ಶಿಕ್ಷಕರ ಕೊರತೆ ನೀಗಿಸುವ ಮೊದಲನೇ ಗ್ಯಾರಂಟಿಯು ಕಲಿಕೆಯಲ್ಲಿನ ಅತ್ಯಂತ ಮೂಲಭೂತವಾದ ಕೊರತೆಯನ್ನು ನೀಗಿಸುವಂತಹದ್ದು. ಮಕ್ಕಳು ಹಾಗೂ ಪೋಷಕರ ಇಚ್ಛೆಗೆ ಅನುಗುಣವಾಗಿ ಭಾಷಾ ಮಾಧ್ಯಮದ ಆಯ್ಕೆಯ ಅವಕಾಶ ಕಲ್ಪಿಸುವ ಹಾಗೂ ಕನ್ನಡದೊಂದಿಗೆ ಇಂಗ್ಲಿಷ್ ಅನ್ನೂ ಬೋಧಿಸಲು ಸಮರ್ಥರಾಗುವಂತೆ ಶಿಕ್ಷಕರನ್ನು ತರಬೇತುಗೊಳಿಸುವ ಗ್ಯಾರಂಟಿಯು ಆಶಯ ಮತ್ತು ವಾಸ್ತವ ಎರಡನ್ನೂ ಗುರ್ತಿಸುವ ಪ್ರಯತ್ನವಾಗಿದೆ. ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ (ಕೆಪಿಎಸ್) ಸುತ್ತಮುತ್ತಲಿನ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ವಾಹನ ಸೌಕರ್ಯ ಒದಗಿಸುವ ಮೂರನೇ<br />ಗ್ಯಾರಂಟಿ, ಶಾಲೆಯಿಂದ ಹೊರಗುಳಿಯು<br />ವವರ ಸಂಖ್ಯೆಯನ್ನು ಕನಿಷ್ಠಗೊಳಿಸಲಿದೆ. ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಕಲಿಕೆಗೆ ಅವಕಾಶ, ಕಂಪ್ಯೂಟರ್ ಶಿಕ್ಷಕರ ನೇಮಕಾತಿ ಮತ್ತು ಮೂರನೇ ತರಗತಿಯಿಂದ ಯಾಂತ್ರಿಕ ಬುದ್ಧಿಮತ್ತೆಯನ್ನು ಪರಿಚಯಿಸುವ ನಾಲ್ಕನೇ ಗ್ಯಾರಂಟಿಯು ಹೊಸಕಾಲಕ್ಕೆ ಮಕ್ಕಳನ್ನು ಸಜ್ಜುಗೊಳಿಸಲು ಅಗತ್ಯ<br />ವಾದುದು. ಕಲೆ, ಸಂಗೀತ, ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಶಿಕ್ಷಕರನ್ನು ನೇಮಿಸುವ ಹಾಗೂ ಬೋಧನೇತರ ಕೆಲಸಗಳಿಗೆ ಪ್ರತ್ಯೇಕ ಸಿಬ್ಬಂದಿಯನ್ನು ಒದಗಿಸುವ ಐದು ಮತ್ತು ಆರನೇ ಗ್ಯಾರಂಟಿಗಳು ಬೋಧನೆ ಮತ್ತು ಆಡಳಿತಾತ್ಮಕ ಹೊಣೆಗಾರಿಕೆಯ ನಡುವೆ ಸಮತೋಲನ ಸಾಧಿಸುವ ಉದ್ದೇಶ ಹೊಂದಿವೆ. ಏಳನೇ ಗ್ಯಾರಂಟಿಯು ಪಾಠಗಳನ್ನು ಆಧರಿಸಿದ ಮೌಲ್ಯಮಾಪನ ಮತ್ತು ಎರಡು ತಿಂಗಳಿಗೊಮ್ಮೆ ಪೋಷಕ–<br />ಶಿಕ್ಷಕರ ಸಭೆಯನ್ನು ಕಡ್ಡಾಯಗೊಳಿಸುವ ಮೂಲಕ ಶೈಕ್ಷಣಿಕ ವ್ಯವಸ್ಥೆಯನ್ನು ಹೆಚ್ಚು ಜವಾಬ್ದಾರಿಯುತಗೊಳಿಸುವ ಉದ್ದೇಶ ಹೊಂದಿದೆ. ಭವಿಷ್ಯದಲ್ಲಿ ಉದ್ಯೋಗ ದೊರೆಯುವುದಕ್ಕೆ ಪೂರಕವಾಗುವಂತೆ ಶಾಲಾ ಹಂತದಿಂದಲೇ ಮಕ್ಕಳಿಗೆ ಕೌಶಲಾಧಾರಿತ ತರಬೇತಿಯ ಭರವಸೆಯು ಸರ್ಕಾರದ ಕೊನೆಯ ಗ್ಯಾರಂಟಿಯಾಗಿದೆ. ಈ ಎಂಟು ಖಾತರಿಗಳ ಮೂಲಕ ರಾಜ್ಯದ ಸರ್ಕಾರಿ ಶಾಲೆಗಳನ್ನು ಮೂರು ವರ್ಷಗಳ ಅವಧಿಯಲ್ಲಿ ದೇಶದಲ್ಲೇ ಅತ್ಯುತ್ತಮ ಶಾಲೆಗಳನ್ನಾಗಿಸುವ ಗುರಿ ಸರ್ಕಾರದ್ದಾಗಿದೆ.</p>.<p>ಶೈಕ್ಷಣಿಕ ಸುಧಾರಣೆಗೆ ಸಂಬಂಧಿಸಿದಂತೆ ಈ ವರ್ಷದ ದಾಖಲೆ ಪ್ರಮಾಣದ ಫಲಿತಾಂಶಗಳು ಸರ್ಕಾರಕ್ಕೆ ಉತ್ಸಾಹ ತುಂಬಿದಂತಿವೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ <br />ಶೇ 94.10ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಪಿಯು ಫಲಿತಾಂಶ ಶೇ 86.48ರಷ್ಟಿದೆ. ವಿಶೇಷವಾಗಿ, ಸರ್ಕಾರಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಾಧನೆ ಗಮನಾರ್ಹ<br />ವಾಗಿದೆ. ಗ್ರಾಮೀಣ ಶಾಲೆಗಳು ನಗರ ಪ್ರದೇಶಗಳ ಶಾಲೆಗಳಿಗೆ ಸ್ಪರ್ಧೆಯೊಡ್ಡುವಂತೆ ಉತ್ತಮ ಪ್ರದರ್ಶನ ನೀಡಿವೆ. ಅತ್ಯಂತ ಹಿಂದುಳಿದ ವರ್ಗಗಳ ಮಕ್ಕಳಿಗೆ ಶಿಕ್ಷಣ ನೀಡುವ ವಸತಿ ಶಾಲೆಗಳು ಕೂಡ ಉತ್ತಮ ಸಾಧನೆ ಮಾಡಿವೆ. ಕಳೆದ ವರ್ಷ ಶೇ 57.11ರಷ್ಟು ಫಲಿತಾಂಶ ದಾಖಲಿಸಿದ್ದ ಸರ್ಕಾರಿ ಪದವಿಪೂರ್ವ ಕಾಲೇಜುಗಳು ಈ ಬಾರಿ ಶೇ 78.72ರಷ್ಟು ಗಮನಾರ್ಹ ಯಶಸ್ಸು ದಾಖಲಿಸಿವೆ. ನೂರಕ್ಕೆ ನೂರು ಫಲಿತಾಂಶ ಪಡೆದಿರುವ ಕಾಲೇಜುಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಬಹುಶಃ ಇದೇ ಮೊದಲ ಬಾರಿಗೆ ತನ್ನ ಶಾಲೆಗಳಿಗೆ ಸೇರುವಂತೆ ಮಕ್ಕಳನ್ನು ಆಹ್ವಾನಿಸಿ ಸರ್ಕಾರ ಪೂರ್ಣ ಪುಟದ ಮುಖಪುಟ ಜಾಹೀರಾತುಗಳನ್ನು ನೀಡಿದೆ. ಇಲ್ಲಿಯವರೆಗೆ ಇಂಥ ಜಾಹೀರಾತುಗಳು ಪ್ರತಿಷ್ಠಿತ ಖಾಸಗಿ ವಿದ್ಯಾಸಂಸ್ಥೆಗಳಿಗೆ ಸೀಮಿತವಾಗಿದ್ದವು. </p>.<p>ಶೈಕ್ಷಣಿಕ ಸುಧಾರಣೆಗೆ ಮುಂದಾಗಿರುವ ಸರ್ಕಾರದ ಹುಮ್ಮಸ್ಸು ಹಾಗೂ ಆತ್ಮವಿಶ್ವಾಸ ನಿರಂತರ ಅನುಷ್ಠಾನದ ಮೂಲಕ ಕಾರ್ಯರೂಪಕ್ಕೆ ಬರಬೇಕಾಗಿದೆ. ಈ ಯೋಜನೆಗೆ ಸಂಪನ್ಮೂಲಗಳ ಕೊರತೆ ಆಗದಂತೆ ನೋಡಿಕೊಳ್ಳಬೇಕಾಗಿದೆ. ಇದಕ್ಕಾಗಿ ರಾಜ್ಯ ಬಜೆಟ್ನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮೊತ್ತವನ್ನು ಮೀಸಲಿಡಬೇಕಾಗಿದೆ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಗಳು ಹಾಗೂ ಹಳೆಯ ವಿದ್ಯಾರ್ಥಿಗಳ ಮೂಲಕ ಶಾಲೆಗಳಲ್ಲಿನ ಮೂಲ ಸೌಕರ್ಯಗಳನ್ನು ಬಲಪಡಿಸುವ ಸಾಧ್ಯತೆಗಳನ್ನೂ ಅನ್ವೇಷಿಸಬೇಕಾಗಿದೆ. ಉಚಿತ ಪಠ್ಯಪುಸ್ತಕ, ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರದಂಥ ಜನಪ್ರಿಯ ಕಾರ್ಯಕ್ರಮಗಳಾಚೆಗೆ, ಶೈಕ್ಷಣಿಕ ವ್ಯವಸ್ಥೆಯನ್ನು ಬೇರುಮಟ್ಟದಲ್ಲಿ ಸುಧಾರಿಸಲು ಸರ್ಕಾರ ಮುಂದಾಗಿರುವುದು ಆಶಾದಾಯಕ ಸಂಗತಿ. ಮಹತ್ವಾಕಾಂಕ್ಷಿ ಗುರಿಗಳನ್ನು ಪ್ರಾಮಾಣಿಕವಾಗಿ, ಅಕ್ಷರಶಃ ಜಾರಿಗೊಳಿಸಿದರೆ, ರಾಜ್ಯವು ಅನುಕರಣೀಯ ಮಾದರಿಯೊಂದನ್ನು ದೇಶಕ್ಕೆ ನೀಡಿದಂತಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸರ್ಕಾರಿ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳ ಬಲವರ್ಧನೆಗಾಗಿ ಎಂಟು ‘ಗ್ಯಾರಂಟಿ’ಗಳನ್ನು ಘೋಷಿಸಿರುವ ಕರ್ನಾಟಕ ಸರ್ಕಾರದ ನಡೆ, ಶಿಕ್ಷಣ ಕ್ಷೇತ್ರದ ಸಮಗ್ರ ಸುಧಾರಣೆಗೆ ಸಂಬಂಧಿಸಿದಂತೆ ಸ್ವಾಗತಾರ್ಹ. ಆಮೂಲಾಗ್ರ ಸುಧಾರಣೆಯ ಉದ್ದೇಶ ಹೊಂದಿರುವ ಈ ಮಹತ್ವಾಕಾಂಕ್ಷೆಯ ನಿರ್ಧಾರದ ಅನುಷ್ಠಾನಕ್ಕೆ ಕಾಲಮಿತಿಯನ್ನು ನಿಗದಿಪಡಿಸಿರುವುದು ಸರ್ಕಾರದ ಪ್ರಾಮಾಣಿಕ ಉದ್ದೇಶ ಮತ್ತು ಉತ್ತರದಾಯಿತ್ವದ ಸಂಕೇತದಂತಿದೆ. ಈ ಗ್ಯಾರಂಟಿಗಳು ಬಹುಕಾಲದಿಂದ ಬಾಕಿಯುಳಿದಿದ್ದ ಸಾಂಸ್ಥಿಕ ಕೊರತೆಗಳನ್ನು ನೀಗಿಸುವ ದೃಷ್ಟಿಯಿಂದ ಮಹತ್ವ ಪಡೆದಿವೆ. ಐದನೇ ತರಗತಿಯವರೆಗೆ ತರಗತಿಗೊಬ್ಬರು ಶಿಕ್ಷಕರು ಹಾಗೂ ನಂತರದ ಹಂತದಲ್ಲಿ ವಿಷಯವಾರು ಶಿಕ್ಷಕರನ್ನು ಲಭ್ಯವಾಗಿಸುವುದು ಸೇರಿದಂತೆ, ಶಿಕ್ಷಕರ ಕೊರತೆ ನೀಗಿಸುವ ಮೊದಲನೇ ಗ್ಯಾರಂಟಿಯು ಕಲಿಕೆಯಲ್ಲಿನ ಅತ್ಯಂತ ಮೂಲಭೂತವಾದ ಕೊರತೆಯನ್ನು ನೀಗಿಸುವಂತಹದ್ದು. ಮಕ್ಕಳು ಹಾಗೂ ಪೋಷಕರ ಇಚ್ಛೆಗೆ ಅನುಗುಣವಾಗಿ ಭಾಷಾ ಮಾಧ್ಯಮದ ಆಯ್ಕೆಯ ಅವಕಾಶ ಕಲ್ಪಿಸುವ ಹಾಗೂ ಕನ್ನಡದೊಂದಿಗೆ ಇಂಗ್ಲಿಷ್ ಅನ್ನೂ ಬೋಧಿಸಲು ಸಮರ್ಥರಾಗುವಂತೆ ಶಿಕ್ಷಕರನ್ನು ತರಬೇತುಗೊಳಿಸುವ ಗ್ಯಾರಂಟಿಯು ಆಶಯ ಮತ್ತು ವಾಸ್ತವ ಎರಡನ್ನೂ ಗುರ್ತಿಸುವ ಪ್ರಯತ್ನವಾಗಿದೆ. ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ (ಕೆಪಿಎಸ್) ಸುತ್ತಮುತ್ತಲಿನ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ವಾಹನ ಸೌಕರ್ಯ ಒದಗಿಸುವ ಮೂರನೇ<br />ಗ್ಯಾರಂಟಿ, ಶಾಲೆಯಿಂದ ಹೊರಗುಳಿಯು<br />ವವರ ಸಂಖ್ಯೆಯನ್ನು ಕನಿಷ್ಠಗೊಳಿಸಲಿದೆ. ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಕಲಿಕೆಗೆ ಅವಕಾಶ, ಕಂಪ್ಯೂಟರ್ ಶಿಕ್ಷಕರ ನೇಮಕಾತಿ ಮತ್ತು ಮೂರನೇ ತರಗತಿಯಿಂದ ಯಾಂತ್ರಿಕ ಬುದ್ಧಿಮತ್ತೆಯನ್ನು ಪರಿಚಯಿಸುವ ನಾಲ್ಕನೇ ಗ್ಯಾರಂಟಿಯು ಹೊಸಕಾಲಕ್ಕೆ ಮಕ್ಕಳನ್ನು ಸಜ್ಜುಗೊಳಿಸಲು ಅಗತ್ಯ<br />ವಾದುದು. ಕಲೆ, ಸಂಗೀತ, ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಶಿಕ್ಷಕರನ್ನು ನೇಮಿಸುವ ಹಾಗೂ ಬೋಧನೇತರ ಕೆಲಸಗಳಿಗೆ ಪ್ರತ್ಯೇಕ ಸಿಬ್ಬಂದಿಯನ್ನು ಒದಗಿಸುವ ಐದು ಮತ್ತು ಆರನೇ ಗ್ಯಾರಂಟಿಗಳು ಬೋಧನೆ ಮತ್ತು ಆಡಳಿತಾತ್ಮಕ ಹೊಣೆಗಾರಿಕೆಯ ನಡುವೆ ಸಮತೋಲನ ಸಾಧಿಸುವ ಉದ್ದೇಶ ಹೊಂದಿವೆ. ಏಳನೇ ಗ್ಯಾರಂಟಿಯು ಪಾಠಗಳನ್ನು ಆಧರಿಸಿದ ಮೌಲ್ಯಮಾಪನ ಮತ್ತು ಎರಡು ತಿಂಗಳಿಗೊಮ್ಮೆ ಪೋಷಕ–<br />ಶಿಕ್ಷಕರ ಸಭೆಯನ್ನು ಕಡ್ಡಾಯಗೊಳಿಸುವ ಮೂಲಕ ಶೈಕ್ಷಣಿಕ ವ್ಯವಸ್ಥೆಯನ್ನು ಹೆಚ್ಚು ಜವಾಬ್ದಾರಿಯುತಗೊಳಿಸುವ ಉದ್ದೇಶ ಹೊಂದಿದೆ. ಭವಿಷ್ಯದಲ್ಲಿ ಉದ್ಯೋಗ ದೊರೆಯುವುದಕ್ಕೆ ಪೂರಕವಾಗುವಂತೆ ಶಾಲಾ ಹಂತದಿಂದಲೇ ಮಕ್ಕಳಿಗೆ ಕೌಶಲಾಧಾರಿತ ತರಬೇತಿಯ ಭರವಸೆಯು ಸರ್ಕಾರದ ಕೊನೆಯ ಗ್ಯಾರಂಟಿಯಾಗಿದೆ. ಈ ಎಂಟು ಖಾತರಿಗಳ ಮೂಲಕ ರಾಜ್ಯದ ಸರ್ಕಾರಿ ಶಾಲೆಗಳನ್ನು ಮೂರು ವರ್ಷಗಳ ಅವಧಿಯಲ್ಲಿ ದೇಶದಲ್ಲೇ ಅತ್ಯುತ್ತಮ ಶಾಲೆಗಳನ್ನಾಗಿಸುವ ಗುರಿ ಸರ್ಕಾರದ್ದಾಗಿದೆ.</p>.<p>ಶೈಕ್ಷಣಿಕ ಸುಧಾರಣೆಗೆ ಸಂಬಂಧಿಸಿದಂತೆ ಈ ವರ್ಷದ ದಾಖಲೆ ಪ್ರಮಾಣದ ಫಲಿತಾಂಶಗಳು ಸರ್ಕಾರಕ್ಕೆ ಉತ್ಸಾಹ ತುಂಬಿದಂತಿವೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ <br />ಶೇ 94.10ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಪಿಯು ಫಲಿತಾಂಶ ಶೇ 86.48ರಷ್ಟಿದೆ. ವಿಶೇಷವಾಗಿ, ಸರ್ಕಾರಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಾಧನೆ ಗಮನಾರ್ಹ<br />ವಾಗಿದೆ. ಗ್ರಾಮೀಣ ಶಾಲೆಗಳು ನಗರ ಪ್ರದೇಶಗಳ ಶಾಲೆಗಳಿಗೆ ಸ್ಪರ್ಧೆಯೊಡ್ಡುವಂತೆ ಉತ್ತಮ ಪ್ರದರ್ಶನ ನೀಡಿವೆ. ಅತ್ಯಂತ ಹಿಂದುಳಿದ ವರ್ಗಗಳ ಮಕ್ಕಳಿಗೆ ಶಿಕ್ಷಣ ನೀಡುವ ವಸತಿ ಶಾಲೆಗಳು ಕೂಡ ಉತ್ತಮ ಸಾಧನೆ ಮಾಡಿವೆ. ಕಳೆದ ವರ್ಷ ಶೇ 57.11ರಷ್ಟು ಫಲಿತಾಂಶ ದಾಖಲಿಸಿದ್ದ ಸರ್ಕಾರಿ ಪದವಿಪೂರ್ವ ಕಾಲೇಜುಗಳು ಈ ಬಾರಿ ಶೇ 78.72ರಷ್ಟು ಗಮನಾರ್ಹ ಯಶಸ್ಸು ದಾಖಲಿಸಿವೆ. ನೂರಕ್ಕೆ ನೂರು ಫಲಿತಾಂಶ ಪಡೆದಿರುವ ಕಾಲೇಜುಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಬಹುಶಃ ಇದೇ ಮೊದಲ ಬಾರಿಗೆ ತನ್ನ ಶಾಲೆಗಳಿಗೆ ಸೇರುವಂತೆ ಮಕ್ಕಳನ್ನು ಆಹ್ವಾನಿಸಿ ಸರ್ಕಾರ ಪೂರ್ಣ ಪುಟದ ಮುಖಪುಟ ಜಾಹೀರಾತುಗಳನ್ನು ನೀಡಿದೆ. ಇಲ್ಲಿಯವರೆಗೆ ಇಂಥ ಜಾಹೀರಾತುಗಳು ಪ್ರತಿಷ್ಠಿತ ಖಾಸಗಿ ವಿದ್ಯಾಸಂಸ್ಥೆಗಳಿಗೆ ಸೀಮಿತವಾಗಿದ್ದವು. </p>.<p>ಶೈಕ್ಷಣಿಕ ಸುಧಾರಣೆಗೆ ಮುಂದಾಗಿರುವ ಸರ್ಕಾರದ ಹುಮ್ಮಸ್ಸು ಹಾಗೂ ಆತ್ಮವಿಶ್ವಾಸ ನಿರಂತರ ಅನುಷ್ಠಾನದ ಮೂಲಕ ಕಾರ್ಯರೂಪಕ್ಕೆ ಬರಬೇಕಾಗಿದೆ. ಈ ಯೋಜನೆಗೆ ಸಂಪನ್ಮೂಲಗಳ ಕೊರತೆ ಆಗದಂತೆ ನೋಡಿಕೊಳ್ಳಬೇಕಾಗಿದೆ. ಇದಕ್ಕಾಗಿ ರಾಜ್ಯ ಬಜೆಟ್ನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮೊತ್ತವನ್ನು ಮೀಸಲಿಡಬೇಕಾಗಿದೆ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಗಳು ಹಾಗೂ ಹಳೆಯ ವಿದ್ಯಾರ್ಥಿಗಳ ಮೂಲಕ ಶಾಲೆಗಳಲ್ಲಿನ ಮೂಲ ಸೌಕರ್ಯಗಳನ್ನು ಬಲಪಡಿಸುವ ಸಾಧ್ಯತೆಗಳನ್ನೂ ಅನ್ವೇಷಿಸಬೇಕಾಗಿದೆ. ಉಚಿತ ಪಠ್ಯಪುಸ್ತಕ, ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರದಂಥ ಜನಪ್ರಿಯ ಕಾರ್ಯಕ್ರಮಗಳಾಚೆಗೆ, ಶೈಕ್ಷಣಿಕ ವ್ಯವಸ್ಥೆಯನ್ನು ಬೇರುಮಟ್ಟದಲ್ಲಿ ಸುಧಾರಿಸಲು ಸರ್ಕಾರ ಮುಂದಾಗಿರುವುದು ಆಶಾದಾಯಕ ಸಂಗತಿ. ಮಹತ್ವಾಕಾಂಕ್ಷಿ ಗುರಿಗಳನ್ನು ಪ್ರಾಮಾಣಿಕವಾಗಿ, ಅಕ್ಷರಶಃ ಜಾರಿಗೊಳಿಸಿದರೆ, ರಾಜ್ಯವು ಅನುಕರಣೀಯ ಮಾದರಿಯೊಂದನ್ನು ದೇಶಕ್ಕೆ ನೀಡಿದಂತಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>